37ನೇ ಪತ್ರಕರ್ತರ ಸಮ್ಮೇಳನ ಯಶಸ್ಸಿಗೆ ಕಾರಣ

  • ಶಿವಾನಂದ ತಗಡೂರು

ಬಸವನಾಡು, ಗುಮ್ಮಟದ ಬೀಡಾದ ವಿಜಯಪುರದಲ್ಲಿ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ 37ನೇ ಪತ್ರಕರ್ತರ ಸಮ್ಮೇಳನದ ಯಶಸ್ಸಿಗೆ ಕಾರಣವಾದ ಎಲ್ಲಾ ಪತ್ರಕರ್ತರಿಗೂ ಅನಂತಾನಂತ ನಮನಗಳು —

ಬಸವನಾಡು, ಗುಮ್ಮಟದ ಬೀಡು ವಿಜಯಪುರದಲ್ಲಿ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ (ಕೆಯುಡಬ್ಲ್ಯೂಜೆ) ಸಂಘಟಿಸಿದ್ದ 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನವು ಹತ್ತು ಹಲವು ‘ಹೊಸ ತುಡಿತ’ಗಳಿಗೆ ನಾಂದಿಯಾಡಿದೆ..!

‘ಸುದ್ದಿ ಮನೆಯ ಒಂದಷ್ಟು ಧಾವಂತಗ’ಳನ್ನು ತೆರದಿಡುವಲ್ಲಿ,
‘ಆತಂಕಗಳನ್ನು ದಾಖಲಿಸುವಲ್ಲಿ’, ‘ತನ್ನೊಳಗಿನ ನೂನ್ಯತೆ’ಗಳಿಗೆ ಕನ್ನಡಿ ಹಿಡಿಯುವಲ್ಲಿ,‌ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಖಂಡಿತವಾಗಿಯೂ 37ನೇ ‘ರಾಜ್ಯ ಪತ್ರಕರ್ತರ ಸಮ್ಮೇಳನ’ ಒಂದು ದಾಪುಗಾಲು ಇಟ್ಟಿದೆ..! ಅಲ್ಲದೇ ಅದಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ನೀವೆಲ್ಲರೂ ಕಾರಣ..!

ಸಮ್ಮೇಳನ ನೆಪದಲ್ಲಿ ಸುದ್ದಿ ಮನೆಯ ನಾನಾ ವಿಭಾಗದಲ್ಲಿ ಕೆಲಸ ಮಾಡುವವರು ‘ಗಡಿ ಜಿಲ್ಲೆ ಐತಿಹಾಸಿಕ ಗುಮ್ಮಟ’ ನಗರಿ‌ಯಲ್ಲಿ ಮುಖಾಮುಖಿಯಾಗಿದ್ದು ಕೂಡ ಇತಿಹಾಸವನ್ನು ಕಾಲಘಟ್ಟದಲ್ಲಿ ಮಹತ್ವದ ಬೆಳವಣಿಗೆಯಾಗಿದೆ..!

‘ವೃತ್ತಿ ನಿರತ ನೈಜ ಪತ್ರಕರ್ತ’ರ ಸಮುದಾಯದಲ್ಲೊಂದು ‘ಆಶಾ ಭಾವನೆ’ಗಳನ್ನು ಚಿಗುರೊಡೆಯಲು, ‘ವೃತ್ತಿ ಬದ್ಧತೆಯ ಆತ್ಮವಿಶ್ವಾಸ’ವನ್ನು ಹೆಚ್ಚಿಸಲು ಒಂದಿಷ್ಟು ಸಾಧ್ಯವಾಗಿದ್ದರೆ, ಅಷ್ಟರ ಮಟ್ಟಿಗೆ ಸಮ್ಮೇಳನ ಸಾರ್ಥಕ ಮತ್ತು ಒಂದು ಯಶಸ್ವಿಯಾಯಿತು ಎಂಬ ಹೆಜ್ಜೆಯು ನಮ್ಮೆಲ್ಲರದು..!

ಹಲವು ವೈರುದ್ಯಗಳ ವಿರುದ್ಧವಾಗಿ ಈಜಬೇಕಾಗಿರುವ ಈ ಸಂದರ್ಭದಲ್ಲಿ ವೃತ್ತಿ ಬಾಂಧವರಿಗೆ ಸಂಘಟನೆಯೇ ಒಂದು ‘ಜೀವ ಸಂಜೀವಿನಿ’ ಎನ್ನುವುದು ಹಲವಾರು ಬಾರಿ ನಿರೂಪಿತವಾಗಿದೆ..!
ಅದನ್ನು ನೀವೆಲ್ಲರೂ ಮತ್ತೆ ಮತ್ತೇ ನಿಜ ಮಾಡುತ್ತಲೇ ಬಂದಿದ್ದೀರಿ. ಅದಕ್ಕಾಗಿ ನಿಮಗೆ ವಂದನೆಗಳು..!

ನಿಜ ಹೇಳಬೇಕು ಎಂದರೆ, ‘ಕೆಯುಡಬ್ಲ್ಯೂಜೆ’ಯ ಮೇಲೆ ನೀವಿಟ್ಟಿರುವ‌ ವಿಶ್ವಾಸಾರ್ಹತೆಯೇ ಸಮ್ಮೇಳನಕ್ಕೊಂದು ಮೆರಗು..!

