ಪರ್ಯಾಯ ಸಂಸ್ಕತಿ ನಿರ್ಮಾಣ ಶರಣರ ಮುಖ್ಯ ಗುರಿ

ಕಲಬುರಗಿ: ಶರಣರ ಆಂದೋಲನ ಜಗತ್ತಿನ ಚರಿತ್ರೆಯಲ್ಲಿ ಬಹಳ ವಿಶಿಷ್ಟವಾಗಿದೆ. ಈ ಆಂದೋಲನ ಅದ್ವಿತೀಯವಾದುದಾಗಿದೆ ಎಂದು ಪ್ರಗತಿಪರ ಚಿಂತಕ ಪ್ರೊ. ಆರ್.ಕೆ. ಹುಡಗಿ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾ, ಬಸವಪರ ಸಂಘಟನೆಗಳ ಒಕ್ಕೂಟ, ಬಸವ ಜಯಂತಿ ಉತ್ಸವ ಸಮಿತಿ ಆಶ್ರಯದಲ್ಲಿ ನಗರದ ಬಸವ ಮಂಟಪದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಾದಿ ಶರಣರ ಉದ್ದೇಶ ಕೇವಲ ಸ್ಥಾಪನೆ ಆಗಿರಲಿಲ್ಲ. ಪರ್ಯಾಯ ಸಂಸ್ಕೃತಿ ನಿರ್ಮಾಣ ಮಾಡುವುದು ಅವರ ಮುಖ್ಯ ಗುರಿಯಾಗಿತ್ತು. ಶಿಕ್ಷಣ ಸಂವಹನಕ್ಕೆ ವಚನ ಮಾಧ್ಯಮವನ್ನು ಅವರು ಬಳಸಿದರು. ಶರಣರ ಒಂದೊಂದು ವಚನಗಳು ಅಂಕಣ ಬರಹದ ವ್ಯಾಪ್ತಿ ಹೊಂದಿವೆ. ತಮ್ಮ ವೃತ್ತಿಯ ಆನುಭಾವಿಕ ನೆಲೆಯ ಪರಿಭಾಷೆಯಲ್ಲಿ ವಚನಗಳನ್ನು ಬರೆದರು. ಹೀಗಾಗಿ ವಚನಗಳೇ ಮಾಧ್ಯಮಗಳು ಎಂದು ಅಭಿಪ್ರಾಯಪಟ್ಟರು.

ಅನುಪಮ, ಅನನ್ಯ ಚಳವಳಿಯ ವಾರಸುದಾರರು ಲಿಂಗಾಯತ ಸಮಾಜ ತಮ್ಮ ನಿಜವಾದ ಅಸ್ಮಿತೆ ಕಳೆದುಕೊಳ್ಳುತ್ತಿರುವುದು ದುರಂತದ ಸಂಗತಿ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಧುತ್ತರಗಾಂವ- ಉಸ್ತುರಿ ಮಠದ ಕೋರಣೇಶ್ವರ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ವಚನ ಮಾಧ್ಯಮವನ್ನು ಬಳಸುವ ಮೂಲಕ ಮಾನವೀಯತೆ ಮೆರೆದರು. ಇವನಾರವ ಎನ್ನದೆ ಇವ ನಮ್ಮವ ಎನ್ನುವ ತಾತ್ವಿಕ ಸಿದ್ಧಾಂತವನ್ನು ಶರಣರು ಪ್ರತಿಪಾದಿಸಿದರು ಎಂದು ಹೇಳಿದರು.

ಶರಣರ ವಚನಗಳಲ್ಲಿ ಮಾಧ್ಯಮದ ಪರಿಕಲ್ಪನೆ ವಿಷಯ ಕುರಿತು ಪತ್ರಕರ್ತ ಡಾ. ಶಿವರಂಜನ ಸತ್ಯಂಪೇಟೆ, ವಚನ ಚಳವಳಿ ಜನರ ಮನ ಮನೆ ತಲುಪಲು ಪ್ರಸರಣಕ್ಕಾಗಿ ವಚನ ಮಾಧ್ಯಮ ಬಳಸಿದರು. ಅನುಭವ ಮಂಟಪದಲ್ಲಿ ಹುರಿಗೊಂಡ ವಿಚಾರ, ಕಾಯಕ, ದಾಸೋಹ, ಜಾತಿ ನಿರ್ಮೂಲನೆ, ಸಮಾನತೆಯ ಆಲೋಚನೆಗಳನ್ನು ತಿಳಿಸಲು ಕಾಯಕವೇ ಕೈಲಾಸ, ಕಳಬೇಡ, ಕೊಲಬೇಡ ಎಂಬತಹ ಸ್ಟೇಟ್ ಮೆಂಟ್ ಗಳನ್ನು ಬಳಸಿದರು.

