ಬಿಸಿ ಬಿಸಿ ಸುದ್ದಿ

16 ಕೋಟಿ ಬೆಳೆ ವಿಮೆ; 32 ಕೋಟಿ ತೊÀಗರಿ ಪರಿಹಾರ ಯಾವಾಗ?

ಬೆಳೆ ವಿಮೆಯೂ ಇಲ್ಲ ತೊಗರಿ ಪರಿಹಾರವೂ ಇಲ್ಲ

ಆಳಂದ: ತಾಲೂಕಿನ ರೈತರ ಬೆಳೆ ಹಾನಿಯಾದ ಕುರಿತು ಬಾಕಿ 16 ಕೋಟಿ ಬೆಳೆ ವಿಮೆ ಪರಿಹಾರ ಮೊತ್ತ ಹಾಗೂ ಸರ್ಕಾರ ಘೋಷಿಸಿದ ತೊಗರಿ ನೆಟೆರೋಗ ಹಾನಿಗೆ ಸುಮಾರು 32 ಕೋಟಿ ರೂಪಾಯಿ ಪರಿಹಾರ ಬಾರದಿರುವುದು ಸಾವಿರಾರು ರೈತರನ್ನು ಚಿಂತೆಗಿಡು ಮಾಡಿದೆ.

ಪ್ರಸಕ್ತ ಸಾಲಿನಲ್ಲಿ ಬೆಳೆಯನ್ನೇ ಕಳೆದಕೊಂಡ ರೈತರು ವಿಮೆ ಹಾಗೂ ಸರ್ಕಾರದ ಪರಿಹಾರವನ್ನೇ ಕೈಚಾಚುವಂತೆ ಮಾಡಿದೆ. ಆದರೆ ಕಳೆದ ಮುಂಗಾರು ಹಂಗಾಮಿನ ಬೆಳೆ ಹಾನಿ ಪರಿಹಾರ ನೀಡಿದ ಸರ್ಕಾರ ನಂತರ ಘೋಷಿಸಿದ ನೆಟೆ ರೋಗದಿಂದ ಒಣಗಿ ನಷ್ಟವಾದ ತೊಗರಿ ಬೆಳೆಗೆ ಘೋಷಿಸಿದ ಪರಿಹಾರ ಇನ್ನೂ ಕೈಸೇರಿಲ್ಲ. ಅಲ್ಲದೆ, ಬೆಳೆ ವಿಮೆ ಪಾವತಿಸಿದ ರೈತರಿಗೂ ಪರಿಹಾರ ಬಾರದೆ ಇರುವುದು ಸಂಕಷ್ಟಕ್ಕೆ ಸಿಲುಕಿಸಿದೆ.

ಈ ಕುರಿತು ವಿಮೆ ಹಾಗೂ ಪರಿಹಾರ ಯಾವಾಗ ಬರುತ್ತದೆ ಎಂದು ನಿತ್ಯ ಕೃಷಿ, ಕಂದಾಯ, ವಿಮಾ ಕಚೇರಿಗೆ ರೈತರು ಎಡತಾಕಿ ಹಾಕಿ ಸುಸ್ತಾಗಿ ಹೋಗಿದ್ದಾರೆ.

