ಯಾದಗಿರಿ: ಸರಕಾರಿ ಶಾಲೆಯ ಮಕ್ಕಳಿಗಾಗಿ ನಾವೆಲ್ಲರೂ ನಮ್ಮ ನಮ್ಮ ದಿನನಿತ್ಯದ ಪಾಠಾಗಳಾಚೆಗೆ ಕರೆದೊಯ್ಯೂವ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು, ಶಿಕ್ಷಕರಾದವರು ಪಾಠ ಮಾಡುವುದು ಸಾಮಾನ್ಯ ಆದರೆ ಪಾಠಗಳ ಜೊತೆಗೆ ಜೀವನ ಸಾಧನೆಯ ಹಾದಿಯನ್ನು ಪ್ರಮಾಣಿಕತೆಯನ್ನು ಕಲಿಸಬೇಕು. ಇಂದು ಸರಕಾರಿ ಪ್ರೌಢಶಾಲೆ ಕಂದಕೂರಿನಲ್ಲಿ ಶಿಕ್ಷಕಿ ಮಧುಮತಿ ಸಿಂಗೆ ಅವರು ಅತೀ ಕಡಿಮೆ ಸಮಯದಲ್ಲಿ ತಮ್ಮ ಸ್ವಂತ ಹಣದಲ್ಲಿ ವಿಜ್ಞಾನ ಪ್ರಯೋಗಾಲಯ ಕಟ್ಟಿದ್ದು ಶ್ಲಾಘನೀಯ ಕೆಲಸವಾಗಿದೆ. ಇಂತಹ ಸೇವೆಯ ಮನೋಭಾವವಿರುವ ಶಿಕ್ಷಕರ ಸಂಖ್ಯೆ ಹೆಚ್ಚಾಗಲಿ ಪ್ರತಿಯೊಬ್ಬ ಶಿಕ್ಷಕರಿಗೆ ಮಧುಮತಿ ಸಿಂಗೆ ಮಾದರಿಯಾಗಿದ್ದಾರೆ ಎಂದು ವೇದಿಕೆಯ ಮೇಲೆ ಶಿಕ್ಷಕಿಗೆ ಸನ್ಮಾನಿಸಿ ಪ್ರಶಂಸೆಯನ್ನು ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಯಾದಗಿರಿ ಜಿಲ್ಲಾಧಿಕಾರಿಗಳು ಇಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರಕಾರಿ ಪ್ರೌಢಶಾಲೆ ಕಂದಕೂರ ಇಲ್ಲಿ ವಿಜ್ಞಾನ ಪ್ರಯೋಗಾಲ ಉದ್ಘಾಟನೆ ಮಾಡಿ ಮಾತನಾಡಿದರು. ಮಕ್ಕಳ ಪರೀಕ್ಷೆಗಳು ಹತ್ತಿರ ಬಂದಿದ್ದು ಎಲ್ಲರೂ ಓದಿನ ಕಡೆಗೆ ಗಮನ ಕೊಡಬೇಕು. ಶಿಕ್ಷಕರೆಲ್ಲರೂ ಚೆನ್ನಾಗಿ ಪಾಠ ಮಾಡಬೇಕು. ಇವತ್ತಿನ ವಿಜ್ಞಾನ ಪ್ರಯೋಗಾಲವನ್ನು ಸರಿಯಾಗಿ ಬಳಕೆ ಮಾಡಬೇಕು. ಇಲ್ಲಿನ ಶಾಲೆಯ ಎಲ್ಲಾ ಶಿಕ್ಷಕರು ಮುಖ್ಯಗುರುಗಳು ಮಕ್ಕಳು ಅಭಿನಂದನೆಗೆ ಅರ್ಹರು ಎಂದು ಪ್ರೋತ್ಸಾಹಕ ನುಡಿಗಳನ್ನು ಆಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕಿ ಮಧುಮತಿಯವರು ಬದುಕಲ್ಲಿ ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ ಕಲಿಕಾ ಆಸಕ್ತಿಯನ್ನು ಹುಟ್ಟುಹಾಕುವ ಸೂತ್ರದಾರನೆ ಶಿಕ್ಷಕ. ನಾನು ಈ ಶಾಲೆಗೆ ಸೇರಿದ ಮೊದಲಬಾರಿಗೆ ಬಂದಾಗ ವಿಜ್ಞಾನ ಪ್ರಯೋಗಾಲಯದ ಕೊರತೆಯನ್ನು ಕಂಡು ನಾನು ಪಾಠಮಾಡುವುದಕ್ಕೆ ಕಷ್ಟವಾಗುತ್ತಿತ್ತು. ಮಕ್ಕಳಿಗೆ ವಿಜ್ಞಾನ ಹೇಳಿಕೊಡುವಾಗ ಪ್ರೋಗಾಲಯದ ಕೊರತೆ ಕಂಡು ಈ ಶಾಲೆಯ ಮಕ್ಕಳಿಗಾಗಿ ಏನಾದರು ಮಾಡಲೇಬೇಕು ಎಂಬ ಹಠತೊಟ್ಟು ನನಗೆ ಬರುವ ಸಂಬಳದಲ್ಲಿ ಪ್ರತಿತಿಂಗಳು ಉಳಿತಾಯ ಮಾಡಿ ಈ ಪ್ರಯೋಗಾಲಯವು ಶಾಲೆಯ ಹಾಗೂ ಊರಿನ ಎಲ್ಲರ ಸಹಕಾರ ಪಡೆದು ಇಂದು ಉದ್ಘಾಟನೆಯಾಗುತ್ತಿರುವುದು ಸಂತೋಷ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿ ಮಾತನಾಡಿದ ಉಪನಿರ್ದೇಶಕರು ಶಾಂತಗೌಡ ಪಾಟೀಲ್ ಅವರು ಮಕ್ಕಳಿಗೆ ವಿಜ್ಞಾನ ಪ್ರಯೋಗಾಲಯ ಅತ್ಯಂತ ಅವಶ್ಯಕವಾಗಿದೆ. ಶಾಲೆಯಲ್ಲಿ ಶಿಕ್ಷಕರೊಬ್ಬರೂ ಶಾಲೆಯಲ್ಲಿ ತಮ್ಮ ಸ್ವಂತ ಹಣದಿಂದ ಇಂತಹ ಕೆಲಸ ಮಾಡಿದ್ದು ಮಾದರಿಯಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಇಂತಹ ಹೊಸ ಹೊಸ ಪ್ರಯತ್ನಗಳು ಆಗುತ್ತಿರುವುದಕ್ಕೆ ಸಂತೋಷವಿದೆ ಮಧುಮತಿ ಟೀಚರ್ ಗೆ ಇಲಾಖೆ ಅಭಿನಂದಿಸಿ ಅವರ ಜೊತೆಗೆ ಪ್ರಯೋಗಾಲಯದ ಅಭಿವೃದ್ಧಿಗಾಗಿ ಕೈಜೋಡಿಸುತ್ತದೆ ಎಂದರು.
ಮುಖ್ಯ ಅಥಿತಿಯಾಗಿ ಆಗಮಿಸಿ ಮಾತನಾಡಿದ ಪ್ರಜ್ಞಾ ಫೌಂಡೇಷನ್ ನ ನಿರ್ದೇಶಕ ಕೆ.ಎಂ.ವಿಶ್ವನಾಥ ಮರತೂರ, ಮಧುಮತಿ ಶಿಕ್ಷಕರ ಇವತ್ತಿನ ಈ ಪ್ರಯೋಗಾಲಯದ ಕನಸು ಹಲವು ವರ್ಷಗಳದ್ದು, ಒಬ್ಬ ಶಿಕ್ಷಕ ತರಗತಿ ಕೋಣೆಯಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಪ್ರಯೋಗಾಲಯ ಮಾದರಿಯಾಗಿದೆ. ಸ್ವಂತ ಹಣದಲ್ಲಿ ಶಾಲೆಗಾಗಿ ಕೆಲಸ ಮಾಡಲು ಮಕ್ಕಳ ಮೇಲಿನ ಪ್ರೇಮ, ನೌಕರಿ ಮೇಲಿನ ಜವಾಬ್ದಾರಿ ಎದ್ದು ತೋರಿಸುತ್ತದೆ. ಶಾಲೆಯ ಮೇಲಿರುವ ಅವರ ಕಾಳಿಜಿ ಇವತ್ತಿನ ಎಲ್ಲಾ ಶಿಕ್ಷಕರು ಮಾದರಿಯಾಗಿದೆ. ನಾವೆಲ್ಲರೂ ಅವರೊಂದಿಗೆ ಕೈಜೋಡಿಸಿ ಇನ್ನಷ್ಟು ಪ್ರಯೋಗಾಲಯ ಅಭಿವೃದ್ಧಿಗಾಗಿ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಶಿಕ್ಷಕರಾದ ವಿನೋದಕುಮಾರ ಗುಡಿ ಮಾತನಾಡಿ ನಮ್ಮ ಶಾಲೆಯಲ್ಲಿ ಇಂದು ಉದ್ಘಾಟನೆಯಾಗುತ್ತಿರುವುದು ಬಹುದಿನಗಳ ಕನಸು ಈ ಪ್ರಯೋಗಾಲಯದ ಹಿಂದೆ ನಮ್ಮೆಲ್ಲರದ್ದು ಅತ್ಯಂತ ದೊಡ್ಡ ಶ್ರಮವಿದೆ. ಶಿಕ್ಷಕರಾದ ನಾವುಗಳು ನಮ್ಮ ನಮ್ಮ ಕರ್ಯವ್ಯದ ಜೊತೆಗೆ ಮಕ್ಕಳಿಗಾಗಿ ಒಂದಿಷ್ಟು ಸಮಯ ಮೀಸಲಿಟ್ಟು ತೊಡಗಿಸಿಕೊಂಡು ಕಲಿಸಬೇಕಿದೆ. ವಿಜ್ಞಾನ ಪ್ರಯೋಗಾಲಯಕ್ಕಾಗಿ ಹಗಲು ರಾತ್ರಿ ಶ್ರಮಿಸಿರುವ ಶಾಲೆಯ ನಾವೆಲ್ಲರೂ ಇಂದು ಸಂಭ್ರಮದಿಂಧ ಜಿಲ್ಲಾಧಿಕಾರಿ ಉದ್ಘಾಟನೆ ಮಾಡಿದ್ದು ನಮ್ಮೆಲ್ಲರ ಭಾಗ್ಯ ಇದನ್ನು ಶಾಲೆಯ ಎಲ್ಲಾ ಸಿಬ್ಬಂದಿಗಳು ಹಾಗೂ ಮಕ್ಕಳು ಜವಾಬ್ದಾರಿಯಿಂದ ಮುನ್ನಡೆಸೋಣ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳಾದ ಎಸ್.ಎಂ. ಬೂತಾಲ್ ಅವರು ಅಧ್ಯಕ್ಷತೆ ವಹಿಸಿದ್ದರು. ಗುರುಮಠಕಲ್ ತಹಶೀಲ್ದಾರ್ ಮೋಸಿನ್ ಅಹಮದ್, ಕಂದಕೂರನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹಮದ್ ಅಲಿ ಜಮಾದಾರ್, ಕಂದಕೂರನ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗಾರಾಜ್ ವಡ್ಡರ್, ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ, ಫಕೀರಸಾಬ್ , ಹಾಗೂ ಸದಸ್ಯರು ಶಾಲೆಯ ಸಿಬ್ಬಂದಿಗಳು ಹಾಜರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…