ಟೇಂಗಳಿ ಗ್ರಾಮದಲ್ಲಿ ಅಂಡಗಿ ಪ್ರತಿಷ್ಠಾನ ಉದ್ಘಾಟನೆ ಸತ್ಕಾರ ಸಮಾರಂಭ

ಕಲಬುರಗಿ; ಭಕ್ತಿಯೆಂಬುದು ಬರಿ ಮನುಷ್ಯನ ತಳಮಳವೂ ಅಲ್ಲ ಪುರುಷ ಶಕ್ತಿಯ ಪ್ರಯೋಗ ಹೌದು. ಪುರುಷ ಶಕ್ತಿಯ ಪ್ರಯೋಗವು ಹೌದು, ಭಕ್ತಿಯೆಂಬುದು ತಲೆಯಿಂದ ಕೈಗಳದ್ವಾರ ಹರಿದು ಬರುವ ಆತ್ಮ ಶಕ್ತಿ ಅದನ್ನು ಯುವಕರು ಚೆನ್ನಾಗಿ ಅರಿತುಕೊಂಡು ತಮ್ಮ ಜೀವನದಲ್ಲಿ ಅಳವಡಿಕೊಳ್ಳುವ ಮೂಲಕ ಆ ಶಕ್ತಿಯಿಂದ ಒಳ್ಳೆಯತನ, ಲೋಕೋದ್ಧಾರಕ್ಕಾಗಿ ಉಪಯೋವಾಗಬೇಕೆಂದು ಪೂಜ್ಯ ಶಾಂತಸೋಮನಾಥ ಶಿವಾಚಾರ್ಯರು ಆಶೀವರ್ಚನ ನೀಡಿದರು.

ಟೇಂಗಳಿ ಗ್ರಾಮದಲ್ಲಿ ಶ್ರೀ ಭೀಮೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಅಂಡಗಿ ಪ್ರತಿಷ್ಠಾನ ಟೇಂಗಳಿ ಉದ್ಘಾಟನೆ ಹಾಗೂ ಭಕ್ತಿ ಸೇವೆ ಮಾಡಿ ಕಾರ್ತಿಕ ಮಾಸದ ಭಕ್ತರಿಗೆ ಸನ್ಮಾನಿಸಿ ಮಾತನಾಡುತ್ತ, ಸದಾ ಭಜನೆ, ಧಾರ್ಮಿಕ ಹಾಗು ಸಾಮಾಜಿಕ ಚಟುವಟಿಕೆಗಳಿಂದ ಕೂಡಿದ ದಿ. ಶಿವಶರಣಪ್ಪ ಅಂಡಗಿಯವರ ಜೀವನ ನೆನೆಸುವಂತಹ ಈ ಅಂಡಗಿ ಪ್ರತಿಷ್ಠಾನದ ಧಾರ್ಮಿಕ ಚಟುವಟಿಕೆ ನಾಡಿನಾದ್ಯಂತ ಸೇವೆ ಪಸರಿಸಲಿ ಎಂದು ಹಾರೈಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭೀಮೇಶ್ವರ ದೇವಸ್ಥಾನ ಟ್ರಸ್ಟ ಕಮಿಟಿ ಅಧ್ಯಕ್ಷರಾದ ವಿರೇಶ ವಾಲಿ, ಗ್ರಾಮದ ಹಿರಿಯರಾದ ಸೋಮಶೇಖರ ಸಾಹು ಪಟ್ಟೇದ, ಕನ್ನಡ ಸಾಹಿತ್ಯ ಪರಿಷತ್ತ ಟೇಂಗಳಿ ವಲಯ ಘಟಕದ ಅಧ್ಯಕ್ಷರಾದ ಭೀಮಾಶಂಕರ ಅಂಕಲಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿ ಅಧ್ಯಕ್ಷತೆ ವಹಿಸಿದರು.

ವಿಶ್ವನಾಥ ಬಾಳದೆ ಕಾರ್ಯಕ್ರಮ ನಿರೂಪಿಸಿದರು, ವಿವೇಕಾನಂದ ಬುಳ್ಳಾ ಸ್ವಾಗತಿಸಿದರು, ಗುರುನಂಜಯ್ಯ ಮಠಪತಿ ಪ್ರಾರ್ಥಿಸಿದರು, ರಾಜು ಪಟ್ಟೇದ ವಂದಿಸಿದರು.

ಇದೇ ಸಂದರ್ಭದಲ್ಲಿ ಕಾರ್ತಿಕ ಸೇವಾಕರ್ತರಿಗೆ ಸತ್ಕಾರ : ವರ್ಷದ 12ತಿಂಗಳ ಕಾರ್ತಿಕ ಅಮವಾಸ್ಯೆಯ ಧಾರ್ಮಿಕ ಸೇವೆ ಸಲ್ಲಿಸುತ್ತಿರುವ 12 ಸೇವಾಕರ್ತ ಭಕ್ತರಾದ ನಾಗೇಂದ್ರಪ್ಪ ಬಸ್ತೆ, ವಿರೇಂದ್ರ ಬೀರನ್, ಹಣಮಂತರಾಯ ಬಾಳದೆ, ಶಿವಲೀಲಾ ನಾಗಶೆಟ್ಟಿ, ಶಿವಶರಣಪ್ಪ ತೇಲ್ಕೂರ, ಭೀಮರಾಯ ತುಪ್ಪದ, ಶಿವಕುಮಾರ ನಾಗಶೆಟ್ಟಿ, ವಿರೇಂದ್ರ ವಾಲಿ, ವಿರೇಶ ತೆಲಗಾಣಿ, ಬಸವರಾಜ ಬಾಳದೆ ಎಲ್ಲರಿಗು ಸತ್ಕರಿಸಿ ಪ್ರಶಂಸನಾ ಪ್ರಮಾಣ ಪತ್ರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಚಂದ್ರಶೇಖರ ಎಲೇರಿ, ವಿಶ್ವನಾಥ ಬಾಳದೆ, ಮಹಾದೇವ ಅಷ್ಠಗಿ, ಸಂತೋಷ ಚೇಂಗಟಿ, ಜಗು ಸ್ವಾಮಿ, ಬಸವರಾಜ ಬಾಳದೆ, ವಿಶ್ವನಾಥ ಕುದರಿಕಾರ, ಚಂದ್ರಶೇಖರ ಕಡ್ಲಿ, ಶೇಖರ ತೆಲಗಾಣಿ, ಶ್ರೀಶೈಲ ತಮ್ಮಣಗೌಡ ಹಾಗು ಇತರರು ಉಪಸ್ಥಿತರಿದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

7 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

10 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

10 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

10 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

10 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

10 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420