ಬಿಸಿ ಬಿಸಿ ಸುದ್ದಿ

ಸುಪ್ತಮನಸ್ಸನ್ನು ಉಪಯೋಗಿಸಿ ಸಂದರ್ಶನ ಎದುರಿಸಿ: ಭುಜಬಲಿ

ಕಲಬುರಗಿ: ಸಂದರ್ಶನ ಎಂದ ಕೂಡಲೇ ಭಯ ಹುಟ್ಟಿಕೊಳ್ಳುವುದು ಸಾಮಾನ್ಯ, ಸಂದರ್ಶನಕ್ಕೆ ಹೊರಡುವ ಮುನ್ನ ಸಕಲ ಸಿದ್ದತೆಗಳನ್ನು ಮಾಡಿಕೊಂಡರೆ ಸರಳವಾಗಿ ಮತ್ತು ಧೈರ್ಯದಿಂದ ಸಂದರ್ಶನವನ್ನು ಗೆಲ್ಲಬಹುದು ಎಂದು ಬೆಂಗಳೂರಿನ ಖ್ಯಾತ ಮನೋತಜ್ಞ ,ಹ್ಯಾಪಿನೆಸ್ ಇಂಜಿನಿಯರ್ ತರಬೇತುದಾರರಾದ ಭುಜಬಲಿ ಬೋಗಾರ ಅವರು ಹೇಳಿದರು.

ನಗರದ ಜಾಜಿ ಪ್ರತಿಷ್ಠಾನದ ಗುರುಕುಲ ಡಿಗ್ರಿ ಕಾಲೇಜಿನಲ್ಲಿ ಮೌನಯೋಗಿ ಫೌಂಡೇಶನ್ ಹಾಗೂ ಟ್ರಾನ್ಸ್‌ಫಾರ್ಮೊ ಇನ್‌ಕಾರ್ಪ್ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸುಪ್ತಮನಸ್ಸಿನ ರಹಸ್ಯ ಶಕ್ತಿಗಳನ್ನು ಉಪಯೋಗಿಸಿ ಸಂದರ್ಶನ ಎದುರಿಸಿ ಎಂಬ ವಿಶೇಷ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದರು.

ಅವರು ಸಂದರ್ಶಕರ ಪ್ರಶ್ನೆಗಳಿಗೆ ಉತ್ತರಿಸುವಾಗ ಸಂದರ್ಶಕರೆಡೆಗೆ ದೃಷ್ಟಿಯನ್ನು ಹರಿಸಿ ಉತ್ತರಿಸಬೇಕು, ಪ್ರಶ್ನೆಗಳಿಗೆ ಉತ್ತರ ತಿಳಿಯದಿದ್ದಾಗ ಅದನ್ನು ಒಪ್ಪಿಕೊಳ್ಳುವುದು ಉತ್ತಮ, ಕುರ್ಚಿಯ ಮೇಲೆ ನೇರವಾಗಿ ದೇಹವನ್ನು ಸ್ವಲ್ಪ ಮುಂಭಾಗಕ್ಕೆ ಇರಿಸಿ ಆತ್ಮವಿಶ್ವಾಸದಿಂದ ಕುಳಿತುಕೊಳ್ಳಬೇಕು, ಎಲ್ಲದಕ್ಕಿಂತ ಮುಖ್ಯವಾಗಿ ಸಂದರ್ಶನಕ್ಕೆ ಹೊರಡುವ ಕಂಪನಿ ಮತ್ತು ಹುದ್ದೆಗೆ ಸಂಬಂಧಿಸಿದಂತೆ ಸಾಕಷ್ಟು ತಿಳಿದುಕೊಂಡಿರಬೇಕು, ಕೆಲವೊಂದು ಕಂಪನಿಗಳು ಉದ್ಯೋಗಕ್ಕಿಂತ ಮುಂಚೆ ಅಭ್ಯರ್ಥಿಯ ವ್ಯಕ್ತಿತ್ವವನ್ನು ಅರಿಯಲು ಕೈ ಬರಹದ ತಪಾಸಣೆ ಮಾಡುತ್ತಾರೆ.ಈ ಪ್ರಯುಕ್ತ ವಿದ್ಯಾರ್ಥಿಗಳಿಗೆ ತಮ್ಮ ಕೈಬರಹದಲ್ಲಿನ ಬದಲಾಯಿಸಿಕೊಳ್ಳಬೇಕಾದ ಅಂಶಗಳ ಬಗ್ಗೆ ಪ್ರಾತ್ಯಕ್ಷಿಕವಾಗಿ ತೋರಿಸಿ ವಿವರಿಸಿದರು.

