ಕ್ಷಮಿಸಿ ಬಿಡು
ಅವರಿಗೊಂದೂ ಗೊತ್ತಿಲ್ಲ
ಕ್ಷಮಿಸಿ ಬಿಡೋಣ
ದಾರಿ ತಪ್ಪಿದ ಅರಿಯದ ಕಂದಗಳವು.
ಅವರಜ್ಜ ನಮ್ಮಜ್ಜ ಒಂದೇ ಹುಕ್ಕಾದಲ್ಲಿ
ಎಳೆದ ಝುರಕಿಯ ಹೊಗೆ
ಇನ್ನೂ ಸುಳಿದಾಡುತಿದೆ ಇಲ್ಲೆಲ್ಲ.
ಇದೇ ಜಾತ್ರೆಯಲ್ಲಿ
ಅವರವ್ವನ ಎದೆಯಲಿ ಹುದುಗಿದ
ಚುಕ್ಕಿ ಬಳೆಯಾಸೆಯ ಅರಿತವಳು
ಬಳೆಗಾರತಿ ನನ್ನಮ್ಮಿ ಜಾನ್.
ಅವಳ ಮೃದು ಮುಂಗೈಗೆ
ಇನಿತು ನೋವಾಗದಂತೆ
ಬಳೆಯೊಂದೂ ಚಟ್ಟೆನ್ನದಂತೆ
ಹೂ ಸ್ಪರ್ಷದಂತೆ ಬಳೆ ಮುಡಿಸಿ
ಮುಗುಳ್ನಕ್ಕಿದ್ದಳು ನನ್ನಮ್ಮಿ ಜಾನ್.
ಅವಳೋ ಬಯಸಿದ ಬಣ್ಣದ
ಬಳೆಗಳನ್ನೊಮ್ಮೆ ಸವರಿ ಅಮ್ಮಿಜಾನ್ ಳ ಕಣ್ಣಲ್ಲಿ ಗೆಳೆತನದ ಹೊಳಪು ತರಿಸಿದ್ದು
ಈ ಲಾಠಿ ಹಿಡಿದು ಠಳಾಯಿಸವ ದೇಹಗಳಿಗೇನು ಗೊತ್ತು?
ಕ್ಷಮಿಸಿ ಬಿಡು
ಚರಿತೆ ಅರಿಯದ ದಾರಿ ಬಿಟ್ಟ ಕಂದಗಳು ಅವು.
ನನ್ನ ಮನೆಯ ಚೊಂಗ್ಯಾದ ಘಮಕ್ಕೆ
ಅವರ ಅಂಗಳದ ಕೂಸುಗಳು
ಇತ್ತ ಹೊರಳಿ ಅರಳಿಸಿದ ಅಂಗೈಗೆ
ನನ್ನಮ್ಮಿ ಜಾನ್ ಹೂಮುತ್ತಿನೊಂದಿಗೆ ಗೋಲು ಚಂದಿರನಂಥ ಸಿಹಿ ಸುರಿವ ಚೊಂಗ್ಯಾ ಇಟ್ಟಿದ್ದು ಇವುಗಳಿಗೇನು ಗೊತ್ತು?
ಮತ್ತವರ ಮನೆಯ ಕರಜಿಕಾಯಿ ಕೋಡುಬಳೆಗೆ ಅವರವ್ವ ಹರಿಸಿದ ಒಲವ ಧಾರೆಗೆ ಬೇರೆಂಬ ಭಾವವೆಂದೂ ಬಾರದೆ ಅವಳ ಸೆರಗ ಚುಂಗ್ಹಿಡಿದು ಬಾಲ್ಯ ಕಳೆದಿರುವೆ.
ಜಾತ್ರೆಯಲ್ಲಿ ಬೆಂಡು ಬತ್ತಾಸೆಯ ಸಿಹಿ ಅಂಗಡಿ ತೆರವುಗೊಳಿಸುತ್ತಿರುವ ಇವರಿಗೇನು ಗೊತ್ತು?
ಇವರಪ್ಪ ನನ್ನಪ್ಪ ಇದೇ ಸೂಫಿ-ಸಂತ ಸನ್ನಿಧಾನದಲ್ಲಿ ಲಿಗಿಲಿಗಿ ಧುನಿ ಮುಂದೆ ಚಳ್ಳಾಮು ಝೇಂಕರಿಸಿ ‘ಅಲ್ಲಾ ಶಿವನೇ
ಶಿವನೇ ಅಲ್ಲಾ
ಒಂದೇ ಎಲ್ಲಾ
ನಿನ್ ಬಿಟ್ಟರೆ ಬೇರಿಲ್ಲಾ’
ಕೊರಳೆತ್ತಿ ಹಾಡಿದ ಹಾಡುಗಳ ಪ್ರತಿ ಶಬ್ದಗಳು ಬೆರೆತು ಹೋಗಿವೆ ಗಾಳಿಯಲಿ ಅನವರತ.
ಶಾಲೊಂದು ಹೊದ್ದು ಹೆಗಲಿಗೆ ಬಿಸಿಲ ಬೀದಿ ಸವೆಸುತ ದ್ವೇಷದ ನಶೆಯ ಇವರಿಗೆ
ಬದುಕ ಪ್ರೇಮದ ಹಾಡೆಂಬುದನರಿಯರು.
ಇಷ್ಕ್ ಮೊಹೊಬ್ಬತ್ ಬೆಲೆಯನೇನು ಬಲ್ಲರು? ದಾರಿ ಬಿಟ್ಟ ಮಕ್ಕಳು
ಕ್ಷಮಿಸಿ ಬಿಡು ಇವರನು.
ಅವರು ಹೋಗೆಂದರೆ ನನ್ನನು
ದುಂಡು ಭೂಮಿಯ ಸುತ್ತಿ‌
ಮತ್ತಿಲ್ಲೇ ಬಂದು ನಿಲ್ಲುವೆನು
ಯಾರಪ್ಪನ ಸೊತ್ತೂ ಅಲ್ಲದ
ನೆಲದವ್ವನ ಉಡಿಯಲೇ ಇರುವೆನು.
ಈ ನೆಲದ ಕಣಕಣದಿ ಕರುಳ ಬಳ್ಳಿಯ ಬಂಧವಿದೆ ಸಂಬಂಧವಿದೆ
ನಾನೆಲ್ಲೂ ಹೋಗಲಾರೆ
ಕರುಳ ಕಾವ್ಯದ ಹಾಡು ಕಲಿತವಳು ಕಟ್ಟಿದವಳು.
ಕಣ್ಣಲ್ಲಿ ಆಕ್ರೋಶದ ಕಿಡಿ
ಕೈಯಲ್ಲಿ ಪರಕಿಯರು ಕೊಟ್ಟ ಲಾಠಿ
ಎದೆಯೊಳಗೆ ಸುಳ್ಳು ಶಬ್ದಗಳ ಒಜ್ಜೆ
ದ್ವೇಷದ ಮಾತುಗಳ ಸುರಿಸುವ ನಾಲಗೆ
ಎಲ್ಲ ಎಲ್ಲವು ಅವರದಲ್ಲದವುಗಳೇ.
ದಾರಿ ಬಿಟ್ಟ ಕಂದಗಳು.
ಕ್ಷಮಿಸಿ ಬಿಡು.
ನಾಳೆಗಲ್ಲ
ಇಂದೇ ನಿಜವನರಿವ ದಿನ ಬರುವುದು.
ಕತ್ತಲಂಚಿಗೆ ಹಗಲ ಬೆರಳು ಬೆಳಕ್ಹಿಡಿದು ಬರುವುದು
ಮಗುವಿನ ನಗುವಂತೆ.
ನಾನಿಲ್ಲೇ ಇರುವೆ. ಇದ್ದು ಕಾಯುವೆ
ಬೆಳಕ ಕಂದನ ಮುಗುಳ್ನಗುವಿಗಾಗಿ.

– ಕೆ ನೀಲಾ

emedialine

Recent Posts

ಈಶಾನ್ಯ ಪದವೀಧರ ಚುನಾವಣೆ,ಅಂತಿಮ ಮತದಾನಕ್ಕೆ 1,56,623 ಮತದಾರರು ಅರ್ಹ

ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಗೆ ಜೂನ್ 3 ರಂದು ನಡೆಯುವ ಮತದಾನಕ್ಕೆ ಕ್ಷೇತ್ರದಾದ್ಯಂತ 99,121 ಪುರುಷರು, 57,483…

21 mins ago

ಡೊನೇಷನ್ ಹಾವಳಿಗೆ ಕಡಿವಾಣಕ್ಕೆ ಎಸ್ಎಫ್ಐಯಿಂದ ಶಾಲಾ ಶಿಕ್ಷಣ ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…

3 hours ago

ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಸಂಸ್ಕಾರ ಶಿಬಿರದ ಸಮರೂಪ 21ಕ್ಕೆ

ಕಲಬುರಗಿ : ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಪರ್ಯಂತರ ಜರುಗಿಬಂದ 17ನೇ ವರ್ಷದ…

6 hours ago

ತುರ್ತಾಗಿ ಬರ ಪರಿಹಾರ ಒದಗಿಸಲು ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ ಒತ್ತಾಯ

ಕಲಬುರಗಿ: ರಾಜ್ಯ ರೈತ ಸಮುದಾಯ ಮತ್ತು ಕೃಷಿ ಕಾರ್ಮಿಕರು ತೀವ್ರ ಬರದಲ್ಲಿ ನರಳುತ್ತಿದ್ದಾರೆ. ಆದ್ದರಿಂದ ಸರ್ಕಾರ ಯುದ್ಧೋಪಾದಿಯಲ್ಲಿ ಬರ ಪರಿಹಾರ…

6 hours ago

ಜಂಗಮಶೆಟ್ಟಿ ರಾಜ್ಯ ಮಟ್ಟದ ರಂಗಪ್ರಶಸ್ತಿಗೆ ಆಹ್ವಾನ

ಕಲಬುರಗಿ : ಇಲ್ಲಿನ ರಂಗಸಂಗಮ ಕಲಾವೇದಿಕೆಯು ಕೊಡಮಾಡುವ ಎಸ್.ಬಿ.ಜಂಗಮಶೆಟ್ಟಿ ಮತ್ತು ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ರಂಗ ಸಾಧಕರಿಂದ ಅರ್ಜಿ…

6 hours ago

ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿ ಅನುಮಾನಸ್ಪದ ಸಾವು

ಕಲಬುರಗಿ: ಇಲ್ಲಿನ ಕಡಗಂಚಿ ಕೇಂದ್ರಿಯ ವಿಶ್ವ ವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಅನುಮಾನಸ್ಪದ ಮೃತಪಟ್ಟಿರುವ ಘಟನೆ ಬೆಳಕ್ಕಿಗೆ ಬಂದಿದಿದ್ದು, ಘಟನಾ ಸ್ಥಳಕ್ಕೆ…

6 hours ago