ಕಲಬುರಗಿ: ಬಂಜಾರಾ ಸಮಾಜಕ್ಕೆಅನ್ಯಾಯವಾಗಿದ್ದನ್ನು ವಿರೋಧಿಸಿ ಸಂಸದಡಾ.ಉಮೇಶಜಾಧವ್‍ಅವರುರಾಜೀನಾಮೆ ನೀಡಿ ಹೊರ ಬರಲಿ ಎಂದು ಮಾಜಿ ಸಚಿವ ಬಾಬುರಾವಚವ್ಹಾಣ  ಆಗ್ರಹಿಸಿದರು.

ಜಾಧವ್‍ಅವರಿಗೆ ಬಂಜಾರಾ ಸಮಾಜದ ಮೇಲೆ ಅಭಿಮಾನವಿಲ್ಲ. ಸ್ವಹಿತಾಸಕ್ತಿ ಮನೋಭಾವನೆಅವರಲ್ಲಿದೆ.ಸಮಾಜದ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆ.ನಿಜವಾದಅಭಿಮಾನವಿದ್ದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

ರಾಜ್ಯ ಬಿಜೆಪಿ ಸರ್ಕಾರ  ಅಸಂವಿಧಾನಿಕವಾದ ಒಳ ಮೀಸಲಾತಿಜಾರಿಗೆತರುವ ಮೂಲಕ ಬಂಜಾರಾ ಸಮಾಜವನ್ನು ಮೂಲೆಗುಂಪು ಮಾಡುವ ಹುನ್ನಾರ ಮಾಡುತ್ತಿದೆ. ಒಳ ಮೀಸಲಾತಿಜಾರಿಕುರಿತುಅಸೆಂಬ್ಲಿಯಲ್ಲಿಚರ್ಚಿಸದೆ, ಉಪ ಸಮಿತಿಯಲ್ಲಿ ನಿರ್ಣಯಕೈಗೊಂಡಿದೆ. ಉಪ ಸಮಿತಿಯಲ್ಲಿ ಸಚಿವ  ಪ್ರಭುಚವ್ಹಾಣರುಇದ್ದರು. ಅವರಿಗಾದರೂ ಸಮಾಜದ ಮೇಲೆ ಅಭಿಮಾನ ಬೇಡವೇ.ಸ್ವಲ್ಪವು ವಿರೋಧಿಸದೆ ಸಮ್ಮಿತಿ ನೀಡಿ ಬಂಜಾರಾ ಸಮಾಜಕ್ಕೆಅನ್ಯಾಯ ಮಾಡಿದ್ದಾರೆಎಂದರು.

ದೇಶದಲ್ಲಿಅಸ್ಪಶ್ಯತೆ  ಆಚರಣೆ ನಿμÉೀಧವಿದ್ದರೂ ಬಿಜೆಪಿ ಸರ್ಕಾರ ಸ್ಪರ್ಶ ಮತ್ತುಅಸ್ಪರ್ಶ ಎಂಬ ತಾರತಮ್ಮೆ ಮಾಡುವ ಮೂಲಕ ವರ್ಗಿಕರಣ ಮಾಡುತ್ತಿರುವುದು  ಅಸಂವಿಧಾನಿಕವಾಗಿದೆ. ಇದರಿಂದ  ಪರಿಶಿಷ್ಠ ಜಾತಿ,ಪರಿಶಿಷ್ಟ ಬುಡಕಟ್ಟುಗಳ ಐಕ್ಯತೆಗೆಧಕ್ಕೆಉಂಟಾಗಿದೆ. ದಲಿತರನ್ನು ಒಡೆದಾಳುವ ನೀತಿಅನುಸರಿಸುತ್ತಿದೆಎಂದುಸೋಮವಾರ ಸುದ್ದಿಗೋಷ್ಠಿಯಲ್ಲಿಆರೋಪಿಸಿದರು.

ಸರ್ಕಾರ ಹಿಂಬಾಗಿಲಿನಿಂದ ಸದಾಶಿವ ಆಯೋಗದ ವರದಿ ಜಾರಿ ಮಾಡಲು ಮುಂದಾಗಿದೆ.ಕೂಡಲೇ ಈ ಅನ್ಯಾಯವನ್ನು ಸರಿಪಡಿಸಬೇಕು.ಒಳ ಮೀಸಲಾತಿಜಾರಿಗೆ ಸಂವಿಧಾನದಲ್ಲಿಅವಕಾಶವಿಲ್ಲ. ಈ ಕುರಿತುಆಂಧ್ರ ಪ್ರದೇಶದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರಿಕೋರ್ಟ್ ಸ್ಪಷ್ಟಆದೇಶ ನೀಡಿದೆ.ಸುಪ್ರಿಕೋರ್ಟಿನಆದೇಶ ಉಲ್ಲಂಘಿಸಿ ರಾಜ್ಯ ಸರ್ಕಾರಒಳಮೀಸಲಾತಿ ಜಾರಿಗೆತರಲು ಮುಂದಾಗಿದೆಎಂದರು.ಬಂಜಾರಾ ಸಮಾಜದ ಮುಖಂಡರಾದ ಬಾಬು ಹೊನ್ನಾ ನಾಯಕ, ಭರತಚವ್ಹಾಣ, ದಿಲೀಪ ನಾಯಕ ಸುದ್ದಿಗೋಷ್ಠಿಯಲ್ಲಿದ್ದರು.

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

4 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

4 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

4 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

4 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

4 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420