ಬಿಸಿ ಬಿಸಿ ಸುದ್ದಿ

ಪೌರಾಯುಕ್ತರ ಬೇಜವಾಬ್ದಾರಿ ನಗರಸಭೆ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿತ

ಶಹಾಬಾದ:ಕಲಬುರಗಿ ಜಿಲ್ಲೆಯ ಏಕೈಕ್ ದೊಡ್ಡ ನಗರ ಹಾಗೂ ನಗರಸಭೆಯನ್ನು ಹೊಂದಿರುವ ಶಹಾಬಾದ ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದ ಬೇಜವಾಬ್ದಾರಿಯಿಂದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದ್ದು, ಇದರಿಂದ ಸಾರ್ವಜನಿಕರು ದಿನನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಪರದಾಡುವಂಥ ಪರಿಸ್ಥಿತಿ ಬಂದಿದೆ.

ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದಿಂದ ನಗರದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ.ಜನರು ಕೆಲಸ ಕಾರ್ಯಗಳಿಗೆ ಬಂದರೆ ಆಸನಗಳೆಲ್ಲಾ ಖಾಲಿ ಖಾಲಿ ಕಾಣುತ್ತವೆ.ಕೇಳಿದರೆ ಬರುತ್ತಿದ್ದಾರೆ ಎಂದು ಸೇವಕರು ಹೇಳುತ್ತಾರೆ.ಇವರಿಗೆ ಯಾರು ಹೇಳೋರು ಕೇಳೋರು ಇಲ್ಲದಂತಾಗಿದೆ.ಇದರಿಂದ ಇವರು ಆಡಿದ್ದೆ ಆಟ, ಮಾಡಿದ್ದೆ ಮಾಟ ಎಂಬಂತಾಗಿದೆ. ಕೆಲವರು ನಾಲ್ಕಾರು ದಿನಗಳಿಗೊಮ್ಮೆ ಬಂದು ಸಹಿ ಮಾಡಿ ಹೋಗುತ್ತಾರೆ.ಇನ್ನು ಕೆಲವರು ತಡವಾಗಿ ಬಂದು ಬೇಗನೆ ಹೋಗುತ್ತಾರೆ.ಇನ್ನು ಕೆಲವರು ಯಾವಾಗ ಬರುತ್ತಾರೆ ಯಾವಾಗ ಹೋಗುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ.

ಇದಕ್ಕೆಲ್ಲಾ ಕಡಿವಾಣ ಹಾಕಬೇಕಾದ ಪೌರಾಯುಕ್ತರೇ ಮನಸ್ಸಿಗೆ ಬಂದಂತೆ ಬರುವಾಗ ಸಿಬ್ಬಂದಿಗಳ ಮೇಲೆ ಹೇಗೆ ಹಿಡಿತ ಸಾಧಿಸುತ್ತಾರೆ ಎಂಬುದು ನಾಗರಿಕರ ಪ್ರಶ್ನೆ. ಇತ್ತ ಸಾರ್ವಜನಿಕರು, ನಗರಸಭೆಯ ಸದಸ್ಯರು ಕಚೇರಿಗೆ ಬಂದರೆ ಪೌರಾಯುಕ್ತರು ಎಇಇ, ಜೆಇ ಗಳು ಕೂಡ ಕಚೇರಿಯಲ್ಲಿ ಕಾಣುವುದಿಲ್ಲ. ಎಇಇ,ಜೆಇ ಒಂದು ದಿನವಾದರೂ ರಸ್ತೆಗೆ ಇಳಿದು ನಗರದಲ್ಲಿ ಏನು ಸಮಸ್ಯೆಯಿದೆ ಎಂದು ವಾಹನದಿಂದ ಕೆಳಗಿಳಿದ ಉದಾಹರಣೆಗಳು ಸಿಗುವುದಿಲ್ಲಕರೆ ಮಾಡಿ ಕೇಳಿದರೆ ಕಾಮಗಾರಿ ವೀಕ್ಷಣೆ ಮಾಡಲು ಬಂದಿದ್ದೆವೆ ಎಂದು ಸುಳ್ಳು ಹೇಳುತ್ತಾರೆ.ಕಚೇರಿಗೆ ಬಂದರೂ ಕೂಡುವುದಿಲ್ಲ. ಗುತ್ತಿಗೆದಾರರ ಜತೆಗೆ ಹೋಗಿ ಕರ್ತವ್ಯ ಪಾಲನೆ ಸಮಯದಲ್ಲಿ ದಾಬಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಈ ಸಂಬಂಧ ಪೌರಾಯುಕ್ತರಿಗೆ ಕರೆ ಮಾಡಿ ತಿಳಿಸಿದರೇ ವಿಡಿಯೋ ಕಾನ್ಫಿರೆನ್ಸ್ ಸಭೆಗೆ ಬಂದಿದ್ದೆನೆ ಎಂದು ಹೇಳುತ್ತಾರೆ.ಹೊರತು ಸಿಬ್ಬಂದಿಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ.ಇದರಿಂದ ನಗರಸಭೆಯ ಆಡಳಿತ ಯಂತ್ರ ಕೆಟ್ಟು ಹೋಗಿದೆ.ಇಲ್ಲಿ ಚುನಾಯಿತ ಪ್ರತಿನಿಧಿಗಳ ಕೆಲಸವಾಗುತ್ತಿಲ್ಲ.ದಿನನಿತ್ಯ ಕಚೇರಿಗೆ ಬಂದರೆ ಅಧಿಕಾರಿಗಳು ಕೈಯಿಗೆ ಸಿಗುತ್ತಿಲ್ಲ.ನಮ್ಮ ಸಮಸ್ಯೆ ಈ ರೀತಿಯಾದರೆ ಜನಸಾಮನ್ಯರ ಪರಿಸ್ಥಿತಿ ಹೇಗಾಗಬೇಡ ಹೇಳಿ ಎಂದು ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ ಹಾಗೂ ಸದಸ್ಯ ರವಿ ರಾಠೋಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಚೇರಿಗೆಗ ಬಾರದ,ಸಮಯಕ್ಕೆ ಸರಿಯಾಗಿ ಬಾರದಿರುವುದು ಮತ್ತು ಯಾವುದೇ ಕೆಲಗಳು ಆಗಬೇಕಾದರೆ ಅಲೆದಾಡಿಸುವುದು, ಹಣ ಕೊಟ್ಟ ಕೊಟ್ಟರೆ ಮಾತ್ರ ಕೆಲಸವಾಗುವ ಪರಿಸ್ಥಿತಿಯನ್ನು ತಂದಿಟ್ಟಿದ್ದಾರೆ.ಈ ಬಗ್ಗೆ ಹಲವಾರು ಬಾರಿ ಪಡಿ ಅವರ ಗಮನಕ್ಕೂ ತಂದರೂ ಅವರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ.ನಗರಸಭೆಯಲ್ಲಿ ಹಗರಣಗಳು ನಡೆದರೂ ಯಾರು ಬಂದು ಪರಿಶೀಲನೆ ಮಾಡಲು ಮುಂದಾಗುತ್ತಿಲ್ಲ ಎಂದು ನಗರಸಭೆಯ ಸದಸ್ಯರೇ ದೂರುತ್ತಿದ್ದಾರೆ.

