ಕಲಬುರಗಿ: ಒಡೆದು ಹೋದ ನೀರಿನ ಕೊಳವೆ ಮಾರ್ಗಗಳನ್ನು ದುರಸ್ತಿ ಮಾಡಿ, ಒಂದು ವಾರದೊಳಗೆ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು? ಎಂದು ಮಹಾನಗರ ಪಾಲಿಕೆ ಮೇಯರ್ ವಿಶಾಲ ದರ್ಗಿ ಅವರು ಸೂಚಿಸಿದರು.
ಪಾಲಿಕೆ ಕಚೇರಿಯಲ್ಲಿ ಸಭೆ ನಡೆಸಿ ಈ ಸಭೆಯಲ್ಲಿ ಮಾತನಾಡುತ್ತಾ ನೀರು ಪೂರೈಕೆ ಜಾಲ ನಿರ್ಮಿಸುವ ಹೊಣೆ ಹೊತ್ತ ಎಲ್ ಆಂಡ್ ಟಿ ಕಂಪನಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ಏ ಗ ಮ ದ (ಕೆ ಯು ಐ ಡಿ ಎಫ್ ಸಿ) ದುರಸ್ತಿ ಮಾಡಬೇಕು’ ಎಂದರು. ಅಧಿಕಾರಿಗಳು ಸಿಬ್ಬಂದಿಯೊಂದಿಗೆ ನೀರಿನ ಕುರಿತು ಸಭೆ ನಡೆಸಿ ಅವರು ಹೇಳಿದರು.
ಮುಂಗಾರ ಮಳೆ ಕೈಕೊಟ್ಟಿದ್ದರಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ನೀರಿನ ಅಭಾವ ತಗ್ಗಿಸಲು ಕೊಳವೆ ಬಾವಿ ಹಾಗೂ ಟ್ಯಾಂಕರ್ಗಳ ಮೂಲಕ ನೀರು ಪೂರೈಕೆ ಮಾಡಬೇಕು. ಪೈಪ್ಲೈನ್ಗಳಲ್ಲಿ ಕುಲಷಿತ ನೀರು ಸೇರದಂತೆ ಒಡೆದಿರುವ ಪೈಪ್ಗಳನ್ನು ತಕ್ಷಣವೇ ದುರಸ್ತಿ ಮಾಡಬೇಕು ಎಂದರು.
ಟೆಂಡರ್ ಷರತ್ತಿನ ಪ್ರಕಾರ ಎಲ್ ಅಂಡ್ ಟಿ ಸುಮಾರು 900 ಕಿ.ಮೀ. ಪೈಪ್ ಲೈನ್ ಅಳವಡಿಸಬೇಕಿತ್ತು. ಪ್ರಸ್ತುತ 130 ಕಿ.ಮೀ. ಮಾತ್ರವೇ ಅಳವಡಿಸಲಾಗಿದೆ. 3ನೇ ತನಿಖಾ ತಂಡದಿಂದ ಪರಿವೀಕ್ಷಣೆ ಮಾಡಿಸದೆ ಕಾಮಗಾರಿಯೂ ಮುಗಿಸಲಾಗಿದೆ. ಇದರಲ್ಲಿ ಕೇವಲ 2 ಕಿ.ಮೀ. ಹೈಡ್ರೋಟೆಸ್ಟಿಂಗ್ ಮಾಡಿದ್ದು, ಉಳಿದ ಪೈಪ್ಲೈನ್ ಮಾರ್ಗಕ್ಕೆ ಅನುಮತಿ ಹೇಗೆ ನೀಡಲಾಗಿದೆ’ ಎಂದು ತರಾಟೆಗೆ ತೆಗೆದುಕೊಂಡರು. ಉದ್ದೇಶಿತ ಯೋಜನೆಯು ಐದು ವರ್ಷಗಳಲ್ಲಿ(2025ಕ್ಕೆ) ಪೂರ್ಣಗೊಳ್ಳಬೇಕು. ಆದರೆ, ಇಲ್ಲಿಯವರೆಗೆ ನಗರದ ಯಾವುದೇ ಒಂದು ವಾರ್ಡ್ನಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ ಎಂದರು.