ಈಗಾಗಲೇ ಪ್ರಕೃತಿ ವಿಕೋಪದಡಿ ತಾಲೂಕಿನಲ್ಲಿ ಜುಲೈ ತಿಂಗಳಲ್ಲಿ ಹೆಚ್ಚಿನ ಮಳೆಯಿಂದ ಕಳೆದುಕೊಂಡ ಸೋಯಾ, ಹೆಸರು, ಉದ್ದು 38 ಸಾವಿರ ರೈತರು ಪ್ರಧಾನ ಮಂತ್ರಿ ಫಸಲು ಭಿಮಾ ವಿಮೆ ಪಾವತಿಸಿ ಬೆಳೆ ಹಾನಿಯಾದ ಮೇಲೆ ಕಂಪನಿಗೆ ದೂರು ಸಲ್ಲಿಸಿದ್ದಾರೆ. ಆದರೆ ಇದುವರೆಗೂ ಕೃಷಿ ಇಲಾಖೆಯ ಮಾಹಿತಿಯಂತೆ 12599 ರೈತರಿಗೆ ಮಾತ್ರ ವಿಮೆಯ 8.15ಕೋಟಿ ರೂಪಾಯಿ ಮಾತ್ರ ರೈತರ ಖಾತೆಗೆ ಜಮಾಗೊಂಡಿದೆ. ಇನ್ನೂ 25 ಸಾವಿರ ರೈತರಿಗೆ ವಿಮಾ ಪರಿಹಾರ ಮೊತ್ತ ಬರುವುದು ಬಾಕಿ ಉಳಿದುಕೊಂಡಿದೆ. ಹೀಗಾಗಿ ರೈತರು ಸಂಬಂಧಿತ ಕಚೇರಿಗಳಿಗೆ ಅಲೆದಾಡಿ ಆಡಳಿತ ವ್ಯವಸ್ಥೆಯ ಮೇಲೆ ಆಕ್ರೋಶ ಹೊರಹಾಕತೊಡಗಿದ್ದಾರೆ.
ಅಲ್ಲದೆ, ಈಗಾಗಲೇ ಬೆಳೆ ಕಟಾವು ಪ್ರಯೋಗದಿಂದ ಸಿಗುವಂತಹ ವಿಮೆ ಪರಿಹಾರ ಹೆಸರು, ಉದ್ದು, ಸೋಯಾಭಿನ್ ಬೆಳೆ ಕಟಾವು ಅವಧಿ ಮೂರುವರೆ ತಿಂಗಳಾದರು ಸಹ ಹಾನಿಯಾದ ಬೆಳೆಗೆ ವಿಮಾ ಪರಿಹಾರ ಮೊತ್ತ ದೊರೆಯದೆ ಇರುವುದು ರೈತ ಸಮುದಾಯಕ್ಕೆ ನಿರಾಸೆ ಮೂಡಿಸಿದೆ.
ಮತ್ತೊಂದಡೆ ರಾಜ್ಯ ಸರ್ಕಾರ ತೊಗರಿ ನೆಟೆರೋಗಕ್ಕೆ ಎಕರೆ 10 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದೆ ಆದರೆ. ಇನ್ನೂ ಈ ಕುರಿತು ಸಂಬಂಧಿತ ಕಚೇರಿಗೆ ಯಾವುದೇ ಆದೇಶ ನೀಡದೆ ಇರುವುದು ಪರಿಹಾರ ಯಾವ ಆಧಾರದ ಮೇಲೆ ಮತ್ತು ಯಾವಾಗ ನೀಡುವರು ಎಂಬುದು ತೊಗರಿ ಹಾನಿಗೊಳಗಾದ ರೈತರಿಗೆ ದಿನಗಳೆಯುವಂತೆ ಮಾಡಿದೆ.

ತೊಗರಿ ನೆಟೆ ರೋಗದ ಪರಿಹಾರದ ಕುರಿತು ಕೃಷಿ, ಕಂದಾಯ ಇಲಾಖೆಗೆ ಸರ್ಕಾರದ ಯಾವುದೇ ನಿರ್ದೇಶನವೇ ಬಂದಿಲ್ಲ. ಹೀಗಾಗಿ ನೆಟೆರೋಗದ ಪರಿಹಾರಕ್ಕೆ ಸಂತ್ರಸ್ತ ರೈತರು ಬಕಪಕ್ಷಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ.

ಸಿಎಂ ಗಮನಕ್ಕೆ: ತೊಗರಿ ನೆಟೆರೋಗ ಪರಿಹಾರ ನೀಡಲು ಮುಖ್ಯಮಂತ್ರಿಗಳು ತಾಲೂಕಿಗೆ ಸುಮಾರು 32 ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಹಣ ಬಿಡುಗಡೆ ಆಗಲಿದೆ. ಈಗಾಗಲೇ ಕೃಷಿ ಇಲಾಖೆಯಿಂದ ಸರ್ವೇ ಕೈಗೊಳ್ಳಲಾಗಿದೆ. ರೈತರ ಖಾತೆಗಳಿಗೆ ಪರಿಹಾರದ ನೀಡುವುದು ಮತ್ತು ಬೆಳೆ ವಿಮೆ ಕುರಿತು ವಿಳಂಬವಾಗುತ್ತಿರುವ ಕುರಿತು ಸಿಎಂ ಗಮನಕ್ಕೆ ತಂದು ಹಣ ಜಮಾಗೊಳಿಸಲು ಶ್ರಮಿಸುವೆ. ಮುಂಗಾರು ಹಂಗಾಮಿನಲ್ಲೂ ಬೆಳೆ ಹಾನಿಗೂ ಸರ್ಕಾರ ಈಗಾಗಲೇ ಪರಿಹಾರ ನೀಡಿ ರೈತರಿಗೆ ಸ್ಪಂದಿಸಿದೆ. ಸುಭಾಷ ಆರ್. ಗುತ್ತೇದಾರ ಶಾಸಕರು ಆಳಂದ.

ರೈತರಿಗೆ ಸರ್ಕಾರ ಮೋಸ ಮಾಡಿದೆ: ಬಿ.ಆರ್. ಪಾಟೀಲ್ ಮಾಜಿ ಶಾಸಕರು, ಆಳಂದ.

ಜಿಲ್ಲೆಯ ತೊಗರಿ ಸೇರಿ ಇನ್ನುಳಿದ ಎಲ್ಲಾ ಬೆಳೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಇದಕ್ಕೆ ಪರಿಹಾರ ನೀಡಲು ಆಗ್ರಹಿಸಿ ಹಲವಾರು ಹೋರಾಟಗಳು ನಡೆದಿವೆ. ರಾಜ್ಯಾದ್ಯಂತ ಪ್ರಸಕ್ತ ಸಾಲಿನಲ್ಲಿ ಸುಮಾರು 11 ಲಕ್ಷ ಹೆಕ್ಟರ್ ತೊಗರಿ ಬಿತ್ತನೆಯಾಗಿದ್ದು, ಅದರಲ್ಲಿ ಕಲಬುರಗಿ ಒಂದೇ ಜಿಲ್ಲೆಯಲ್ಲಿ ಸರಿಸುಮಾರು 5.30 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ ಅಂದರೆ ರಾಜ್ಯಾದ್ಯಂತ ಬೆಳೆಯುವ ತೊಗರಿ ಪ್ರದೇಶದ ಪೈಕಿ ಶೇಕಡ 50% ರಷ್ಟು ತೊಗರಿ ಬೆಳೆ ಕಲಬುರಗಿ ಜಿಲ್ಲೆ ಒಂದರಲ್ಲಿಯೇ ಬೆಳೆಯುತ್ತಾರೆ. ಆದಕಾರಣ ತೊಗರಿ ನಮ್ಮ ಜಿಲ್ಲೆಯ ಆರ್ಥಿಕ ಬೆಳೆಯೂ ಆಗಿದೆ.

ಸದರಿ ತೊಗರಿ ಬೆಳೆಯನ್ನು ರೈತರು ನಂಬಿಕೊಂಡು ಬ್ಯಾಂಕುಗಳಿಂದ, ಸಹಕಾರಿ ಸಂಸ್ಥೆಗಳಿಂದ ಸಾಲ ಪಡೆದು ಬೀಜ, ಗೊಬ್ಬರ ತಂದು ಬಿತ್ತನೆ ಮಾಡಿದ್ದಾರೆ. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ರೈತ ಕಷ್ಟಪಟ್ಟು ಬಿತ್ತನೆ ಮಾಡಿದ ಬೆಳೆಗಳೆಲ್ಲವೂ ಪ್ರಕೃತಿ ವಿಕೋಪದಿಂದ ಸಂಪೂರ್ಣವಾಗಿ ನಾಶವಾಗಿರುವುದರಿಂದ ರೈತ ಇಂದು ಕಂಗಾಲಾಗಿದ್ದಾನೆ. ಇಂತಹ ಸಂಕಷ್ಟದ ಸಮಯದಲ್ಲಿ ರೈತರ ಹಿತಾಸಕ್ತಿ ಕಾಪದದೆ, ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ದಾಮ್ ದುಪ್ಪಟ್ಟು ಮಾಡುವುದಾಗಿ ಹೇಳಿ, ಬೆಳೆದ ಬೆಳೆಗಳಿಗೆ ವೈಜ್ಞಾನಿಕ ರೀತಿಯಿಂದ ಬೆಂಬಲ ಬೆಲೆ ನೀಡದೆ ಈ ಡಬಲ್ ಇಂಜಿನ್ ಸರ್ಕಾರ ಸಂಕಷ್ಟದಲ್ಲಿರುವ ರೈತರಿಗೆ ರೂ 2000/-, 3000/-, 4000/-, 5000/- ಪರಿಹಾರ ನೀಡುವ ಮೂಲಕ ರೈತರನ್ನು ಬೀದಿಗೆ ತಂದು ನಿಲ್ಲಿಸಿಬಿಟ್ಟಿದೆ.

ಇನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ನೇಟೆ ರೋಗದಿಂದ ಹಾಳಾಗಿರುವ ತೊಗರಿ ಬೆಳೆಗೆ ಬಿಡಿಗಾಸು ಪರಿಹಾರ ನೀಡಿಲ್ಲ. ಆದರೆ ಪ್ರಧಾನಿ ಮೋದಿಯವರ ಆತ್ಮೀಯ ಗೆಳೆಯ ಅದಾನಿ ಯವರ ಒಡೆತನದ ಯೂನಿವರ್ಸಲ್ ಸೊಂಪೆÇವಿಮಾ ಕಂಪನಿಗೆ ಜಿಲ್ಲೆಯ ಬೆಳೆ ವಿಮೆ ಮಾಡುವ ಜವಾಬ್ದಾರಿ ಕೊಡಲಾಗಿದ್ದು, ರೈತರ ತಮ್ಮ ಬೆಳೆ ಹಾಳಾಗಿರುವ ಕುರಿತು ದೂರುಸಲ್ಲಿಸಿದ್ದರು, ಆದರೆ ಪರಿಹಾರ ಮಾತ್ರ ಭಿಕ್ಷಾ ರೂಪದಲ್ಲಿ ರೂ 2000, 3000, 4000 ರಂತೆ ನೀಡಿದ್ದಾರೆ, ಇನ್ನೂ ಶೇ 60% ರೈತರಿಗೆ ಬಿಡಿಗಾಸು ಸಿಕ್ಕಿಲ್ಲ. ಅದಾನಿ ಒಡೆತನದ ಯೂನಿವರ್ಸಲ್ ಸೊಂಪೆÇಕಂಪನಿ ರೈತರಿಗೆ ಸಂಪೂರ್ಣವಾಗಿ ಮೋಸ ಮಾಡಿದೆ, ಇನ್ನೂ ಸಹಾಯಕ್ಕೆ ಬರಬೇಕಾದ ರಾಜ್ಯ ಸರ್ಕಾರ ಇದ್ದು ಸತ್ತಂತಿದೆ, ಭ್ರμÁ್ಟಚಾರ ಮುಗಿಲು ಮುಟ್ಟಿದೆ.- ಬಿ.ಆರ್. ಪಾಟೀಲ್ ಮಾಜಿ ಶಾಸಕರು, ಆಳಂದ.

emedialine

Recent Posts

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಚುನಾವಣೆ 25ರಂದು

ಕಲಬುರಗಿ: ಆ. 25 ರಂದು ನಡೆಯಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ 27 ಸ್ಥಾನಗಳಿಗೆ (…

25 mins ago

ಬೀದಿ ಬದಿ ವ್ಯಾಪಾರಸ್ಥರಿಗೆ ಮೂಲಭೂತ ಸೌಕರ್ಯ ಒದಗಿಸಲು ಮೇಯರ್‍ ಗೆ ಮನವಿ

ಕಲಬುರಗಿ : ನಗರದ ಬೀದಿ ಬದಿಯಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಗೆ ಈಗಾಗಲೇ ಪಾಲಿಕೆಯಿಂದ ನೀಡಿರುವ ಹಳೆ ಜೈಲ್ ಸೂಪರ…

14 hours ago

ನಾರಿ ನ್ಯಾಯ ಸಮ್ಮಾನ್ ಕಾರ್ಯಕ್ರಮ

ಕಲಬುರಗಿ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ…

14 hours ago

ಬಾಂಗ್ಲಾದೇಶದ ಹಿಂದೂಗಳ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಶಹಾಬಾದ: ಬಾಂಗ್ಲಾದೇಶದ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಿಂಸಾತ್ಮಕ ದೌರ್ಜನ್ಯ, ಅತ್ಯಾಚಾರಗಳನ್ನು ಖಂಡಿಸಿ ವಿಶ್ವಹಿಂದೂ ಪರಿಷತ್ ವತಿಯಿಂದ ಮಂಗಳವಾರ ನಗರದ…

14 hours ago

ಹಿಂದುಳಿದ ಸಮುದಾಯಗಳ ಆಶಾಕಿರಣವಾಗಿದ್ದರು ದೇವರಾಜ ಅರಸ್

ಶಹಾಬಾದ: ಹಿಂದುಳಿದ ವರ್ಗಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಹಿಂದುಳಿದ ಸಮುದಾಯಗಳ…

14 hours ago

ವೈದ್ಯೆಯ ಮೇಲಿನ ಅತ್ಯಾಚಾರ – ಕೊಲೆ ಖಂಡಿಸಿ ಎಐಡಿವೈಒ ಪ್ರತಿಭಟನೆ

ಶಹಾಬಾದ: ಕೊಲ್ಕತ್ತಾದ ಸರ್ಕಾರಿ ಆರ್. ಜಿ. ಕರ್ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವೈಧ್ಯೆಯ ಮೇಲಿನ ಅತ್ಯಾಚಾರ ಕೊಲೆ ಹಾಗೂ ಪ್ರತಿಭಟನಾಕಾರರ…

14 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420