ಬಿಸಿ ಬಿಸಿ ಸುದ್ದಿ

ಶರಣರ ವಚನಗಳು ಪಾಕಗೊಂಡ ಪಕ್ವಾನ್ನಗಳು: ಸತ್ಯಂಪೇಟೆ

ಕಲಬುರಗಿ: ಕಲಬುರಗಿಯ ವಚನೋತ್ಸವ ಪ್ರತಿಷ್ಠಾನ ಹಾಗೂ ವಚನೋತ್ಸವ ಸಮಿತಿಗಳ ಒಕ್ಕೂಟದ ವತಿಯಿಂದ  ಶ್ರಾವಣ ಮಾಸದಂಗವಾಗಿ ಹಳೇ ಜೇವರ್ಗಿ ರಸ್ತೆಯಲ್ಲಿರುವ  ಕಸ್ತೂರಬಾ ಕಾಂಪೌಂಡನಲ್ಲಿನ ಸಾಹಿತ್ಯ ಪ್ರೇಮಿ-ಶರಣ ಚಿಂತಕ ರವೀಂದ್ರಕುಮಾರ ಭಂಟನಳ್ಳಿ ಅವರ ಮಹಾಮನೆಯ ಅಂಗಳದಲ್ಲಿ ಶುಕ್ರವಾರ ಜರುಗಿದ ‘ವಚನಗಳಲ್ಲಿ ಜೀವನ ಮೌಲ್ಯಗಳು’ ಕುರಿತ ಕಾರ್ಯಕ್ರಮ  ಹಿರಿಯ ಶರಣ ಚಿಂತಕ ಕಲ್ಯಾಣಪ್ಪ ಪಾಟೀಲ ಮಳಖೇಡ ಉದ್ಘಾಟಿಸಿದರು.

‘ಮಾರಿ ಮಸಣಿಯೆಂಬುದು ಬೇರಿಲ್ಲ’ ಎನ್ನುವ ಬಸವಣ್ಣನವರ ವಚನ ವಿಶ್ಲೇಷಣೆ ಮಾಡಿ ಅನುಭಾವ ನೀಡಿದ  ಪತ್ರಕರ್ತ-ಸಾಹಿತಿ ಶಿವರಂಜನ್ ಸತ್ಯಂಪೇಟೆ, ಶರಣರ ವಚನಗಳು ಅಂದಿನ ಸಮಾಜದಲ್ಲಿ ಬೇರೂರಿದ್ದ ಮೂಢನಂಬಿಕೆ, ಕಂದಾಚಾರಗಳನ್ನು ಖಂಡಿಸಿ ಸುಜ್ಞಾನವನ್ನು ಬಿತ್ತಿ ಸದಾಚಾರದ ಬೆಳೆ ತೆಗೆಯುವ ಸ್ವಭಾವದವುಗಳಾಗಿವೆ ಎಂದು ಅಭಿಪ್ರಾಯಪಟ್ಟರು.

ಶರಣರ ನಡೆ-ನುಡಿಯಿಂದ ಪಾಕಗೊಂಡ ಪಕ್ವಾನ್ನಗಳಂತಿರುವ ಈ ವಷನಗಳು ಓದುಗರಿಗೆ, ಕೇಳುಗರಿಗೆ ಬೇವಿನಂತೆ ಕಹಿಯೆನಿಸಿದರೂ ಅವುಗಳನ್ನು ಆಚರಣೆಗೆ ತಂದಾಗ ಬೆಲ್ಲದಂತೆ ಸಿಹಿಯಾಗುವುದು. ಶರಣರ ವಚನಗಳು ಅಧರಕ್ಕೆ ಕಹಿ, ಉದರಕ್ಕೆ ಸಿಹಿ ಎಂದು ತಿಳಿಸಿದರು.