ಕುಡಿಯುವ ನೀರಿನ ಸಮಸ್ಯೆ, ಪೈಪ್ಲೈನ್ ದುರಸ್ತಿ ಕಾಮಗಾರಿಗೆ ಕಾರ್ಯ ಕಾಮಗಾರಿಗೆ ಸಂಬಂಧಿಸಿದ ನ್ಯನತೆಗಳ ಬಗ್ಗೆ ಶ್ರೀಘ್ರವೇ ಉಪ ಮೇಯರ್, ವಿರೀಧ ಪಕ್ಷದ ನಾಯಕರು, ಪಾಲಿಕೆ ಆಯುಕ್ತರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿವೀಕ್ಷಣೆ ಮಾಡಲಾಗುವುದು, ನ್ಯೂನತೆಗಳು ಕ0ಡುಬ0ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡು, ಎಸ್ ಅಂಡ್ ಟಿ ಏಜೆನ್ಸಿಯನ್ನು ರದ್ದುಗೊಳಿಸಿ ಬೇರೆಯವರಿಗೆ ಕೊಡಲಾಗುವುದು. ಎಂದು ಎಚ್ಚರಿಸಿದರು.
ಈ ಸಭೆಯಲ್ಲಿ ಉಪಮೇಯರ್ ಶಿವಾನಂದ ಪಿಸ್ತಿ, ನಗರ ಕುಡಿಯುವ ನೀರು ಯೋಜನೆಯ ಸೂಪರಿಂಟೆಂಡಿಂಗ್ ಎಂಜನಿಯರ್ ಕಾಂತರಾಜ್, ಇಇ(ಅಭಿವೃದ್ಧಿ ಕೆ.ಎಸ್. ಪಾಟೀಲ, ಇಇ ಶಿವಕುಮಾರ, ಪ್ರಧಾನ ವ್ಯವಸ್ಥಾಪಕ ಸಂಜಯ್ ಕುಮಾರ್ ಸೇರಿದಂತೆ ಸಿಬ್ಬಂದಿ ಇದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಮಂಡಳಿ ಪಣ ತೊಟ್ಟಿದ್ದು, ಬರುವಂತಹ…
ಸುರಪುರ: ನಗರದಲ್ಲಿ ವಿವಿಧ ಅಭಿವೃಧ್ಧಿ ಕಾಮಗಾರಿಗಳಿಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಈ…
ಸುರಪುರ:ದೇಶದಲ್ಲಿ ಹಲವು ಸಂಸ್ಕøತಿಗಳು ಇರುತ್ತವೆ,ಅಂತಹ ಸಂಸ್ಕøತಿಗಳಲ್ಲಿ ಕನ್ನಡ ಮತ್ತು ಕರ್ನಾಟಕ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಕಳೆದ 82 ವರ್ಷಗಳಿಂದ…
ಸುರಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸುರಪುರ ತಾಲೂಕ ನೂತನ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ ಎಂದು ಮಹಾಸಭಾ ತಾಲೂಕ…
ಕಲಬುರಗಿ: ಮಹಾನಗರ ಪಾಲಿಕೆಯ ಅಧೀಕ್ಷಕ, ಅಭಿಯಂತರ ಹಾಗೂ ಉಪ ಆಯುಕ್ತ ಆರ್.ಪಿ. ಜಾಧವ ಅವರನ್ನು ಅಮಾತುಗೊಳಿಸಿ ಮನೆಗೆ ಕಳಿಸಬೇಕು ಎಂದು…
ಕಲಬುರಗಿ: 371ನೇ ಜೇ ಕಲಂ ಸೌಲತ್ತುಗಳ ಬಗ್ಗೆ ಡಾ. ಲಕ್ಷ್ಮಣ ದಸ್ತಿಯವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಅಂಜುಮನ್ ಸಂಸ್ಥೆಯಿಂದ ಅ.6.…