ಎಲೆಕ್ಟ್ರಾನಿಕ್, ವಿಸ್ಯೂವಲ್, ಪ್ರಿಂಟ್ ಮೀಡಿಯಾ ಇಲ್ಲದ 12ನೇ ಶತಮಾನದಲ್ಲಿ ಶರಣರು ಬಳಸಿದ್ದು ಜನಪದರ ಮೌಖಿಕ ಪರಂಪರೆ.‌ ಶರಣರ ವಚನಗಳು ಮೌನದಿಂದ ಬಂದವುಗಳಲ್ಲ. ಅವು ಜಾಗೃತ ಮತ್ತು ಎಚ್ಚರದ ಮನಸ್ಸಿನಿಂದ ಮೂಡಿದವುಗಳಾಗಿವೆ ಎಂದು ವಿವರಿಸಿದರು.

ಇದೇ ವೇಳೆಯಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿವಿಧ ದತ್ತಿ ಪ್ರಶಸ್ತಿ ಪಡೆದ ಹಾಗೂ ಐಎಫ್ ಡಬ್ಲೂಜೆ ಸದಸ್ಯರಾಗಿ ನೇಮಕಗೊಂಡ ಬಾಬುರಾವ ಯಡ್ರಾಮಿ, ದೇವಯ್ಯ ಗುತ್ತೇದಾರ, ಶರಣಯ್ಯ ಸ್ವಾಮಿ ಹಿರೇಮಠ, ಶಿವರಾಯ ದೊಡ್ಡಮನಿ, ರಾಜಕುಮಾರ ಉದನೂರ, ಮಂಜುನಾಥ ಜೂಟಿ, ಹಣಮಂತರಾವ ಭೈರಾಮಡಗಿ, ದೇವೇಂದ್ರಪ್ಪ ಅವಂಟಿ, ಜಯತೀರ್ಥ ಪಾಟೀಲ, ನಜೀರ್ ಮಿಯಾ ಹಟ್ಟಿ ಹಾಗೂ ಬಸವ ಜಯಂತಿ ಉತ್ಸವದ ದಾಸೋಹಿಗಳಿಗೆ ಸನ್ಮಾನ ಮಾಡಲಾಯಿತು.‌

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿದ್ದ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಶಾಬಾದಿ, ಸಮಿತಿ ಗೌರವಾಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ನಳಿನಿ ಮಹಾಗಾಂವಕರ ಮಾತನಾಡಿದರು.

ಶಿವಕುಮಾರ ಬಿದರಿ ನಿರೂಪಿಸಿದರು. ಆರ್.ಜಿ. ಶೆಟಗಾರ ಸ್ವಾಗತಿಸಿದರು. ನಾಗೇಂದ್ರಪ್ಪ ಮಾಡ್ಯಾಳ, ಹಣಮಂತ ಗುಡ್ಡಾ ಪ್ರಾರ್ಥಿಸಿದರು. ಬಸವರಾಜ ಧೂಳಾಗುಂಡಿ ವಂದಿಸಿದರು. ಶ್ರೀಕಾಂತ ಚೋಕಾ, ಮಲ್ಲಮ್ಮ ಸಿದ್ರಾಮಪ್ಪ ಬಾಲಪಗೋಳ್, ಮಾಲತಿ ರೇಶ್ಮಿ, ಮಾಲಾ‌ಕಣ್ಣಿ, ಬಸವರಾಜ ರುಕ್ಮಾಪುರ, ಹಣಮಂತರಾಯ ಕುಸನೂರ, ಅಯ್ಯನಗೌಡ ಪಾಟೀಲ, ಸಂಗಮೇಶ ಗುಬ್ಬೆವಾಡ ಮತ್ತಿತರರಿದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

10 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

13 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

13 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

13 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

13 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

13 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420