ಜೇವರ್ಗಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಕಾರಕ್ಕೆ ಬಂದ ಮೇಲೆ ಅಭಿವೈದ್ಧಿ ಸಂಪೂರ್ಣವಾಗಿ ಕುಂಠಿತಗೊಂಡಿದೆ. ಪ್ರತಿಯೊಂದರಲ್ಲಿ ಪರ್ಸೆಂಟೇಜ್ ಕೊಟ್ಟು ಕಾಮಗಾರಿಗೆ ಅನುಮೋದನೆ ಪಡೆದುಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಧಾನಸಭೆ ಮುಖ್ಯ ಸಚೇತಕ ಹಾಗೂ ಶಾಸಕ ಡಾ.ಅಜಯಸಿಂಗ್ ಹೇಳಿದರು.
ತಾಲೂಕಿನ ತೆಲಗಬಾಳ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೈದ್ಧಿ ಇಲಾಖೆ ವತಿಯಿಂದ ಗ್ರಾಮದ ಸ್ಥಳಿಯ ನಾಲಾಕ್ಕೆ ಅಡ್ಡಲಾಗಿ (ಚಿನ್ನಿಹಳ್ಳ) ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ಪವಿತ್ರ ಸ್ಥಳವಾದ ವಿಧಾನ ಸೌಧ ಈಗ ವ್ಯಾಪಾರಿಕರಣದ ಕೇಂದ್ರ ಸ್ಥಳವಾಗಿದೆ. ಬಿಜೆಪಿ ಸರ್ಕಾರ ಬ್ರಷ್ಠಾಚಾರದ ಪ್ರತಿಕವಾಗಿದೆ. ಕಳೆದ ಗುರುವಾರ ವಿಧಾನಸೌಧದಲ್ಲಿ ಲೋಕೋಪಯೋಗಿ ಇಲಾಖೆ ಇಂಜಿನೀಯರ್ ಬ್ಯಾಗ್ ನಲ್ಲಿ 10 ಲP್ಷÀ ರೂ.ಪತ್ತೆಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಈ ಸರ್ಕಾರದ ವಿರುದ್ದ ಜನ ರೊಚ್ಚಿಗೆದ್ದಿದ್ದಾರೆ. ಅನುದಾನ ನೀಡುವಲ್ಲಿ ಬಿಜೆಪಿ ಶಾಸಕರಿಗೆ ಒಂದು ನ್ಯಾಯ, ಕಾಂಗ್ರೆಸ್ ಶಾಸಕರಿಗೆ ಮತ್ತೊಂದು ನ್ಯಾಯ. ನಮಗೆ 20-25 ಕೋಟಿ ಅನುದಾನ ನೀಡಿದರೇ, ಬಿಜೆಪಿ ಶಾಸಕರಿಗೆ 50-60 ಕೋಟಿ ರೂ.ಅನುದಾನ ನೀಡಲಾಗಿದೆ. ಹಳ್ಳಿಯ ಜನ ಮುಗ್ದರು, ನಮ್ಮಂತಹ ರಾಜಕಾರಣಿಗಳ ಪರಿಸ್ಥಿತಿ ಅವರಿಗೆ ಅರ್ಥವಾಗುವುದಿಲ್ಲ. ಹೀಗಾಗಿ ಅಭಿವೈದ್ಧಿ ಕಾಮಗಾರಿಗಳು ಸ್ವಲ್ಪ ಮಟ್ಟಿಗೆ ಕುಂಠಿತವಾಗಿದೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆಯಲು ಜನ ಸಿದ್ಧವಾಗಬೇಕು. ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಅಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ಈ ಗ್ರಾಮದ ಜನರಿಗೆ ಕೊಟ್ಟ ಮಾತಿನಂತೆ ನಡೆದು ರಸ್ತೆ ನಿರ್ಮಾಣ ಜತೆಗೆ 4.6 ಕೋಟಿ ವೆಚ್ಚದ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲಾಗುತ್ತಿದೆ. ಹಾಲಘತ್ತರಗಾ-ತೆಲಗಬಾಳ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮೌಲಾಲಿ ದರ್ಗಾಕ್ಕೆ 3 ಲP್ಷÀ, ಸರಕಾರಿ ಪ್ರೌಢ ಶಾಲೆಗೆ 30 ಲP್ಷÀ ಹಾಗೂ ಸಿಸಿ ರಸ್ತೆ ಲP್ಷÀ ರೂ.ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ರಾಜಶೇಖರ ಸೀರಿ, ಚಂದ್ರಶೇಖರ ಪುರಾಣಿಕ, ಕಾಶಿರಾಯಗೌಡ ಯಲಗೋಡ, ಗುತ್ತಿಗೆದಾರ ಹುಲಿಕಂಠರಾಯಗೌಡ ಅರಳಗುಂಡಗಿ, ರೇವಣಸಿದ್ದಪ್ಪಗೌಡ ಕಮಾನಮನಿ, ಮಲ್ಲಿಕಾರ್ಜುನ ಹಲಕರ್ಟಿ, ಶರಣಗೌಡ ಹಿರೇಗೌಡ, ಹಯ್ಯಾಳಪ್ಪ ಗಂಗಾಕರ್, ಸಲಿಂ ಕಣ್ಣಿ, ನಾಗಣ್ಣ ಸಾಹು ಹಾಗರಗುಂಡಗಿ, ಬಸವರಾಜ ಜ್ಯೋತೆಪ್ಪಗೋಳ, ಸೀತಾರಾಮ ರಾಠೋಡ, ಅಬ್ದುಲ್ ರಜಾಕ್ ಮಣಿಯಾರ, ಮಹಾಂತಗೌಡ ಪೆÇಲೀಸ್ ಪಾಟೀಲ, ಶಿವು ಪಾಟೀಲ, ಬಸವರಾಜ ಪವಾರ, ಸಿದ್ದಣ್ಣ ಕವಲ್ದಾರ್, ನಿಂಗಣ್ಣ ಸಾಹು ಗಡಗಿ, ಜೆಟ್ಟೆಪ್ಪ ಮಳಗಿ, ಅಬ್ದುಲ್ ರಜಾಕ ಮನಿಯಾರ, ದೇವಿಂದ್ರಪ್ಪಗೌಡ ಪಾಟೀಲ, ಅಫೆÇ್ರೀಜ್ ಯಡ್ರಾಮಿ, ಮಹೇಶ ಸಾಹು ತುಪ್ಪದ್, ಭಗವಂತ್ರಾಯಗೌಡ ಮಾಲಿಪಾಟೀಲ, ಶರಣಗೌಡ ಪಾಟೀಲ ಯತ್ನಾಳ, ಹಳ್ಳೆಪ್ಪಗೌಡ ಜಂಬೇರಾಳ, ಇಮಾಮಸಾಬ ಉಸ್ತಾದ, ಮಹೇಬೂಬ ಪಟೇಲ ಚಿಂಚೋಳಿ, ಶರಣಗೌಡ ಪೆÇಲೀಸ್ ಪಾಟೀಲ ಯತ್ನಾಳ, ಹುಲಿಕಂಟರಾಯ ಅರಳಗುಂಡಗಿ, ಜಟೆಪ್ಪ ಮಳಗಿ, ಅಫೆÇ್ರೀಜ್ ಯಡ್ರಾಮಿ ಸೇರಿದಂತೆ ಸÀಣ್ಣ ನೀರಾವರಿ ಇಲಾಖೆ ಅಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…