ನಾವು ನೋಡುವ ದೃಷ್ಟಿಕೋನ ಒಳ್ಳೆಯದಾಗಿರಬೇಕು. ನಾವು ಆಡುವ ಮಾತು ಉತ್ತಮವಾಗಿರಬೇಕು. ನಮ್ಮ ಕಣ್ಣು ನಾಲಿಗೆ ಮೇಲೆ ನಿಯಂತ್ರಣವಿರಬೇಕು. ಇವುಗಳು ದಾರಿ ತಪ್ಪಿದರೆ ಅದುವೆ ಮಾರಿ ಹೊರತು, ಕ್ಷುದ್ರ ದೇವತೆಗಳಲ್ಲ. ನೈತಿಕತೆ ಮತ್ತು ಆಂತರಿಕ ಶುದ್ಧತೆ ಇರಬೇಕು ಎಂದು ವಿವರಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ  ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ವಚನಗಳನ್ನು ಕೇವಲ ಓದುವುದು, ಕಂಠಪಾಠ ಮಾಡುವುದು ಮಾಡದೆ, ವಚನ ಪಚನ ಮಾಡಿಕೊಂಡು ವಚನ ಬದುಕಬೇಕು ಎಂದರು.

ಬದುಕಿನ ಸಾರ್ಥಕ ಮಾರ್ಗ ತೋರಿದ ಶರಣರು ತಾತ್ವಿಕ ತಳಹದಿಯ ಮೇಲೆ ಸಾತ್ವಿಕ ಸಮಾಜ ಕಟ್ಟ ಬಯಸಿದ್ದರು. ಮನುಷ್ಯ ಮಾನವನಾಗುವ ಬಗೆ, ಮನೆ ಮಹಾಮನೆ ಆಗುವ ಬಗೆಯನ್ನು ಶರಣರು ತೋರಿಸಿಕೊಟ್ಟರು. ನಾವೆಲ್ಲರೂ ಶರಣ ಮಾರ್ಗದಲ್ಲಿ ಮುನ್ನಡೆದು ಬದುಕಿಗೆ ಅರ್ಥ ತಂದುಕೊಳ್ಳೋಣ ಎಂದು ಹೇಳಿದರು. ವಚನೋತ್ಸವ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ಬಸವರಾಜ ಮೋದಿ, ಕಾರ್ಯದರ್ಶಿ ಬಸವರಾಜ ಧೂಳಾಗುಂಡಿ, ಕಲ್ಯಾಣಪ್ಪ ಬಿರಾದಾರ, ಸಿದ್ಧರಾಮ ಹಂಚನಾಳ, ಶರಣ ಚಿಂತಕ ನಾಗಣ್ಣಾ ಸ್ವಾದಿ ವೇದಿಕೆ ಮೇಲಿದ್ದರು. ಪ್ರಮುಖರಾದ ಶಿವರಾಜ ಅಂಡಗಿ, ಬಿ.ಎಂ.ಪಾಟೀಲ ಕಲ್ಲೂರ, ಜಗದೀಶ ಮರಪಳ್ಳಿ,  ಸತೀಶ ಸಜ್ಜನ್, ಪ್ರಭುದೇವ ಯಳವಂತಗಿ, ಶಿವಾನಂದ ಮಠಪತಿ, ಪ್ರಭುಲಿಂಗ ಮೂಲಗೆ, ನಾಗೇಂದ್ರಪ್ಪ ಮಾಡ್ಯಾಳೆ, ರಮೇಶ ಧುತ್ತರಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಮಹಾಮನೆಯ ಮಾಲೀಕರೂ ಆದ ಕಾರ್ಯಕ್ರಮದ ದಾಸೋಹಿಗಳಾದ-ದಂಪತಿಗಳಾದ ಶ್ರೀಮತಿ ಸುನಂದಾ ಮತ್ತು ಶ್ರೀ ರವೀಂದ್ರಕುಮಾರ ಭಂಟನಳ್ಳಿ ಅವರನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಗೌರವಿಸಲಾಯಿತು

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

7 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

7 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

7 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

7 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

7 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

7 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420