ಸಹೋದರನ ಮನವೊಲಿಕೆಗೆ ಯತ್ನ; ನನ್ನ ಸಹೋದರ ನಿತಿನ್ ಗುತ್ತೇದಾರ ಅಫಜಲಪುರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ನಿರ್ಧಾರದ ಹಿನ್ನೆಲೆಯಲ್ಲಿ ಅಣ್ಣನಾದ ನಾನು ಆತನ ಮನೆಗೆ ಹೋಗಿ ಇದೊಂದು ಬಾರಿ ನನಗೆ ಬೆಂಬಲ ಕೊಡು ಎಂದು ವಿನಂತಿಸಿಕೊಂಡಿದ್ದೇನೆ. ಮುಂದೆ ನೀನೇ ನನ್ನ ಉತ್ತರಾಧಿಕಾರಿ ಎಂದು ತಿಳಿ ಹೇಳಿ ಬಂದಿರುವೆ. ಇನ್ನೂ ಮೂರ್ನಾಲ್ಕು ದಿನ ಸಮಯವಿದೆ. ಪಕ್ಷದ ವರಿಷ್ಠರು ನಿತಿನ್ ಮನವೊಲಿಸಲು ಸಂಪರ್ಕದಲ್ಲಿದ್ದಾರೆ ಎಂದು ಮಾಲಿಕಯ್ಯ ಗುತ್ತೇದಾರ ತಿಳಿಸಿದರು. – ಶಿವಕಾಂತ್ ಮಹಾಜನ್ ಹಾಗೂ ಅರವಿಂದ್ ಚವ್ಹಾಣ ಅವರ ಪರವಾಗಿ ದೆಹಲಿಗೆ ಹೋಗಿದೆ.
ಕಲಬುರಗಿ: ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ 9ಕ್ಕೂ ಕ್ಷೇತ್ರಗಳ ಪೈಕಿ ಕನಿಷ್ಠ 7 ಕ್ಷೇತ್ರಗಳು ಬಿಜೆಪಿ ಮಡಿಲಿಗೆ ಬೀಳುವುದು ಖಚಿತ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ ತಿಳಿಸಿದರು.
ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳು ಬಿಜೆಪಿ ಪಾಲಾಗಲಿವೆ. ರಾಜ್ಯದಲ್ಲಿ ಸಿಂಗಲ್ ಲಾರ್ಜೆಸ್ಟ್ ಪಾರ್ಟಿಯಾಗಿ ಬಿಜೆಪಿ ಹೊರ ಹೊಮ್ಮಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಏ. 20ರಂದು ಬಿಜೆಪಿ ಪಕ್ಷದ ಹುರಿಯಾಳು ಆಗಿ ನಾಮಪತ್ರ ಸಲ್ಲಿಸುತ್ತಿದ್ದು, ಮಧ್ಯಾಹ್ನ 2 ಗಂಟೆಗೆ ಬಹಿರಂಗ ಸಮಾವೇಶ ನಡೆಯಲಿದೆ. ಸಿಎಂ. ಬಸವರಾಜ ಬೊಮ್ಮಾಯಿ ಸೇರಿ ಪಕ್ಷದ ಹಲವು ಪ್ರನುಖ ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ನಾನು ಈ ಹಿಂದೆ ಆರು ಬಾರಿ ಶಾಸಕನಾಗಿದ್ದೇನೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ತಾಲೂಕಿನ ರೈತರು ಜನರ ಪರ ಇದ್ದೇನೆ ಅವರ ಹೃದಯ ದಲ್ಲಿ ಇದ್ದೇನೆ. ಹೀಗಾಗಿ ಈ ಬಾರಿ ನನ್ನ ಗೆಲವು ಖಚಿತ ಎಂದರು.
ಪ್ರಮುಖರಾದ ಅವ್ವಣ್ಣ ಮ್ಯಾಕೇರಿ, ಸಿದ್ದು ಸಾಲಿಮನಿ, ಶೈಲೇಶ, ರಾಘವೇಂದ್ರ ಕುಲಕರ್ಣಿ, ಮರೆಪ್ಪ, ರೇವಣಪ್ಪ ಪೂಜಾರಿ ಇತರರಿದ್ದರು.