ಕಲಲಬುರಗಿ: ಬೆಂಗಳೂರಿನ ರೆಡ್ ಕ್ರಾಸ್ ಕೇಂದ್ರ ಕಛೇರಿಯಲ್ಲಿ ಪಬ್ಲಿಕ್ ರಿಲೇಷನ್ ಸಬ್ಕಮಿಟಿ, ರಾಜ್ಯ ಘಟಕ ಸಭೆ ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಕೇಂದ್ರ ಕಛೇರಿಯಲ್ಲಿ ಪಬ್ಲಿಕ್ ರಿಲೇಷನ್ ಸಬ್ಕಮಿಟಿ, ನಿರ್ದೇಶಕರಾದ ಡಿ.ಎಸ್.ಸಿದಣ್ಣ ರವರ ನೇತೃತ್ವದಲ್ಲಿ ಜರುಗಿತು.
ರೆಡ್ ಕ್ರಾಸ್ ಸೊಸೈಟಿಯ ಶತಮಾನೋತ್ಸವ ಆಚರಣೆಯ ಹಿನ್ನಲೆಯಲ್ಲಿ ಎಲ್ಲಾ 31 ಜಿಲ್ಲೆಗಳ ರೆಡ್ ಕ್ರಾಸ್ ಸೊಸೈಟಿಯ ಸೇವೆಗಳನ್ನು ಚುರುಕುಗೊಳಿಸಬೇಕು. ಈ ಹಿನ್ನಲೆಯಲ್ಲಿ ಪ್ರಿಂಟ್ ಮೀಡಿಯಾ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾ ಜೊತೆಯಲ್ಲಿ ನಿರಂತರವಾಗಿ ಸಂಪರ್ಕ ಹೊಂದುವ ಮೂಲಕ ರಾಜ್ಯಾದ್ಯಂತ ರೆಡ್ ಕ್ರಾಸ್ ಸೊಸೈಟಿಯ ಚಟುವಟಿಕೆ ಕುರಿತು ಮಾಹಿತಿ ನೀಡುವುದು ಪ್ರತಿ ಜಿಲ್ಲೆಯವರು ಕನಿಷ್ಟ 3 ತಿಂಗಳಿಗೊಮ್ಮೆ ಯಾದರು ಕೇಂದ್ರ ಕಛೇರಿ ತಮ್ಮ ಚಟುವಟಿಕೆ ಕುರಿತು ಮಾಹಿತಿ ಸಲ್ಲಿಸುವುದು. ಜಿನೆವಾ ದಲ್ಲಿರುವ ರೆಡ್ ಕ್ರಾಸ್ ಸೊಸೈಟಿಯ ಅಭಿವೃದ್ದಿ ನೋಡುವುದಕ್ಕಾಗಿ ಪಬ್ಲಿಕ್ ರಿಲೇಷನ್ ಸಬ್ಕಮಿಟಿ ಸದಸ್ಯರ ನಿಯೋಗವನ್ನು ಕೊಂಡಯಿವುದು. ಹಾಗೆಯೇ ಯಾವ ಯಾವ ಜಿಲ್ಲೆಯಲ್ಲಿ ಬ್ಲಡ್ ಬ್ಯಾಂಕ್ ಇಲ್ಲವೋ ಸದರಿ ಸ್ಥಳದಲ್ಲಿ ಬ್ಲಡ್ ಬ್ಯಾಂಕ್ ತೆರೆಯುವ ವ್ಯವಸ್ಥೆ ಕಲ್ಪಿಸುವುದು ಈ ರೀತಿ ಹತ್ತು ಹಲವಾರು ವಿಷಯಗಳ ಕುರಿತು ಚರ್ಚಿಸಲಾಯಿತು.
ಪ್ರಾರಂಭದಲ್ಲಿ ನಿರ್ದೇಶಕರಾದ.ಡಿ.ಎಸ್.ಸಿದಣ್ಣ (ದಾವಣಗೆರೆ ಜಿಲ್ಲೆ)ರವರ ನೇತೃತ್ವದಲ್ಲಿ ಸ್ವಗತಿಸಿ ಎಲ್ಲಾ ಸದಸ್ಯರನ್ನು ಪರಿಚಯ ಮಾಡಿಕೊಂಡರು. ಜನರಲ್ ಸೆಕ್ರೆಟರಿಯಾದ ಹೆಚ್.ಎಸ್.ಬಾಲಸುಬ್ರಮಣ್ಯಂ ರವರು ಸಭೆಯಲ್ಲಿ ಚರ್ಚಿಸುವ ವಿಷಯಗಳನ್ನು ಮಂಡಿಸಿದರು, ಕೊನೆಯಲ್ಲಿ ಒಂದಿಸಿದರು.
ಸಬ್ಕಮಿಟಿಯ ಸದಸ್ಯರಾದ ಶಿವರಾಜ ಅಂಡಗಿ, (ಕಲಬುರಗಿ ಜಿಲ್ಲೆ), ಕೆ.ವಿರೇಶ (ಬಳ್ಳಾರಿ ಜಿಲ್ಲೆ) ಎ.ಎಂ.ಸುರೇಶ್ (ಶಿವಮೊಗ್ಗ ಜಿಲ್ಲೆ), ಹೆಚ್.ಎಸ್.ಬಾಲಸುಬ್ರಮಣ್ಯಂ, , ವಿಕಾಸ್ ಕಲಘಟಗಿ, (ಬೆಳಗಾವಿ ಜಿಲ್ಲೆ) ಇವರುಗಳು ಉಪಸ್ಥಿತರಿದ್ದರು.
ಬೆಂಗಳೂರು: ಮೊಬೈಲ್ ಆಪ್ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆಹಚ್ಚಲು ಜುಲೈ 15 ರಿಂದ 30 ರವರೆಗೆ ಸಮೀಕ್ಷೆ ನಡೆಸಲಾಗುವುದು…
ಬೆಂಗಳೂರು: ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ. ಫೇಕ್ ನ್ಯೂಸ್ ಗಳ ಬಗ್ಗೆ ಇಡೀ ಸಮಾಜ…
ಕಲಬುರಗಿ: ಡಾ.ಸರೋಜನಿ ಮಹಿಷಿ ವರದಿ ಅನುಷ್ಠಾನಕ್ಕೆ ನಡೆದ, ನಡೆಯುತ್ತಿರುವ ಹೋರಾಟಗಳಿಗೆ ಲೆಕ್ಕವೇ ಇಲ್ಲ. ಮಹಿಷಿ ವರದಿಯ ಹೆಸರು ಹೇಳಿ ಆಳಿದ…
ಕಲಬುರಗಿ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಕಾರ್ಯಕಾರಿ ಸದಸ್ಯ ಸಮಿತಿಗೆ ಮಹಾಸಭಾದ ಅಧ್ಯಕ್ಷ ಶರಣಕುಮಾರ ಮೋದಿ ಹಾಗೂ ಸಮಾಜದ…
ಕಲಬುರಗಿ: ಕರ್ನಾಟಕ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ವಿಫಲವಾದ ರಾಜ್ಯ ಸರ್ಕಾರ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪುನೀತರಾಜ…
ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸ್ಥಳೀಯ ಪೊಲೀಸ್ ಠಾಣೆಯಲ್ಲಿ 20 ವರ್ಷ ಒಂದೇ ಕಡೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಎಎಸ್'ಐ…