ಬಿಸಿ ಬಿಸಿ ಸುದ್ದಿ

ಕಸಾಪದಿಂದ ಬಸವ ಉತ್ಸವ 21 ರಂದು

ಕಲಬುರಗಿ: ಪ್ರಸ್ತುತ ಜಗತ್ತು ಇಂದು ಎದುರಿಸುತ್ತಿರುವ ಹೆಚ್ಚಿನ ಸಮಸ್ಯೆಗಳಿಗೆ ಹನ್ನೇರಡನೆಯ ಶತಮಾನದ ಬಸವಾದಿ ಶರಣರ ವಚನಗಳಲ್ಲಿ ಪರಿಹಾರವಿದೆ. ಈ ಕಾರಣದಿಂದ ಸರ್ವ ಸಮಾನತೆಯ ತತ್ವಗಳನ್ನು ಒಳಗೊಂಡಿರುವ ಬಸವ ತತ್ವಗಳನ್ನು ಪ್ರಚುರಪಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು `ಬಸವ ಉತ್ಸವ-2023′ ವಚನ ಸಾಂಸ್ಕøತಿಕ ಸಂಭ್ರಮವನ್ನು ಏಪ್ರೀಲ್ 21 ರಂದು ಬೆಳಗ್ಗೆ 10.45 ಕ್ಕೆ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ರವಿವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಉತ್ಸವದ ವಿವರ ನೀಡಿದ ತೇಗಲತಿಪ್ಪಿ, 12ನೇ ಶತಮಾನದ ಬಸವಾದಿ ಶರಣರು ತಮ್ಮ ಕಾಯಕದ ಅನುಭವವನ್ನು ಅನುಭಾವದ ಮಟ್ಟಕ್ಕೇರಿಸಿ ವಚನ ಸಾಹಿತ್ಯ ರಚಿಸಿದರು. ಜಾತಿ ವರ್ಣಗಳ ಕಟ್ಟಳೆಗಳ ಮೂಲಕ ಹಾಕಿದ್ದ ನಿಗೂಢ ದಿಗ್ಭಂಧನವನ್ನು ವಚನಗಳ ಮೂಲಕ ಕಿತ್ತೆಸಿದರು. ಇಡೀ ಮಾನವ ಕುಲ ಒಂದಾಗಿ ಸಕಲ ಜೀವಾತ್ಮರಿಗೂ ಲೇಸೆಸುವ ಹಾಗೆ ಬದುಕಿಗೆ ಮುನ್ನುಡಿ ಹಾಕಿದ ಕೀರ್ತಿ ಶರಣರಿಗೆ ಸಲ್ಲುತ್ತದೆ. ಹಾಗಾಗಿ, ವಚನಗಳಲ್ಲಿನ ತಿರುಳನ್ನು ಇಂದಿನ ಹೊಸ ಪೀಳಿಗೆಗೆ ಮುಟ್ಟಿಸುವ ಪ್ರಯತ್ನ ಈ ಕಾರ್ಯಕ್ರಮದ್ದಾಗಿದೆ.

ಸ್ತ್ರೀ ಗೌರವಕ್ಕೊಂದು ಗರಿ ಮೂಡಿಸುವ ನಿಟ್ಟಿನಲ್ಲಿ ವಿಧವಾ ತಾಯಂದಿರಿಗೆ ಉಡಿ ತುಂಬುವ ಇನ್ನೊಂದು ಪಕ್ಕಾ ವೈಚಾರಿಕ ಕಾರ್ಯಕ್ರಮವೊಂದನ್ನು ರೂಪಿಸಲಾಗಿದೆ ಮತ್ತು ಬಸವ ಉತ್ಸವದಂಗವಾಗಿ ಮಕ್ಕಳು-ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಕನ್ನಡ ಭವನದಲ್ಲಿ ಏ.20 ರಂದು ಬೆಳಗ್ಗೆ 10.45  ಕ್ಕೆ  ಏರ್ಪಡಿಸಲಾಗಿದೆ.

ಕಳೆದ ಐದಾರು ದಶಕಗಳಿಂದ ಶರಣ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆಳಂದ ತಾಲೂಕಿನ ಜಾವಳಿ ಗ್ರಾಮದವರಾದ ಶರಣಬಸಪ್ಪ ಬಿ ಪಾಟೀಲ ಜಾವಳಿ ಅವರನ್ನು `ಬಸವಜ್ಯೋತಿ’ ವಿಶೇಷ ಗೌರವ ಪುರಸ್ಕಾರವನ್ನು ನೀಡಲಾಗುವುದು.

