ಬಿಸಿ ಬಿಸಿ ಸುದ್ದಿ

ಅಂಬೇವಾಡ ಸೂಫಿ-ಸಂತ್ ಶೇಖ ಪರೀದ್ ಭಾವೋದ್ದೀನ್ ಜಕ್ರೀಯಾ ೬೭೦ (ಆರ್‌ಎ) ಉರುಸ್

ಆಳಂದ: ತಾಲೂಕಿನ ಅಂಬೇವಾಡ ಗ್ರಾಮದಲ್ಲಿನ ಸೂಫಿ-ಸಂತ ಶೇಖ ಪರೀದ್ ಭಾವೋದ್ದೀನ್ ಜಿಕ್ರೀಯಾ ಅವರ ೬೭೦ನೇ (ಆರ್‌ಎ) ವರ್ಷದ ಭಾವೈಕ್ಯದ ಉರುಸ್ ಸಂಭ್ರಮದ ಮಧ್ಯ ಭಕ್ತಿ ಭಾವದೊಂದಿಗೆ ನೆರವೇರಿಸುವ ಮೂಲಕ ಶನಿವಾರ ಸಂಪನ್ನಗೊAಡಿತು.

ಗುರುವಾರ ದರ್ಗಾದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯ ವೈಭವದೊಂದಿಗೆ ಸಂದಲ್ ಮೆರವಣಿಗೆ ನಡೆಯಿತು. ಅಲ್ಲದೆ, ಶುಕ್ರವಾರ ಚಿರಾಗ್ ಹಾಗೂ ಶನಿವಾರ ವಿವಿಧ ಭಾಗದಿಂದ ಬಂದ ಜಂಗಿ ಪೈಲ್ವಾನರ ಕುಸ್ತಿ ಸ್ಪರ್ಧೆ ಹಾಗೂ ಜಿಯಾರತ್ ನೆರವೇರಿತು.

ಇದೇ ವೇಳೆ ಉರುಸ್‌ನ ಪ್ರಮುಖ ಪೇರೋಜ್ ಪಟೇಲ್ ಅವರು ಮಾತನಾಡಿ, ಜಕ್ರೀಯಾ ಅವರ ಉರುಸ್ ಶಾಂತಿ ಸೌಹಾರ್ದ ಸಂಕೇತವಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಸಹ ರಾಜ್ಯ ಮತ್ತು ಅನ್ಯ ರಾಜ್ಯಗಳಿಂದ ಬಂದ ಭಕ್ತಾದಿಗಳು ದರ್ಶನಾಶೀರ್ವಾದ ಪಡೆದುಕೊಳ್ಳುತ್ತಿರುವುದು ಇಲ್ಲಿನ ದರ್ಗಾದ ವಿಶೇಷತೆ ಸಾರಿದೆ ಎಂದರು.

ಇಂದಿಗೂ ಗ್ರಾಮದಲ್ಲಿ ಸೌರ್ಹಾದತೆ ಮೆರೆದಿದೆ. ಇಲ್ಲಿನ ಹಿಂದು ಮುಸ್ಲಿಂರ ಸೇರಿ ಪರಸ್ಪರ ಉರುಸ್‌ನ್ನು ಹಬ್ಬದ ರೀತಿಯಲ್ಲಿ ತಮ್ಮ ಮನೆಗಳಲ್ಲಿ ಆಚರಿಸುವ ಮೂಲಕ ದರ್ಗಾಕ್ಕೆ ಬಂದು ಹರಕೆ ತೀರಿಸುವುದು ಮತ್ತು ದರ್ಶನ ಪಡೆಯುವ ಸಾಂಪ್ರದಾಯ ಮತ್ತು ಸೌಹಾರ್ದತೆಯನ್ನು ಕಳೆದ ೬೭೦ ವರ್ಷಗಳಿಂದ ಕೈಗೊಳ್ಳುತ್ತಾ ಬಂದಿರುವುದು ದೊಡ್ಡ ಪರಂಪರೆ ಇಂದಿಗೂ ಮುಂದುವರೆದು ಬಂದಿದೆ. ಇದಕ್ಕೆ ಭಕ್ತರೇ ಸಾಕ್ಷಿಯಾಗಿದ್ದಾರೆ ಎಂದು ಹೇಳಿದ ಅವರು, ಇಂದು ದೇಶದಲ್ಲಿನ ಕಲುಷಿತ ವಾತಾವರಣದಲ್ಲೂ ಹಿಂದೂ ಮುಸ್ಲಿಂರು ಒಗ್ಗೂಡಿ ಈ ಉರುಸ್ ಆಚರಣೆ ಕೈಗೊಳ್ಳುತ್ತಿರುವುದು ದೇಶದ ವಿವಿಧತೆಯಲ್ಲೆ ಏಕತೆಯನ್ನು ಮರುಕಳುಸುತ್ತಿದೆ ಎಂದು ಭಕ್ತಾದಿಗಳಿಗೆ ಅವರು ಶುಭ ಹಾರೈಸಿದರು.