ದೂರದಲ್ಲಿ ನಿಂತು ಹಾರೈಸಿದ್ದೀರಿ. ಕಷ್ಟದಲ್ಲಿಯೂ ಸಂತೈಸಿದ್ದೀರಿ. ಸಮ್ಮೇಳನ ಅಚ್ಚುಕಟ್ಟಾಗಿ ನಡೆಯಲಿ ಎಂದು ನಿರೀಕ್ಷಿಸಿ ಹರಸಿದವರಿಗೆಲ್ಲಾ ಚಿರ ಋಣಿ ಆಗಿದೆ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ವು..!

ನಾಡಿನ ಉದ್ದಗಲಕ್ಕೂ ಅತ್ಯುತ್ಸಾಹದಿಂದ ನಮ್ಮದೇ ಸಮ್ಮೇಳನ ಎಂದು ಭಾಗಿಯಾಗಿದ್ದ ಪತ್ರಕರ್ತ ಬಾಂಧವರೆಲ್ಲರಿಗೂ ಎಷ್ಟು ಬಾರಿ ಧನ್ಯವಾದ ಹೇಳಿದರೂ ಕಡಿಮೆಯೇ..!

ಲೋಪ ದೋಷಗಳೇನೆ ಇದ್ದರೂ ಒಟ್ಟಾರೆಯಾಗಿ ವೃತ್ತಿಪರ ಬಾಂಧವರ ಭಾವನೆಗಳು, ಬೇಡಿಕೆಗಳು
ಸಮ್ಮೇಳನ ಮೂಲಕ ಅಭಿವ್ಯಕ್ತಗೊಂಡಿವೆ..!

ನಮ್ಮ ಹಕ್ಕೊತ್ತಾಯಗಳು ಆಳುವ ಪ್ರಭುತ್ವವನ್ನು ಪರಿಣಾಮಕಾರಿಯಾಗಿ ತಲುಪಿವೆ. ಮುಖ್ಯಮಂತ್ರಿಗಳು ಇದಕ್ಕೆ ಸಮ್ಮೇಳನದಲ್ಲಿ ನೀಡಿದ ಸ್ಪಂದನೆಯೇ ಸಾಕ್ಷಿಯಾಗಿದೆಯೂ..!

ಇನ್ನೂ ಸಮ್ಮೇಳನದಲ್ಲಿ ಆಯೋಜಿಸಿದ್ದ
ನಾಲ್ಕೂ ಗೋಷ್ಠಿಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ, ಅರ್ಥಪೂರ್ಣವಾಗಿ, ಗುಣಮಟ್ಟದಲ್ಲಿ ನಡೆದಿರುವುದನ್ನು ಸುದ್ದಿ ಮನೆಯೇ ಸಾಕ್ಷೀಕರಿಸಿದೆ..‍!
ಇದು ಸಮ್ಮೇಳನಕ್ಕೆ ಮತ್ತೊಂದು ಹೊಸತನದ ಮೆರಗು ಕೂಡ ಹೌದು..!

ಇನ್ನೂ ಒಂದಷ್ಟು ಸಮ್ಮೇಳನದಲ್ಲಿ ಆಗಬೇಕಿತ್ತು ಎನ್ನುವುದು ನಿರೀಕ್ಷೆ ಸಹಜವಾದದ್ದೇ. ಆದರೆ ಇತಿಮಿತಿಗಳ ನಡುವೆಯೂ ಸಾಧ್ಯವಾದ ಮಟ್ಟಿಗೆ ಸಮ್ಮೇಳನವನ್ನು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ಧೃಡ ಹೆಜ್ಜೆ ಇಟ್ಟು ಸಂಘಟಿಸಿದ ‘ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ’ದ ಅಧ್ಯಕ್ಷ ಸಂಗಮೇಶ ಚೂರಿ ನೇತೃತ್ವದ ಎಲ್ಲಾ ಪದಾಧಿಕಾರಿಗಳಿಗೆ, ಸದಸ್ಯರುಗಳಿಗೆ ನಮ್ಮ ಅನಂತಾನಂತ ನಮನಗಳು ಸಲ್ಲುತ್ತವೆ..!

ಒಳ್ಳೆಯ ನೆನಪುಗಳು ನಿಮ್ಮ ಪಾಲಿಗಿರಲಿ. ಏನೇ ಲೋಪದೋಷಗಳಿದ್ದರೂ ಅವೆಲ್ಲ ನಮ್ಮ ಪಾಲಿಗಿರಲಿ..!

‘ರಾಜ್ಯ ಪತ್ರಕರ್ತರ ಸಮ್ಮೇಳನ’ಕ್ಕೆ ಸಾಕ್ಷಿಯಾದ ಪ್ರತಿಯೊಬ್ಬರಿಗೂ ಅನಂತಾನಂತ ಅಭಿನಂದನೆಗಳು..!

emedialine

Recent Posts

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

52 mins ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

12 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

14 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

15 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

15 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

15 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420