ಜೇವರ್ಗಿ: ಸ್ವಾಭಿಮಾನಕ್ಕೆ ದಕ್ಕೆ ಬಂದ ಕಾರಣಕ್ಕೆ ಬಿಜೆಪಿ ತೊರೆದು ಬಂದಿದ್ದೇನೆ. ತಾಲ್ಲೂಕಿನ ಪ್ರತಿಯೊಬ್ದರು ಸ್ವಾಭಿಮಾನವನ್ನು ತೊಟ್ಟು ಜೆಡಿಎಸ್ ಪಕ್ಷಕ್ಕೆ ಮತ ಹಾಕಬೇಕು ಎಂದು ಜೆಡಿಎಸ್ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮನವಿ ಮಾಡಿದರು.
ಪಟ್ಟಣದ ರಿಲಾಯನ್ಸ್ ಪೆಟ್ರೋಲ್ ಪಂಪ್ ಹಿಂದುಗಡೆ ಆಯೋಜಿಸಿದ್ದ ಭಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ನಾನು ಶಾಸಕನಾಗಿದ್ದ ಸಂದರ್ಭದಲ್ಲಿಯೂ ಜಾತಿ ಭೇದ ಮಾಡಿಲ್ಲ. ಅಂತೇಯೇ ನನ್ನ ನಾಮಪತ್ರ ಸಲ್ಲಿಸಲು ದಲಿತ ಸಂಘಟನೆˌ ಮಾದಿಗ ಸಮಿತಿˌ ಟಿಪ್ಪು ಸುಲ್ತಾನ ಸೇನೆ ಹಾಗೂ ಕನ್ನಡಪರ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದಾರೆ. ನಮ್ಮನ್ನು ನಂಬಿದ ಕಾರ್ಯಕರ್ತರಿಗೆ ನಾವು ಮೋಸ ಮಾಡಿಲ್ಲ. ಅವರ ಚುನಾವಣೆಯಲ್ಲಿ ಪ್ರಾಣ ಪಣಕ್ಕಿಟ್ಟು ಗೆಲ್ಲಿಸಿಕೊಂಡು ಬಂದಿದ್ದೇವೆ. ಎಲ್ಲ ಜಾತಿ ಜನರ ಜೊತೆಗೆ ಇರುವುದರಿಂದ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಹುಟ್ಟಿದ ದಿನ ಎಪ್ರಿಲ್ 14ರಂದು ಜೆಡಿಎಸ್ ಸೇರಿದ್ದೇನೆ ಎಂದರು.
ತಾಲ್ಲೂಕಿನ ಅಭಿವ್ರದ್ಧಿಗಾಗಿ ಮಲ್ಲಾಬಾದ ಏತ ನೀರಾವರಿˌ ಯಡ್ರಾಮಿ ತಾಲ್ಲೂಕ ಘೋಷಣೆ ಸೇರಿದಂತೆ ಹಲವಾರು ಕೆಲಸಗಳನ್ನು ಮಾಡಿದ್ದೇನೆ. ನಾನು ಯಾವತ್ತು ಜನರ ನಡುವೆ ಇರುವವನು ಆದರೆ ನನಗೆ ಟಿಕೆಟ್ ಕೊಡದಿದ್ದಾಗ ಸ್ವಾಭಿಮಾನ ಮರೆತು ಇರಲು ಸಾಧ್ಯವಾಗಲಿಲ್ಲ ಎಂದರು.
ಈ ವೇಳೆ ರಮೇಶ ಬಾಬು ವಕೀಲˌ ತಾಲ್ಲೂಕ ಅಧ್ಯಕ್ಷ ರೌಫ್ ಹವಾಲ್ದಾರˌ ಯಡ್ರಾಮಿ ತಾಲ್ಲೂಕ ಅಧ್ಯಕ್ಷ ಗೊಲ್ಲಾಳಪ್ಪ ಕಡಿˌ ಶಂಕರ್ ಕಟ್ಟಿ ಸಂಗಾವಿˌ ಎಸ್. ಎಸ್. ಸಲಗರˌ ದಂಡಪ್ಪ ಸಾಹು ಕುರಳಗೇರಿˌ ಸುರೇಶ ಸುಂಬಡˌ ಸಿದ್ದಣ್ಣ ಹೂಗಾರˌ ಬಸವರಾಜ ಪಾಟೀಲ ನರಿಬೋಳˌ ಸಾಯಬಣ್ಣ ದೊಡ್ಮನಿˌ ಸಿದ್ದಣ್ಣ ಹೂಗಾರˌ ಗುರಣ್ಣ ಐನಾಪುರˌ ಶಿವಾನಂದ ಮಾಕಾˌ ನಾನಾಗೌಡ ಅಲ್ಲಾಪುರˌ ದೇವಿಂದ್ರಪ್ಪಗೌಡˌ ಪುಂಡಲಿಕ ಗಾಯಕವಾಡˌ ಚಂದ್ರಕಾಂತ ಕುಸ್ತಿˌ ಸೇರಿದಂತೆ ಇತರರು ಇದ್ಡರು.
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ. ಯಾದಗಿರಿ. ಬೀದರ್. ಕೊಪ್ಪಳ. ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸ್ಲಂ ನಿವಾಸಿಗಳ ಕುಟುಂಬ 1ಲಕ್ಷ…
ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದಲ್ಲಿ ಮಂಗಳವಾರದಂದು, ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ವಿವಿಯ ಧ್ವಜಸ್ಥಂಭದಲ್ಲಿ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಧ್ವಜಾರೋಹಣ…
ಕಲಬುರಗಿ : ಐತಿಹಾಸಿಕ ವಿಶೇಷ ಸಂಪುಟ ಸಭೆ ಯಲ್ಲಿ ಕರ್ನಾಟಕ ವಖ್ಫ್ ಬೋರ್ಡ್ ವತಿಯಿಂದ ರಾಜ್ಯದ ಹದಿನೈದು ಜಿಲ್ಲೆಗಳಲ್ಲಿ ಮಹಿಳಾ…
ಕಲಬುರಗಿ: ಬರುವ ಸೆಪ್ಟೆಂಬರ್ 22 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳೊಂದಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು…
ಕಲಬುರಗಿ: ಅಮೇರಿಕಾದ ಪ್ರವಾಸದಲ್ಲಿ ತಾವು ಯಾರನ್ನೂ ಭೇಟಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು. ಸಚಿವ ಸಂಪುಟದ ಸಭೆಯಲ್ಲಿ ಪಾಲ್ಗೊಳ್ಳಲು…
ಕಲಬುರಗಿ: ನಾಗಮಂಗಲದ ಅಹಿತರ ಘಟನೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು, ತನಿಖಾ ವರದಿ ನಂತರ ಮುಂದಿನ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು…