ಬಿಸಿ ಬಿಸಿ ಸುದ್ದಿ

ಕಲಬುರಗಿ ಮತದಾರರಿಗೆ ಕೈಬೀಸಿ ಕರೆಯುತ್ತಿವೆ 72 ವೈವಿಧ್ಯಮಯ ಮತಗಟ್ಟೆಗಳು

ಕಲಬುರಗಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಮೇ 10ರಂದು ನಡೆಯುವ ಮತದಾನಕ್ಕೆ ಮಹಿಳೆಯರು, ವಿಶೇಷಚೇತನರು ಹಾಗೂ ಯುವ ಸಮೂಹವನ್ನು ಮತಗಟ್ಟೆಯತ್ತ ಆಕರ್ಷಿಸಲು ವಿವಿಧ ಬಣ್ಣ, ಚಿತ್ರಕಲೆಗಳಿಂದ ಸಿಂಗಾರಗೊಳಿಸಿರುವ ಜಿಲ್ಲೆಯಾದ್ಯಂತ 72 ವೈವಿಧ್ಯಮಯ ಮತಗಟ್ಟೆಗಳು ಸ್ಥಾಪಿಸಲಾಗಿದ್ದು, ಮತದಾರರನ್ನು ಮತದಾನಕ್ಕೆ ಕೈಬೀಸಿ ಕರೆಯುತ್ತಿವೆ.

ಚಿತ್ರಕಲಾ ಶಿಕ್ಷಕ ರಾಜೇಶ ನೀಲಹಳ್ಳಿ ಸೇರಿದಂತೆ ಸುಮಾರು 40 ಸರ್ಕಾರಿ ಮತ್ತು ಖಾಸಗಿ ಚಿತ್ರಕಲೆ ಶಿಕ್ಷಕರು ಈ ಮತಗಟ್ಟೆಗಳಿಗೆ ಬಣ್ಣ-ಬಣ್ಣದ ಚಿತ್ರಗಳು, ರಂಗು ತುಂಬಿದ್ದು, ಇದೀಗ ಇವು ಆಕರ್ಷಣೀಯ ಕೇಂದ್ರವಾಗಿವೆ.
ವಿಶೇಷವಾಗಿ ಮಹಿಳಾ ಮತದಾರರನ್ನು ಆಕರ್ಷಿಸಲು ಪ್ರತಿ ವಿಧಾನಸಬಾ ಕ್ಷೇತ್ರಕ್ಕೆ 5 ರಂತೆ ಜಿಲ್ಲೆಯಾದ್ಯಂತ 45 ಮಹಿಳಾ ಸಖಿ ಪಿಂಕ್ ಬೂತ್ ಸ್ಥಾಪಿಸಲಾಗಿದ್ದು, ಮತಕೇಂದ್ರದ ಬಾಗಿಲುಗಳನ್ನು ಪಿಂಕ್ ಬಲೂನುಗಳಿಂದ ಕಮಾನು ಮಾಡಿ ಅಲಂಕರಿಸಲಾಗಿದೆ. ಇಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗಳು ಮಹಿಳೆಯರೇ ಇರಲಿದ್ದಾರೆ. ಎಲ್ಲರೂ ಪಿಂಕ್ ಯೂನಿಫಾರ್ಮ ಹಾಕಿಕೊಂಡು ಕಾರ್ಯನಿರ್ವಹಿಸಲಿದ್ದಾರೆ. ಇಲ್ಲಿ ಸುಗಮ ಮತದಾನಕ್ಕೆ ನೆರವಾಗುವ ರಕ್ಷಣೆಗೆ ಮಹಿಳಾ ಭದ್ರತಾ ಸಿಬ್ಬಂದಿಯನ್ನೇ ನಿಯೋಜಿಸಲಾಗಿದೆ.

ಬಲೂನ್ ಮತ್ತು ಪಿಂಕ್ ಬಣ್ಣದಿಂದ ಮತಗಟ್ಟೆ ಕಂಗೊಳಿಸುತ್ತಿದೆ. ಕೊಠಡಿ, ಮೇಜು, ಬಾಗಿಲು ಎಲ್ಲವು ಗುಲಾಬಿಮಯವಾಗಿದೆ. ಮಹಿಳೆಯರನ್ನು ಮತಗಟ್ಟೆಗೆ ಆಕರ್ಷಿಸುವ ವಿಶಿಷ್ಟ ಪ್ರಯತ್ನವಾಗಿದ್ದು, ಅಷ್ಟೇ ಅಲ್ಲ ಮುಕ್ತ ಮತದಾನಕ್ಕೆ ಅವಕಾಶ ಕಲ್ಪಿಸುವ ಯೋಜನೆ ಇದಾಗಿದೆ.

ತಲಾ 9 ಯುವ ಮತ್ತು ವಿಶೇಷಚೇತನರ ಬೂತ್: ಇದಲ್ಲದೆ ಯುವಕ ಯುವತಿಯರು ಮತು ನೂತನ ಮತದಾರರ ಪಟ್ಟಿಗೆ ಹೆಸರು ಸೇರಿಸಿದ ಯುವ ಮತದಾರರಿಗೆ ಮತದಾನದತ್ತ ಆಕರ್ಷಿಸಲು ಮತ್ತು ಮತದಾನದ ಬಗ್ಗೆ ಜಾಗೃತಿ ಮೂಡಿಸಲೆಂದೇ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರದಲ್ಲಿ ತಲಾ 1 ಯುವ ಬೂತ್ ಸ್ಥಾಪಿಸಿದ್ದು, ಯುವ ಮತ್ತು ಮದ್ಯ ವಯಸ್ಸಿನ ಸಿಬ್ಬಂದಿಗಳನ್ನು ಇಲ್ಲಿ ಕಾಣಬಹುದಾಗಿದೆ. ಅದೇ ರೀತಿ ವಿಶೇಷಚೇತನರಲ್ಲಿ ಜೀವನೋತ್ಸಾಹ ತುಂಬಲು ಕ್ಷೇತ್ರಕ್ಕೆ ಒಂದರಂತೆ 9 ವಿಶೇಷಚೇತನ ಬೂತ್ ಸ್ಥಾಪಿಸಲಾಗಿದೆ. ಈ ಮತಗಟ್ಟೆಗಳ ಗೋಡೆಗಳ ಮೇಲೆ ವ್ಹೀಲ್ ಚೇರ್, ಊರುಗೋಲು, ರ್ಯಾಂಪ್, ವಿಶೇಷಚೇತನರಿಗೆ ಮತಗಟ್ಟೆಯಲ್ಲಿ ಕಲ್ಪಿಸಿರುವ ಸೌಕರ್ಯಗಳ ಕುರಿತು ಆಕರ್ಷಕವಾಗಿ ಚಿತ್ರ ಬಿಡಿಸಲಾಗಿದೆ.

9 ಥೀಮ್ ಬೂತ್: ಇನ್ನು ಜಿಲ್ಲೆಯ ಸ್ಥಳೀಯ ಇತಿಹಾಸ, ಮಹಿಮೆ ಸಾರುವ ಕ್ಷೇತ್ರದಲ್ಲಿ ತಲಾ ಒಂದರಂತೆ 9 ವಿಷಯಾಧಾರಿತ ಬೂತ್‍ಗಳು ಸ್ಥಾಪಿಸಿದ್ದು, ಇವು ಈ ಬಾರಿ ಚುನಾವಣೆಯ ಪ್ರಮುಖ ಆಕರ್ಷಣಿಯ ಮತಗಟ್ಟೆಗಳಾಗಿ ಕಾಣಿಸಿಕೊಂಡಿವೆ.

ಕ್ಷೇತ್ರದಲ್ಲಿ ಭೀಮೆ ಹರಿಯುತ್ತಿರುವುದರಿಂದ ಅಫಜಲಪುರ ಮತಕ್ಷೇತ್ರದ ಮಣ್ಣೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡ ಮತಗಟ್ಟೆ ಸಂಖ್ಯೆ-50ರ ಗೋಡೆಗಳ ಮೇಲೆ ಭೀಮಾ ನದಿಯ ಚಿತ್ರ ಬಿಡಿಸಲಾಗಿದೆ. ಜೇವರ್ಗಿ ಮತಕ್ಷೇತ್ರದ ರಾಸಣಗಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ-37ಕ್ಕೆ ಹತ್ತಿ ಮತ್ತು ತೊಗರಿ ಕೃಷಿ ಉತ್ಪನ್ನದ ಚಿತ್ರ ಬಿಡಿಸಿದರೆ, ನಾಗಾವಿ ನಾಡು ಚಿತ್ತಾಪುರ ಕ್ಷೇತ್ರದ ಗುಂಡಗುರ್ತಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮತಗಟ್ಟೆ ಸಂ.25ರಲ್ಲಿ ಸನ್ನತ್ತಿಯ ಬೌದ್ಧ ಸ್ತೂಪ ಕಂಗೊಳಿಸುತ್ತಿದೆ.

ರಾಷ್ಟ್ರಕೂಟರ ನಾಡು ಸೇಡಂ ಕ್ಷೇತ್ರದ ಮಳಖೇಡ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂ.77ರ ಮೇಲೆ ಮಳಖೇಡದ ಭವ್ಯ ಕೋಟೆ ಕಾಣಬಹುದಾಗಿದೆ. ಜಿಲ್ಲೆಯಲ್ಲಿಯೇ ಹೆಚ್ಚಿನ ಅರಣ್ಯ ಪ್ರದೇಶ ಹೊಂದಿರುವ ಚಿಂಚೋಳಿ ಕ್ಷೇತ್ರದಲ್ಲಿ ಗೋಟೂರ ಸರ್ಕಾರಿ ಹಿರಿಯ ಪ್ರಾಥಮಿಕ ಸಾಲೆ (ಪೂರ್ವ ಭಾಗ) ಮತಗಟ್ಟೆ ಸಂ.42ರಲ್ಲಿ ಕ್ಷೇತ್ರದ ಐತಿಹಾಸಿಕ ತಾಣಗಳಾದ ಚಂದ್ರಂಪಳ್ಳಿ ಜಲಾಶಯ, ಗೊಟ್ಟಂಗೊಟ್ಟ ಸ್ಥಾನ ಪಡೆದಿವೆ.

ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ಕ್ಷೇತ್ರವಾದ ಗುಲಬರ್ಗಾ ಗ್ರಾಮೀಣ ಕ್ಷೇತ್ರದ ಸಂಗೋಳಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(ಬಲ ಭಾಗ) ಮತಗಟ್ಟೆ ಸಂ.96 ರಲ್ಲಿ ಜಿ.ಐ. ಟ್ಯಾಗ್ ಹೊಂದಿರುವ “ಕೆಂಬಾಳೆ” ಹೊತ್ತ ಮಹಿಳೆಯ ಚಿತ್ರ ಆಕರ್ಷಣೀಯವಾಗಿದೆ ಬಿಂಬಿಸಲಾಗಿದೆ.

ಗುಲಬರ್ಗಾ ದಕ್ಷಿಣ ಕ್ಷೇತ್ರದ ಕಲಬುರಗಿ ನಗರದ ಸಂಗಮೇಶ್ವರ ಕಾಲೋನಿಯಲ್ಲಿರುವ ಎನ್.ವಿ. ಪದವಿ ಪೂರ್ವ ಕಾಲೇಜು ಮತಗಟ್ಟೆ ಸಂ.138 ಮತ್ತು ಗುಲಬರ್ಗಾ ಉತ್ತರ ಕ್ಷೇತ್ರದಲ್ಲಿ ಬರುವ ಕಪನೂರ ಸರ್ಕರಿ ಪ್ರೌಢ ಶಾಲೆ ಮತಗಟ್ಟೆ ಸಂ.1 ರಲ್ಲಿ ಜಿಲ್ಲೆಯ ಪ್ರಮುಖ ಕೃಷಿ ಬೆಳೆ ತೊಗರಿ ಫಸಲು ಮತ್ತು ಕಲಬುರಗಿ ಕೋಟೆ ಎದ್ದು ಕಾಣುತ್ತಿವೆ. ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಆಳಂದ ಕ್ಷೇತ್ರದ ಮೋಘಾ (ಕೆ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂ.186ರ ಗೋಡೆಗಳು ತೊಗರಿ ಫಸಲನ್ನೇ ಆವರಿಸಿಕೊಂಡಿವೆ.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

34 mins ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

1 hour ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

1 hour ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

1 hour ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

2 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

3 hours ago