ಈ ಕೂಡಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ಶಿಸ್ತು ಕ್ರಮಕೈಗೊಳ್ಳಬೇಕು.ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಇಲ್ಲಿನ ಎಲ್ಲಾ ಸಿಬ್ಬಂದಿಗಳನ್ನು ಇಲ್ಲಿಂದ ಎತ್ತಂಗಡಿ ಮಾಡಿ ಬೇರೆ ಸಿಬ್ಬಂದಿ, ಅಧಿಕಾರಿ ವರ್ಗದವರನ್ನು ನೇಮಿಸಿ, ತುಕ್ಕು ಹಿಡಿದಿರುವ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಬೇಕೆಂದು ಶಹಾಬಾದ ನಾಗರಿಕರು ಆಗ್ರಹಿಸಿದ್ದಾರೆ.

ನಗರಸಭೆಯಲ್ಲಿ ಬುಧವಾರದಂದು ಬಹುತೇಖ ಎಲ್ಲಾ ಸಿಬ್ಬಂದಿಗಳು ಬಾರದಿರುವುದರಿಂದ ಸಾರ್ವಜನಿಕರಿಗೆ ಎಲ್ಲಿಲ್ಲದ ತೊಂದರೆಯಾಯಿತು.ಇದರಿಂದ ರೋಸಿ ಹೋದ ಜನರು ನಗರಸಭೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.ಅಲ್ಲದೇ ಚುನಾಯಿತ ಪ್ರತಿನಿಧಿಗಳಾದ ಹಾಗೂ ನಗರದ ಮುಖಂಡರಾದ ನೀವು ಏನು ಮಾಡುತ್ತಿದ್ದೀರಿ ಎಂದು ಜನರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ.ಬೇಜವಾಬ್ದಾರಿ ಅಧಿಕಾರಿಗಳು ಶಹಾಬಾದ ಬರಬಾದ್ ಮಾಡುವತ್ತ ಹೊರಟಿದ್ದಾರೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಈ ಬಗ್ಗೆ ವಿಶೇಷ ಗಮನಹರಿಸಿ ಮುಕ್ತಿ ನೀಡಬೇಕು. – ಡಾ.ರಶೀದ ಮರ್ಚಂಟ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್.

ಬಹುತೇಕ ಅಧಿಕಾರಿ ಹಾಗೂ ಸಿಬ್ಬಂದಿಗಳು ಕಚೇರಿ ಸಮಯ ಪಾಲನೆ ಮಾಡುವುದಿಲ್ಲ.ಅಧಿಕಾರಿಗಳು ಗುತ್ತಿಗೆದಾರರ ಜತೆ ಕರ್ತವ್ಯ ಸಮಯದಲ್ಲಿ ದಾಬಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ.ಇಲ್ಲಿ ಹಣ ಕೊಟ್ಟರೆ ಮಾತ್ರ ಕೆಲಸವಾಗುತ್ತವೆ.ಇವರಿಗೆ ಲಂಗು ಲಗಾಮವಿಲ್ಲದ ಹಾಗೇ ಆಗಿದೆ. ಬಸವರಾಜ ಎಂಬ ಪೌರಾಯುಕ್ತರು ಬಂದಾಗನಿಂದ ಸಂಪೂರ್ಣ ಆಡಳಿತ ಯಂತ್ರ ಕುಸಿದು ಹೋಗಿದೆ.ಕೂಡಲೇ ಜಿಲ್ಲಾಧಿಕಾರಿಗಳು ಕ್ರಮಕೈಗೊಂಡು ನಾಗರಿಕರಿಗೆ ಉತ್ತಮ ಸೇವೆ ಒದಗಿಸುವತ್ತ ಮುಂದಾಗಬೇಕು- ಶರಣು ಪಗಲಾಪೂರ ಮಾಜಿ ಸ್ಥಾಯಿ ಸಮಿತಿ ಸದಸ್ಯ.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

2 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

3 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

3 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

3 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

4 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

4 hours ago