ಕಲಬುರಗಿ: ನೆಟೆ ರೋಗದಿಂದ ಹಾನಿಗೊಳಗಾಗಿ ತೀವ್ರ ಸಂಕಷ್ಟದಲ್ಲಿರುವ ತೊಗರಿ ರೈತರಿಗೆ ರಾಜ್ಯ ಸರ್ಕಾರ ಇದೀಗ ಹೆಕ್ಟರ್ಗೆ 10 ಸಾ. ರು ನಂತೆ 2 ಹೆಕ್ಟರ್ಗೆ ಸೀಮಿತವಾಗಿ ಮಾಡಿರುವ ಪರಿಹಾರ ಘೋಷಣೆಯನ್ನೇನೋ ಮಾಡಿದೆ. ಇದರಿಂದ ತೊಂದರೆಯಲ್ಲಿರುವ ರೈತರಿಗೆ ಹೆಚ್ಚಿನ ಅನುಕೂಲವಾಗದು. ಎಕರೆಗೆ 25 ಸಾವಿರ ರು ನಂತೆ ಪರಿಹಾರ ನೀಡಬೇಕು ಎಂಬುದು ರೈತರ ಬೇಡಿಕೆಯಾಗಿತ್ತು. ಈ ಬಗ್ಗೆ ಬೆಳಗಾವಿ ಸದನದಲ್ಲಿಯೂ ಪ್ರಸ್ತಾಪ ಮಾಡಲಾಗಿತ್ತು. ಆದರೀಗ ಎಕರೆಗೆ 4 ಸಾ. ರು ನಂತೆ ಹೆಕ್ಟರ್ಗೆ 10 ಸಾ. ರು ಪರಿಹಾರ ಘೋಷಣೆ ಮಾಡಿರೋದು ರೈತರಿಗೆ ಅನುಕೂಲವಾಗದು, ಆದಷ್ಟು ಬೇಗ ಹೆಚ್ಚುವರಿ ಪರಿಹಾರ ಪ್ಯಾಕೇಜ್ ರಾಜ್ಯ ಸರ್ಕಾರ ಘೋಷಣೆ ಮಾಡಲಿ ಎಂದು ವಿರೋಧ ಪಕ್ಷ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರಾಗಿರುವ ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.
ಹೇಳಿಕೆ ನೀಡಿರುವ ಅವರು ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆ ಸೇರಿದಂತೆ 2 ಲಕ್ಷಕ್ಕೂ ಹೆಚ್ಚು ಹೆಕ್ಟರ್ ತೊಗರಿ ನೆಟೆ ರೋಗಕ್ಕೆ ಹಾಳಾಗಿದೆ. ಇದರಿಂದ ಸಾವಿರಾರು ರೈತ ಕುಟುಂಬಳು ಬೀದಿಗೆ ಬಿದ್ದಿವೆ. ರಾಜ್ಯ ಸರ್ಕಾರದ ಪರಿಹಾರದಿಂದ ರೈತರ ರಸಗೊಬ್ಬರ, ಬೀಜದ ವೆಚ್ಚವೂ ಆಗೋದಿಲ್ಲ. ಸಾವಿರ ಕೋಟಿ ರು ಪರಿಹಾರ ಪ್ಯಾಕೇಜ್ ನೀಡುವಂತೆ ಆಗ್ರಹಿಸಲಾಗಿತ್ತು. ಹೀಗಾಗಿ ಪರಿಹಾರದ ಮೊತ್ತ ಹೆಚ್ಚಿಗೆ ಮಾಡುವ ಮೂಲಕ ರೈತರಿಗೆ ನೆರವಿಗೆ ಬರಬೇಕು. ಈಗಿನಕ್ಕಿಂತ ಹೆಚ್ಚುವರಿ ಪರಿಹಾರ ಘೋಷಣೆ ಮಾಡಲು ಸರ್ಕಾರ ಪುನಃ ಚಿಂತನೆ ಮಾಡಿ ನಿರ್ಣಯಕ್ಕೆ ಬರಬೇಕು ಎಂದು ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.
ಸರ್ಕಾರದ ಪರಿಹಾರ ಗೋಷಣೆ ಕ್ರಮ ಸ್ವಾಗತಿಸುತ್ತೇನೆ. ಆದರೆ ಸರಾಸರಿಯಾಗಿ 1 ಎಕರೆಯಲ್ಲಿ ರೈತರು 4 ರಿಂದ 6 ಕ್ವಿಟಾಂಲ್ ತೊಗರಿ ಬೆಳೆಯುತ್ತಿದ್ದರು. ಸರಾಸಿರ 6, 500 ರು ಗೆ ಕ್ವಿಂಟಾಲ್ ತೊಗರಿ ಎಂದು ಲೆಕ್ಕ ಹಾಕಿದರು 38 ಸಾವಿರ ರುಪಾಯಿ ಲಾಭ ರೈತರದಾಗುತ್ತಿತ್ತು. ಹಾಳಾಗಿರುವ ತೊಗರಿಗೆ ರೈತರ ಲೆಕ್ಕದಂತೆ 38 ಸಾವಿರ ಬೇಡ, ಕೊನೆ ಪಕ್ಷ 25 ಸಾವಿರ ರುಪಾಯಿ ಎಕರೆಗಾದರೂ ನೀಡಲು ಸರ್ಕಾರ ಮುಂದಾಗಲಿ. ರೈತರ ಸಂಕಟ- ನೋವು ಅರಿತು ರೈಪರ ನಿಲುವಿಗೆ ಮುಂದೆ ಬರಲಿ ಎಂದೂ ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…