ಜೇವರ್ಗಿ: ಯಡ್ರಾಮಿಯಲ್ಲಿ ನಾಳೆ ಜ. 12 ರಂದು ನಡೆಯುವ ಹಿಂದು ಸಮಾವೇಶ ಪ್ರಚೋದನಕಾರಿ ಭಾಷಣಗಳಿಂದ ದೂರವಾಗಿರಲಿ ಎಂದು ಜೇವರ್ಗಿ ಶಾಸಕರು, ವಿರೋಧ ಪಕ್ಷ ಮುಖ್ಯ ಸಚೇತಕರು ಆಗಿರುವ ಡಾ. ಅಜಯ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಹೇಳಿಕೆ ನೀಡಿರುವ ಅವರು ಆಂದೋಲಾ ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ಸದರಿ ಹಿಂದು ಸಮಾವೇಶ ಸಂಘಟಿಸಲ್ಪಟ್ಟಿದೆ. ಆದರೆ ಈ ಸಮಾವೇಶದ ವೇದಿಕೆಯಿಂದ ಯಾವುದೇ ಕೋಮು, ಜನ ಸಮುದಾಯವನ್ನೇ ಗುರಿಯಾಗಿಸಿಕೊಂಡು ಪ್ರಚೋದನಕಾರಿ ಭಾಷಣಗಳು ಯಾವುದೇ ಕಾರಣಕ್ಕೂ ಕೇಳಿ ಬರೋದು ಬೇಡವೆಂದು ಅವರು ಹೇಳಿದ್ದಾರೆ.
ಈಗಾಗಲೇ ತಾವು ಈ ಸಮಾವೇಶದ ಹಿನ್ನೆಲೆಯಲ್ಲಿ ಜಿಲ್ಲಾ ಎಸ್ಪಿ ಇಶಾ ಪಂತ ಅವರೊಂದಿಗೆ ಮಾತುಕತೆ ನಡೆಸಿರುವೆ. ಇದಲ್ಲದೆ ಈಶಾನ್ಯ ವಲಯ ಐಜಿಪಿಯವರೊಂದಿಗೂ ಮಾತುಕತೆ ನಡೆಸಿದ್ದು ಸಮಾವೇಶ ಯಾವುದೇ ಕಾರಣಕ್ಕೂ ಜೇವರ್ಗಿಯ ಜಾತ್ಯತೀತ ಪರಂಪರೆಗೆ ಧಕ್ಕೆ ತರದಿರುವಂತೆ ನೋಡಕೊಳ್ಳಬೇಕೆಂದು ಹೇಳಿದ್ದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲೇ 224 ವಿಧಾನ ಸಬಾ ಕ್ಷೇತ್ರಗಳಲ್ಲಿ ಜೇವರ್ಗಿಗೆ ಜಾತ್ಯತೀತ ಕ್ಷೇತ್ರವೆಂಬ ಖಾತಿ ಇದೆ. ಜೇವರ್ಗಿಯಲ್ಲಾಗಲಿ, ಯಡ್ರಾಮಿಯಲ್ಲಾಗಲಿ ದಶಕಗಳಿಂದಲೂ ಯಾವುದೇ ಜಾತಿ- ಕೋಮಿನ ವಿವಾದ ಇಲ್ಲ. ಜೊತೆಗೇ ಎಲ್ಲಾ ಧರ್ಮದವರು ಸಹಬಾಳ್ವೆ ಮಾಡುತ್ತಿರುವ ಪವಿತ್ರ ತಾಲೂಕೂಗಳೆಂದರೆ ಜೇವರ್ಗಿ ಹಾಗೂ ಯಡ್ರಾಮಿ ಆಗಿವೆ. ಶರಣು, ಸಂತರು, ಸೂಫಿಗಳು, ವಚನಕಾರರ ನಾಡಾಗಿರುವ ಇಲ್ಲಿ ಸಾಮರಸ್ಯ ಬೆಳೆದು ಬಂದಿದೆ. ಅದನ್ನು ಪ್ರಚೋದನಕಾರಿ ಮಾತುಗಳಿಂದ ಮುಕ್ಕಾಗಿಸುವಂತಹ ಕೆಲಸ ಯಾರೂ ಮಾಡೋದು ಬೇಡವೆಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…