ಬಿಸಿ ಬಿಸಿ ಸುದ್ದಿ

ಮಾಲಿಕಯ್ಯ ಗುತ್ತೇದಾರ ನಾಮಪತ್ರ ನಾಳೆ; ಸಹೋದರನ ಮನವೊಲಿಸುವೇ

ಸಹೋದರನ ಮನವೊಲಿಕೆಗೆ ಯತ್ನ; ನನ್ನ ಸಹೋದರ ನಿತಿನ್ ಗುತ್ತೇದಾರ ಅಫಜಲಪುರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ನಿರ್ಧಾರದ ಹಿನ್ನೆಲೆಯಲ್ಲಿ ಅಣ್ಣನಾದ ನಾನು ಆತನ ಮನೆಗೆ ಹೋಗಿ ಇದೊಂದು ಬಾರಿ ನನಗೆ ಬೆಂಬಲ ಕೊಡು ಎಂದು ವಿನಂತಿಸಿಕೊಂಡಿದ್ದೇನೆ. ಮುಂದೆ ನೀನೇ ನನ್ನ ಉತ್ತರಾಧಿಕಾರಿ ಎಂದು ತಿಳಿ ಹೇಳಿ ಬಂದಿರುವೆ. ಇನ್ನೂ ಮೂರ್ನಾಲ್ಕು ದಿನ ಸಮಯವಿದೆ. ಪಕ್ಷದ ವರಿಷ್ಠರು ನಿತಿನ್ ಮನವೊಲಿಸಲು ಸಂಪರ್ಕದಲ್ಲಿದ್ದಾರೆ ಎಂದು ಮಾಲಿಕಯ್ಯ ಗುತ್ತೇದಾರ ತಿಳಿಸಿದರು. – ಶಿವಕಾಂತ್  ಮಹಾಜನ್  ಹಾಗೂ ಅರವಿಂದ್ ಚವ್ಹಾಣ ಅವರ ಪರವಾಗಿ ದೆಹಲಿಗೆ ಹೋಗಿದೆ.

ಕಲಬುರಗಿ: ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ 9ಕ್ಕೂ ಕ್ಷೇತ್ರಗಳ ಪೈಕಿ ಕನಿಷ್ಠ 7 ಕ್ಷೇತ್ರಗಳು ಬಿಜೆಪಿ ಮಡಿಲಿಗೆ ಬೀಳುವುದು ಖಚಿತ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ ತಿಳಿಸಿದರು.

ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳು ಬಿಜೆಪಿ ಪಾಲಾಗಲಿವೆ. ರಾಜ್ಯದಲ್ಲಿ ಸಿಂಗಲ್ ಲಾರ್ಜೆಸ್ಟ್ ಪಾರ್ಟಿಯಾಗಿ ಬಿಜೆಪಿ ಹೊರ ಹೊಮ್ಮಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಏ. 20ರಂದು  ಬಿಜೆಪಿ ಪಕ್ಷದ ಹುರಿಯಾಳು ಆಗಿ ನಾಮಪತ್ರ ಸಲ್ಲಿಸುತ್ತಿದ್ದು, ಮಧ್ಯಾಹ್ನ 2 ಗಂಟೆಗೆ ಬಹಿರಂಗ  ಸಮಾವೇಶ  ನಡೆಯಲಿದೆ. ಸಿಎಂ. ಬಸವರಾಜ ಬೊಮ್ಮಾಯಿ ಸೇರಿ ಪಕ್ಷದ ಹಲವು ಪ್ರನುಖ ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ನಾನು ಈ ಹಿಂದೆ ಆರು ಬಾರಿ ಶಾಸಕನಾಗಿದ್ದೇನೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ತಾಲೂಕಿನ ರೈತರು  ಜನರ  ಪರ  ಇದ್ದೇನೆ ಅವರ ಹೃದಯ ದಲ್ಲಿ ಇದ್ದೇನೆ. ಹೀಗಾಗಿ ಈ ಬಾರಿ ನನ್ನ ಗೆಲವು ಖಚಿತ ಎಂದರು.