ಸಂದರ್ಶನಕಾರರ ಮೇಲೆ ಸಕರಾತ್ಮಕವಾದ ಪ್ರಭಾವವನ್ನು ಬೀರುವ ಮೆದುಳಿನ-ನರವಿಜ್ಞಾನದ ಇತ್ತೀಚಿನ ಸಂಶೋಧನೆಗಳ ಲಾಭಗಳ ಬಗ್ಗೆ ಹೇಳಿದರು .ಸಂದರ್ಶನಕ್ಕೆ  ನಮ್ಮ ವಸ್ತ್ರಗಳು ಶುಚಿಯಾಗಿ ಹಾಗೂ ಸೂಕ್ತವಾಗಿರುವಂತೆ ಎಚ್ಚರ ವಹಿಸಬೇಕು ಮತ್ತು ಸಂದರ್ಶನಕ್ಕೆ ಆಂಗಿಕ ಭಾಷೆ ಧನಾತ್ಮಕವಾಗಿ ಆತ್ಮವಿಶ್ವಾಸದಿಂದ ಕೂಡಿದರೆ ಖಂಡಿತವಾಗಿಯು ಯಶಸ್ಸು ಸಾಧ್ಯ ಎಂದರು. ಕಣ್ಣುಗಳು ಮನಸ್ಸಿನ ಕನ್ನಡಿಯಿದ್ದಂತೆ,ಕಣ್ಣುಗಳ ಚಲನವಲನವೂ ಮನಸ್ಸಿನಲ್ಲಿ ನಡೆಯುತ್ತಿರುವ ಆಲೋಚನೆಗಳನ್ನು ನಿರ್ದಿಷ್ಟವಾಗಿ ಹೇಳುತ್ತದೆ ಎಂದು ತಿಳಿಸಿಕೊಟ್ಟರು.ಈ ಜ್ಞಾನವನ್ನು ಉಪಯೋಗಿಸಿ ಸಂದರ್ಶಕನ ಮನಸ್ಸಿನಾಳವನ್ನು ಅರಿತು ಉದ್ಯೋಗ ಗಿಟ್ಟಿಸಿಕೊಳ್ಳುವಂತೆ ಸಂದರ್ಶನಕಾರರ ಮೇಲೆ ಹೇಗೆ ಪ್ರಭಾವ ಬೀರಬಹುದೆಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ಭುಜಬಲಿ ಬೋಗಾರ, ಮೌನಯೋಗಿ ಫೌಂಡೇಶನ್‌ನ ಗೌರವ ಮಾರ್ಗದರ್ಶಕರಾದ ಖ್ಯಾತ ವಾಸ್ತುಶಿಲ್ಪಿ ಬಸವರಾಜ ಖಂಡೇರಾವ,  ಪ್ರಾಚಾರ್ಯರಾದ – ಸಂಜೀವ ಆರ್.ಪಾಟೀಲ, ಆಪರೇಶನ್ ಹೆಡ್ ನರಸಿಂಹ ಭಟ್, ಡಾ.ಎಸ್.ಬಿ.ಹಾಗರಗಿ, ಶ್ರಾವಣಯೋಗಿ ಹಿರೇಮಠ, ಸಂಸ್ಥೆಯ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದರು.

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

9 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

9 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

9 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

10 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

10 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

10 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420