ಅಂಬೇವಾಡ ಗ್ರಾಮ ಸೇರಿದಂತೆ ಆಳಂದ, ಸರಸಂಬಾ, ಸಕ್ಕರಗಾ, ಹಿರೋಳಿ ಕಾಮನಳಿ ಸೇರಿದಂತೆ ತಾಲೂಕು ಜಿಲ್ಲೆ ಇನ್ನಿತರ ಭಾಗಗಳಿಂದ ಭಕ್ತಾದಿಗಳು ಉರುಸ್‌ನಲ್ಲಿ ಪಾಲ್ಗೊಂಡಿದ್ದರು.

emedialine

Recent Posts

ಭಕ್ತರು ಹೆಚ್ಚಿನ ಸಹಾಯ ಸಹಕಾರ ಮನೋಭಾವನೆ ಹೊಂದಲು ಕರೆ

ಕಲಬುರಗಿ; ಮೈಂದರಗಿಯ ಪೂಜ್ಯ ಶ್ರೀ. ಮೃತುಂಜ್ಯಯ ಸ್ವಾಮಿಗಳು (ವಿರಕ್ತ ಮಠ), (ಆಕಾಶ ಮುತ್ಯಾವರು) ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ…

5 hours ago

ಡೆಂಗ್ಯೂಜ್ವರ ಹಾಗೂ ಚಿಕನ್ ಗುನ್ಯ್ ಜ್ವರ ನಿಯಂತ್ರಣಕ್ಕೆ ಸಹಕರಿಸಲು ಶಾಸಕ ಅಲ್ಲಪ್ರಭು ಪಾಟೀಲ ಸಲಹೆ

ಕಲಬುರಗಿ: ಇತ್ತಿಚಿನ ದಿನಗಲ್ಲಿ ಡೆಂಗ್ಯೂಜ್ವರ ಹಾಗೂ ಚಿಕನ್ ಗುನ್ಯ್ ಜ್ವರ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಲು ಹಾಗೂ ಅಧಿಕಾರಿಗಳಿಗೆ ದಕ್ಷಿಣ ಮತಕ್ಷೇತ್ರದ…

5 hours ago

ಕಲಬುರಗಿ; ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕಲಬುರಗಿ; ಕಲಬುರಗಿ ಜಿಲ್ಲೆಯ ಒಂಭತ್ತು ಶಿಶು ಅಭಿವೃದ್ಧಿ ಯೋಜನೆಗಳ ಕಚೇರಿಯಲ್ಲಿ ಖಾಲಿಯಿರುವ 61 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 238 ಅಂಗನವಾಡಿ…

5 hours ago

ನೀರಾವರಿ ಸಲಹಾ ಸಮಿತಿಗೆ ರೈತ ಹೋರಾಟಗಾರರ ತೆಗೆದುಕೊಳ್ಳಿ; ಮಲ್ಲಿಕಾರ್ಜುನ ಸತ್ಯಂಪೇಟೆ

ಸುರಪುರ: ಕೃಷ್ಣಾ ಕಾಲುವೆಗಳಿಗೆಗೆ ನೀರು ಹರಿಸಲು ನಿರ್ಣಯ ಕೈಗೊಳ್ಳಲು ನಡೆಸುವ ನೀರಾವರಿ ಸಲಹಾ ಸಮಿತಿಗೆ ರೈತ ಹೋರಾಟಗಾರರನ್ನು ಸೇರಿಸಿಕೊಳ್ಳಬೇಕು ಎಂದು…

6 hours ago

ಅಖಿಲ ಭಾರತ ವೀ.ಲಿಂ ಮಹಾಸಭಾ ನೂತನ ಅಧ್ಯಕ್ಷ ನಿದೇರ್ಶಕರ ನೇಮಕ

ಸುರಪುರ: ತಾಲೂಕ ವೀರಶೈವ ಲಿಂಗಾಯಕ ಸಮಿತಿಯಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೂಡ ಎರಡು ತಾಲೂಕಿನ ವೀರಶೈವ ಲಿಂಗಾಯತ…

6 hours ago

ಡೆಂಘೀ ವಿರೋಧಿ ಮಾಸಾಚರಣೆ | ಮನೆಯ ಹೊರಗೂ ಸ್ವಚ್ಛತೆಗೆ ಆದ್ಯತೆ ನೀಡಿದರೆ ಯಾವ ಕಾಯಿಲೆ ಬರದು

ಸುರಪುರ: ಎಲ್ಲರು ತಮ್ಮ ಮನೆಯೊಳಗೆ ಸ್ವಚ್ಛತೆಗೆ ಆದ್ಯತೆ ನೀಡುತ್ತಾರೆ,ಅದರಂತೆ ಮನೆಯ ಹೊರಗೂ ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ ಡೆಂಘೀ ಸೇರಿದಂತೆ ಯಾವುದೇ…

6 hours ago