ತನ್ನ ‘ಲಕ್ಕಿ ಕಾರ್’ನಲ್ಲಿ ಬಂದು ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಅಲ್ಲಂಪ್ರಭು ಪಾಟೀಲ್

ಕಲಬುರಗಿ; ಕಲಬುರಗಿ ದಕ್ಷಿಣದ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಅಲ್ಲಂಪ್ರಭು ಪಾಟೀಲ್ ತಮಗೆ ಈ ಭಾಗದ ಸುಪ್ರಸಿದ್ಧ ಜಿಡಗಾ/ ಮುಗಳಖೋಡ ಮಠದ ಹಿರಿಯ ಗುರುಗಳಾದ ಲಿಂ. ಸಿದ್ರಾಮೇಶ್ವರ ಶ್ರೀಗಳು ಆಶಿರ್ವಾದ ರೂಪದಲ್ಲಿ ಕೊಡುಗೆ ನೀಡಿದ್ದ ಲ್ಯಾನ್ಸರ್ ಕಾರಲ್ಲೇ ಬಂದು ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು.

ಅಲ್ಲಂಪ್ರಭು ಪಾಟೀಲರು ಅಪಾರ ದೈವಭಕ್ತರು. ಅದರಲ್ಲೂ ಆಳಂದ ತಲೂಕಿನಲ್ಲಿರುವ ಜಿಡÀಗಾ ನವ ಕಲ್ಯಾಣ ಮಠದ ಮೇಲೆ, ಅಲ್ಲಿನ ಗುರುಗಳ ಮೇಲೆ ಇವರಿಗೆ ವಿಶೇಷ ನಂಬಿಕೆ ಹಾಗೂ ಭಕ್ತಿ, ಹೀಗಾಗಿಯೇ ಪಾಟೀಲರು ಈ ಮಠಕ್ಕೆ ತುಂಬ ನಡೆದುಕೊಳ್ಳುತ್ತಾರೆ. ಹೀಗಾಗಿ ಜಿಡಗಾ ಮಠದ ಹಿರಿಯರಾದ ಲಿಂಗೈಕ್ಯ ಸಿದ್ರಾಮೇಶ್ವರ ಶ್ರೀಗಳ ಅಪಾರ ಕರುಣೆ ಆಶಿರ್ವಾದ ಇತ್ತು.

ಇದೇ ಕಾರಣದಿಂದಲೇ ಸಿದ್ರಾಮೇಶ್ವರರು 2000 ನೇ ಇಸ್ವಿಯಲ್ಲಿ ಅಲ್ಲಂಪ್ರಭು ಪಾಟೀಲರಿಗೆ ಉತಂಬ ಪರೀತಿ, ಕಾಳಜಿಯಿಂದ ಲ್ಯಾನ್ಸರ್ ಕಾರ್ ಕೊಡುಗೆ ನೀಡಿ ಹರಸಿದ್ದರು. ಇದೇ ಕಾgರನ್ನ ಅಲ್ಲಂಪ್ರಭು ಪಾಟೀಲರ ತಮ್ಮ ಅದೃಷ್ಟದ ಕಾರೆಂದು ತಿಳಿದಿರೋದರಿಂದ ವಿಶೇಷ ಸಂದರ್ಭಗಳಲ್ಲಿ ಇದನ್ನು ಬಳಸುತ್ತಾರೆ. ಅಲ್ಲಂಪ್ರಭು ಪಾಟೀಲರು ಜಿಡಗಾ ಮಠದ ಸದ್ಯದ ಪೀಠಾಧಿಪತಿಗಳಾದ ಡಾ. ಮುರುಘರಾಜೇಂದ್ರ ಸ್ವಾಮೀಜಿಗಳ ಜೊತೆಗೂ ತುಂಬ ಉತ್ತಮ ಒಡನಾಟ ಹೊಂದಿದ್ದಾರೆ.

ಚುನಾವಮೆ ನಾಮಪತ್ರ ಸಲ್ಲಿಕೆಯ ಈ ವಿಶೇಷ ದಿನದಂದು ಹಾಗೂ ಚುನಾವಣೆಯಲ್ಲಿ ಗುರುಗಳು ಹಾಗೂ ಜನರ ಆಶಿರ್ವಾದ ಮುಖ್ಯವಾಗಿರುತ್ತದೆಂದು ಅಲ್ಲಂಪ್ರಭು ಪಾಟೀಲರು ಗುಡಿ- ಗುಂಡಾರಗಳಿಗೆ ದರುಶನ ಪಡೆದು ಬಂದ ನಂತರ ಲ್ಯಾನ್ಸರ್ ಕಾರ್ ಹತ್ತಿ ನಾಮಪತ್ರ ಸಲ್ಲಿಸಿ ಸಾರ್ವಜನಿಕವಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ ಜಿಡಗಾ ಮಠದ ಭಕ್ತರಂತೂ ಅಲ್ಲಂಪ್ರಭು ಪಾಟೀಲರು ತಮ್ಮ ಹಳೆಯ ಲ್ಯಾನ್ಸರ್ ಕಾರಲ್ಲಿ ಕಲಬುರಗಿ ಸಹಾಯಕ ಆಯುಕ್ತರ ಕಚೇರಿಗೆ ಬಂದಿರೋದನ್ನ ಕಂಡು ಜಯಘೋಷ ಹಾಕಿದರು.

emedialine

Recent Posts

ಎಲೇಕ್ಷನ್’ನಲ್ಲಿ ಗಿಮಿಕ್ ಮಾಡಿ ಮತಪಡೆದುಕೊಳ್ಳುವುದು ಮಾತ್ರ ಗೊತ್ತು; ಮಣಿಕಂಠ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…

17 mins ago

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

4 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

10 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

20 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

22 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

22 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420