ಅಂದು ಬೆಳಗ್ಗೆ 10.45 ಕ್ಕೆ ಜರುಗುವ ಉತ್ಸವಕ್ಕೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಅವರು ಚಾಲನೆ ನೀಡಲಿದ್ದು, ವಚನ ಸಾಹಿತ್ಯ ಮತ್ತು ಭಾರತದ ಸಂವಿಧಾನ ಕುರಿತು ಚಿಂತಕ ಬಸಣ್ಣಾ ಸಿಂಗೆ, ವಚನ ವೈಚಾರಿಕ ದರ್ಶನ ಕುರಿತು ಜಯಶ್ರೀ ಚಟ್ನಳ್ಳಿ ವಿಚಾರ ಮಂಡನೆ ಮಾಡಲಿದ್ದಾರೆ. ಕಸಾಪ ದ ನಿಕಟಪೂರ್ವ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಡಾ. ಬಾಬುರಾವ ಶೇರಿಕಾರ, ಸಂತೋಷ ಪಾಟೀಲ, ಪೂರ್ಣಿಮಾ ಜಾನೆ ಅವರು ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ.

ನಂತರ ನಡೆಯುವ ಪೊರೆ ಕಳಚುವ ಪರಿ ಎಂಬ ವಿಶೇಷ ಕವಿಗೋಷ್ಠಿಗೆ ಹಿರಿಯ ಲೇಖಕ ಬಸವ ಪಾಟೀಲ ಜಾವಳಿ ಚಾಲನೆ ನೀಡಲಿದ್ದು, ಪ್ರಾಧ್ಯಾಪಕ ಪ್ರೊ ವೆಂಕಣ್ಣ ಡೊಣ್ಣೇಗೌಡರ್ ಅಧ್ಯಕ್ಷತೆ ವಹಿಸಲಿದ್ದಾರೆ. ದೇವೇಂದ್ರಪ್ಪ ಕಪನೂರ, ರವಿಕುಮಾರ ಸರಸಂಬಿ, ಮಲ್ಲಿನಾಥ ಪಾಟೀಲ ಕಾಳಗಿ,  ಗಂಗಾಧರ ಮುನ್ನೋಳ್ಳಿ ವೇದಿಕೆ ಮೇಲಿರುವರು.

ಶ್ರೀಮಂತ ಚಿಂಚನಸೂರ, ಶಿವಾನಂದ ಅಣಜಗಿ, ಶ್ರೀಮಂತ ಅಟ್ಟೂರ, ಡಾ. ಕೆ.ಗಿರಿಮಲ್ಲ, ಡಾ. ರಾಜಶೇಖರ ಮಾಂಗ್, ವಿಶಾಲಾಕ್ಷಿ ಮಾಯಣವರ್, ಎಂ.ಎನ್.ಸುಗಂಧಿ, ರೇಣುಕಾ ಹಿರೇಗೌಡರ್, ಸುವರ್ಣಾ ಪೊದ್ದಾರ, ರವೀಂದ್ರ ಬಿ.ಕೆ., ಕಸ್ತೂರಿಬಾಯಿ ರಾಜೇಶ್ವರ, ಶಾಂತಾ ಮಾಲೆ, ಶಕುಂತಲಾ ಪಾಟೀಲ, ಡಾ. ಗೀತಾ ಪಾಟೀಲ ಸೇರಿ ಅನೇಕ ಕವಿಗಳು ವೈಚಾರಿಕ ಜಾಗೃತಿಯ ಕವನಗಳನ್ನು ವಾಚಿಸಲಿದ್ದಾರೆ.

ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸೂರ್ಯಕಾಂತ ಡುಮ್ಮಾ, ಶಾರದಾ ಬುಕ್ಕೇಗಾರ, ಡಾ. ಸುಜಾತಾ ಎಸ್. ಮಾಳಗಿ, ಬಸವರಾಜ ಜಮಾದಾರ, ಸೋಮಣ್ಣ ಕೊಳಾರ, ಸಂಗೀತಾ ಕಿಣಗಿ, ಸೈಯದ್ ಗೆಸುದರಾಜ್ ಖಾದ್ರಿ, ಬಸವರಜ ಭಾವಿ, ಬಸವರಜ ಕುಮಸಿ (ಪಾಸ್ವಾನ್) ವಿಶ್ವನಾಥ ಮಂಗಲಗಿ, ಮಹಾದೇವಿ ಕೆಸರಟಗಿ, ಬಾಬುರಾವ ಜನಕಟ್ಟಿ ಡೊಂಗರಗಾಂವ ಅವರನ್ನು ಸತ್ಕರಿಸಲಾಗುವುದು.

ಕಲಾವಿದರಾದ ಕಲ್ಯಾಣಪ್ಪ ಬಿರಾದಾರ, ಬಾಬುರಾವ ಪಾಟೀಲ, ಸಿದ್ಧರಾಮ ಹಂಚನಾಳ ಅವರಿಂದ ವಚನ ವೈಭವ ಜರುಗಲಿದೆ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ಶಿವರಾಜ ಎಸ್. ಅಂಡಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪದಾಧಿಕಾರಿಗಳಾದ ಕಲ್ಯಾಣಕುಮಾರ ಶೀಲವಂತ, ಶಿಲ್ಪಾ ಜೋಶಿ ರಾಜೇಂದ್ರ ಮಾಡಬೂಳ, ರವೀಂದ್ರಕುಮಾರ ಭಂಟನಳ್ಳಿ ಇತರರು ಉಪಸ್ಥಿತರಿದ್ದರು.

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

19 mins ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

22 mins ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

25 mins ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

1 hour ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

2 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

5 hours ago