ಪ್ರಮುಖರಾದ ಅವ್ವಣ್ಣ ಮ್ಯಾಕೇರಿ, ಸಿದ್ದು ಸಾಲಿಮನಿ, ಶೈಲೇಶ, ರಾಘವೇಂದ್ರ ಕುಲಕರ್ಣಿ, ಮರೆಪ್ಪ, ರೇವಣಪ್ಪ ಪೂಜಾರಿ ಇತರರಿದ್ದರು.

emedialine

Recent Posts

ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ

ಶಹಾಬಾದ: ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದ್ದು, ಖುಷಿಯಿಂದ ಆಟವಾಡಿ ಎಂದು ತಹಸೀಲ್ದಾರ ಜಗದೀಶ ಚೌರ್ ಹೇಳಿದರು. ಅವರು…

3 hours ago

ಪಾಲಿಕೆ ಸದಸ್ಯ ಸಚಿನ್ ಶಿರವಾಳಗೆ ಭೀಮನಗೌಡ ಪರಗೊಂಡ ಸನ್ಮಾನ

ಕಲಬುರಗಿ: ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಮಹಾನಗರದ ವಿದ್ಯಾನಗರ ವಾರ್ಡ್ ದ ಮಹಾನಗರ ಪಾಲಿಕೆಯ ಸದಸ್ಯ ಆಗಿರುವ ಸಚಿನ್ ಶಿರವಾಳ ಅವರು…

4 hours ago

ಕಲಬುರಗಿ ನೂತನ ಪೊಲೀಸ್ ಆಯುಕ್ತರಾಗಿ ಡಾ. ಶರಣಪ್ಪ ಎಸ್.ಡಿ ನೇಮಕ

ಕಲಬುರಗಿ: 2009 ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಡಾ. ಶರಣಪ್ಪ ಎಸ್.ಡಿ ಅವರು ಕಲಬುರಗಿ ನೂತನ ಪೊಲೀಸ್ ಆಯುಕ್ತರಾಗಿ ನಿಯೋಕ್ತಗೊಂಡಿದ್ದಾರೆ.…

5 hours ago

ಪ್ರಾಧ್ಯಾಪಕಿ ಡಾ.ಜಯಶ್ರೀ ಅಗರಖೇಡ್ ಗೆ ಪೆÇ್ರ.ಸತೀಶ್ ಧವನ್ ಪ್ರಶಸ್ತಿ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ ಕಾಲೇಜಿನ ಕಂಪ್ಯೂಟರ್ ಸಾಯಿನ್ಸ್ ಇಂಜಿನಿಯರಿಂಗ (ಸಿಎಸ್‍ಇ) ವಿಭಾಗದ…

7 hours ago

ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ: ಎರಡು ಪದಕಗೆದ್ದ ಲೋಕೇಶ್ ಪೂಜಾರ್

ಕಲಬುರಗಿ: ರಾಜ್ಯಮಟ್ಟದ ಸರ್ಕಾರಿ ನೌಕರರಕ್ರೀಡಾಕೂಟದಈಜು ಸ್ಪರ್ಧೆಯಲ್ಲಿ ಕಲಬುರಗಿಯ ವಿಭಾಗೀಯಆಹಾರ ಪ್ರಯೋಗಾಲಯದ ಹಿರಿಯಆಹಾರ ವಿಶ್ಲೇಷಣಅಧಿಕಾರಿ ಲೋಕೇಶ್ ಪೂಜಾರ್‍ಅವರುಉತ್ತಮ ಪ್ರದರ್ಶನ ನೀಡಿಒಂದು ಬಂಗಾರ…

7 hours ago

ತೊಗರಿ ಬೆಳೆಯಲ್ಲಿ ಗೊಣ್ಣೆ ಹುಳದ ಭಾದೆ ಹತೋಟಿಗೆ ಡಾ. ಮಲ್ಲಪ್ಪ ಅವರಿಂದ ಸಲಹೆ

ಕಲಬುರಗಿ: ತಾಲೂಕಿನಲ್ಲಿ ತೊಗರಿ ಬೆಳೆಗೆ ಅಲ್ಲಲ್ಲಿ ಗೊಣ್ಣೆ ಹುಳದ ಭಾದೆ ಕಂಡು ಬಂದಿದ್ದು ರೈತಾಪಿ ಜನರು ಹತೋಟಿಗೆ ಕೃಷಿ ವಿಜ್ಞಾನ…

7 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420