ಅಂಕಣ ಬರಹ

ಅಷ್ಟಾವರಣಗಳು ಶರಣರ ತತ್ವಗಳಾಗಿದ್ದವು

ಅಷ್ಟಾವರಣಗಳಾದ ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ರುದ್ರಾಕ್ಷಿ, ಭಸ್ಮ ಮತ್ತು ಮಂತ್ರ ಇವು ಶರಣರ ತತ್ವಗಳಾಗಿದ್ದವು ಎಂದು ಶರಣಬಸವೇಶ್ವರ ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎನ್.ಎಸ್.ಪಾಟೀಲರು ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಶುಕ್ರವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.

ಶರಣಬಸವರು ಭಸ್ಮಕ್ಕೆ ಬಹಳ ಮಹತ್ವ ನೀಡಿದ್ದರು. ಅವರ ಹಣೆಯ ಮೇಲೆ ಮೂರು ಬೆರಳು ವಿಭೂತಿ ಯಾವಾಗಲೂ ಹೊಳೆಯುತ್ತಿತ್ತು. ಆದರೆ ಮತಾಂಧರರಿಗೆ ಇದು ಹಿಡಿಸಲಿಲ್ಲ. ತಾವು ಪೂಜಿಸುವ ದೇವರಿಗೆಲ್ಲ ಅವರು ಏನೇನೋ ಹಚ್ಚುತ್ತಿದ್ದರು. ಆಗ ಗುಡಿಯೊಳಗಿರುವ ಲಿಂಗಗಳೆಲ್ಲ ಶರಣರೊಂದಿಗೆ ಹೀಗೆ ಹೇಳುತ್ತವೆ’ ನಮಗೆ ಗುಡಿಯ ಪೂಜಾರಿಗಳು ವಿಭೂತಿ ಹಚ್ಚುತ್ತಿಲ್ಲ. ಏನೇನೋ ಹಚ್ಚುತ್ತಿದ್ದಾರೆ ಅದು ಎಂದು ಅಳಲು ತೋಡಕೊಂಡವರು ಆಗ ಶರಣರು ಭಸ್ಮದಿಂದ ಮೂರು ಬೆರಳು ವಿಭೂತಿಯನ್ನು ಲಿಂಗೊಂದಕ್ಕೆ ಹಚ್ಚಿದಾಗ ಎಲ್ಲ ಲಿಂಗಗಳ ಮೇಲೆ ವಿಭೂತಿ ಹೊಳೆಯಲು ಪ್ರಾರಂಭಿಸಿತು. ಮರುದಿನ ಪೂಜಾರಿಗಳು ಗುಡಿಗೆ ಹೋದಾಗ ನಿಮ್ಮ ಪೂಜೆ ಬೇಡ ಎಂದು ಮುಖ ತಿರುಗಿಸುತ್ತವೆ. ಸಿಟ್ಟಿಗೆದ್ದ ಪೂಜಾರಿ ವಿಭೂತಿ ಅಳಿಸಬೇಕೆಂದು ಎಷ್ಟು ನೀರು ಹಾಕಿದರೂ ವಿಭೂತಿ ಹೊಗುವುದಿಲ್ಲ. ಅವರ ತಪ್ಪು ಅರಿವಾಗುತ್ತದೆ. ಶರಣರಿಗೆ ವ್ಯಕ್ತಿತ್ವಕ್ಕೆ ಕೈಮುಗಿಯುತ್ತಾರೆ.

ಶರಣರಿಗೆ ಮಹಾಮನೆಯ ಎದುರಿಗೆ ತುಂಬಿದ ಕೆರೆಯೆಂದರೆ ಪ್ರೀತಿ ಅದರಲ್ಲಿರುವು ಮೀನುಗಳಿಗೆ ದಿನಾಲೂ ತಿನ್ನಲು ಏನಾದರೂ ಹಾಕುತ್ತಿದ್ದರು. ಕೆಲವರು ಮೀನುಗಳನ್ನು ಹಿಡಿದುಕೊಂಡು ಒಯ್ದು ಮನೆಯೊಳಗಿಟ್ಟರು. ಶರಣರಿಗೆ ವಿಷಯ ತಿಳಿದು ರಾತ್ರಿ ಜನರ ಕನಸ್ಸಿನೊಳಗೆ ಹೋಗಿ ಆ ಮೀನುಗಳನ್ನು ಕೆರೆಗೆ ತಂದು ಒಪ್ಪಿಸಿರಿ ಎಂದು ಹೇಳುತ್ತಾರೆ. ಆದರೆ ಕನಸ್ಸಿನಲ್ಲಿ ಶರಣರು ಹೇಳಿದ ಮಾತು ತಿರಸ್ಕರಿಸಿ ಮಡದಿಯರಿಗೆ ಮೀನಿನ ಅಡುಗೆ ಮಾಡಿರೆಂದು ಹೇಳಿದಾಗ ಮನೆಯ ಮಕ್ಕಳೆಲ್ಲ ಕೆಳಗೆ ಬಿದ್ದು ಕಾಲು ತಿಕ್ಕಲು ಆರಂಭಿಸುತ್ತಾರೆ. ಶರಣರ ಕನಸ್ಸಿನ ಮಾತು ನೆನಪಾಗಿ ಮಕ್ಕಳನ್ನು ಹೆಗಲ ಮೇಲೆ ಹಾಕಿಕೊಂಡು ಶರಣರಲ್ಲಿ ಬರುತ್ತಾರೆ. ಇನ್ನೊಮ್ಮೆ ಪ್ರಾಣಿ ಹಿಂಸೆ ಮಾಡುವುದಿಲ್ಲ ಎಂದು ಹೇಳುತ್ತಾರೆ. ಶರಣರು ಭಸ್ಮವನ್ನು ತಂದು ಮಕ್ಕಳ ಮತ್ತು ಮೀನುಗಳ ಮೇಲೆ ಹಾಕಿದಾಗ ಮಕ್ಕಳು ಎದ್ದು ಕೂಡುತ್ತಾರೆ. ಮೀನುಗಳು ಜೀವಂತವಾಗುತ್ತವೆ ಅವುಗಳನ್ನು ಮತ್ತೆ ಕೆರೆಗೆ ಬಿಡಲಾಗುತ್ತದೆ.

ಹೆತ್ತತಾಯಿ ತನ್ನ ಮಕ್ಕಳನ್ನು ಬಿಟ್ಟು ಲಿಂಗೈಕ್ಯಳಾಗುತ್ತಾಳೆ. ತಂದೆ ಇನ್ನೊಂದು ಮದುವೆಯಾಗುತ್ತಾನೆ. ಆಕೆ ಬಹಳ ಸೊಕ್ಕಿನವಳು. ಮಕ್ಕಳಿಗೆ ಬಹಳ ಕಷ್ಟ ಕೊಡುತ್ತಿರುತ್ತಾಳೆ. ತಂದೆಗೆ ಹೇಳಿದರೆ ಮಕ್ಕಳಿಗೆ ಬಯ್ಯುತ್ತಾನೆ. ಮಕ್ಕಳು ದಿಕ್ಕು ತೋಚದೆ ಶರಣರಲ್ಲಿ ಬಂದು ಎಲ್ಲ ಹೇಳಿದಾಗ ಶರಣರು ಅವರನ್ನು ತಮ್ಮಲ್ಲಿಯೇ ಉಳಿಯಲು ಹೇಳುತ್ತಾರೆ. ಕೆಲ ವರ್ಷಗಳ ನಂತರ ಆಕೆಗೆ ಮಹಾರೋಗ ಹತ್ತಿ ನಿತ್ರಾಣಗೊಂಡಿರುತ್ತಾಳೆ. ಆಕೆಗೆ ಆರೈಕೆ ಮಾಡಲು ಯಾರೂ ದಿಕ್ಕಿಲ್ಲ. ಶರಣರ ಹತ್ತಿರ ಬಂದಾಗ ತಮ್ಮ ಮಕ್ಕಳನ್ನು ನೋಡುತ್ತಾಳೆ. ಆ ಮಕ್ಕಳು ಅವಳ ಬೇನೆಯನ್ನು ಕಳೆಯಲು ಶರಣರ ಹತ್ತಿರ ಬೇಡಿಕೊಳ್ಳುತ್ತಾರೆ. ಮಕ್ಕಳ ಅಂತಃಕರಣಕ್ಕೆ ಮಾರು ಹೋಗಿ ಶರಣರು ಭಸ್ಮ ತಂದು ಆಕೆಯ ಮೈಗೆ ಹಚ್ಚಿದಾಗ ರೋಗ ಅಳಿದು ಹೋಗುತ್ತದೆ. ಶರಣರ ಪಾದಕ್ಕೆ ಬಿದ್ದು ತಪ್ಪನ್ನು ಒಪ್ಪಿಕೊಂಡು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ.

ಒಬ್ಬ ವ್ಯಕ್ತ್ತಿ ಶರಣರ ಅಪ್ಪಟ ಭಕ್ತನಾಗಿದ್ದ, ಆದರೆ ಹೆಂಡತಿಗೆ ಕುರುಡ ಭಕ್ತಿ ಇತ್ತು. ಒಂದು ಸಲ ದುರುಗಮ್ಮನ ಮುಂದೆ ಕಡಿಯಲು ಕುರಿಯೊಂದನ್ನು ಹಿಡಿದು ಹೊರಟಳು. ಗಂಡ ಎಷ್ಟೇ ಹೇಳಿದರೂ ಒಪ್ಪಲಿಲ್ಲ. ಶರಣರಿಗೆ ಈ ವಿಷಯ ತಿಳಿಯುತ್ತದೆ. ಕುರಿ ಕಡೆಯುವ ಖಡ್ಗ ಎತ್ತಿದಾಗ ಅದು ಹೆಣ್ಣಮಗಳ ಕೈ ಮೇಲೆ ಬಿದ್ದು ಅವಳ ಎರಡು ಕೈಗಳು ಕಡಿದು ಬಿಳುತ್ತವೆ. ಕಡಿಯುವ ಗಾಬರಿಯಾದ ಮತ್ತೆ ಖಡ್ಗ ಎತ್ತಿದಾಗ ಅವನ ಕೈ ಕಡಿಯುತ್ತವೆ. ತಪ್ಪಿನ ಅರಿವಾಗಿ ಶರಣರಲ್ಲಿ ಹೋಗಿ ಬೇಡಿಕೊಂಡು ಶರಣರ ಆಶೀರ್ವಾದಿಂದ ಮತ್ತೆ ಮೊದಲಿನಂತಾಗುತ್ತಾರೆ ಎಂದು ಲೀಲೆಗಳನ್ನು ಹೇಳಿದರು.

ಡಾ.ಎನ್.ಎಸ್.ಪಾಟೀಲ, ಪ್ರಾಚಾರ್ಯ

emedialine

Recent Posts

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

2 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

8 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

19 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

20 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

20 hours ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

20 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420