ಬಿಸಿ ಬಿಸಿ ಸುದ್ದಿ

ಸಸಿ ಹಂತದಲ್ಲಿಬೆಳಗಳ ರೋಗ ನಿರ್ವಹಣೆ

ಕಲಬುರಗಿ; ಜಿಲ್ಲೆಯ ಕಾಳಜಿ, ಕಮಲಾಪೂರ, ಚಿಂಚೋಳಿ ಭಾಗದಲ್ಲಿ ಈ ಹಿಂದೆ ಅಲ್ಪ ಮಳೆಯಾಗಿದ್ದು ಬಿತ್ತನೆಯಾದ ತೊಗರಿ ಸಸಿಗಳು 12-15 ದಿನಗಳ ಅವದಿಯಲ್ಲಿ ಸಸಿಗಳು ಅಲಲ್ಲಿ ಸೊರಗುತ್ತಿವೆ.

ಆರಂಭಿಕ ಹಂತದಲ್ಲಿ ಮುಂಗಾರು ಮಳೆ ಒಂದು ತಿಂಗಳ ಇಪ್ಪತ್ತು ದಿನ (50 ದಿವಸಗಳು) ತಡವಾಗಿದ್ದು, ಜುಲೈ 17ಕ್ಕೆ ತಲುಪಿದರೂ ತೇವಾಂಶದ ಕೊರತೆ ಕಪ್ಪು ಮಣ್ಣಿನಲ್ಲಿ ಕಂಡು ಬಂದಿದೆ. ಅಫಜಲಪೂರ, ಆಳಂದ, ಕಲಬುರಗಿ ಭಾಗದಲ್ಲಿ ಬೆಳೆದ ಕಬ್ಬು ಕೂಡಾ ಬಾವಿ ಮತ್ತು ಕೊಳವೆ ಬಾವಿಯಲ್ಲಿ ನೀರಿನ ಕೊರತೆಯಿಂದಾಗಿ ಅಲಲ್ಲಿ ಗರಿಗಳು ಒಣಗದಂತೆ ಒಣಗುತ್ತಿವೆ. ಇದ್ದ ಕಬ್ಬು ಸಂರಕ್ಷಣೆಗಾಗಿ ರೈತರು ಎರೆಜಲ, ನೀರಿನಲ್ಲಿ ಕರುಗುವ ಎನ್.ಪಿ.ಕೆ 5 ಮೀಲಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುತ್ತಿದ್ದಾರೆ. ಇತ್ತ ಆರಂಭಿಕ ಅಲ್ಪ ಮಳೆಗೆ ಶಂಕದ ಹುಳು, ಗೊಣ್ಣೆ ಹುಳು, ಎಲೆಕತ್ತರಿಸುವ ಹುಳಗಳ ಕಾಟವು ವಿವಿಧ ಬೆಳೆಗಳಲ್ಲಿ ಕಂಡು ಬಂದಿದೆ.

ನೆಟ ರೋಗ ಕಂಡು ಬಂದಲ್ಲಿ ಟ್ರೈಕೋಡರ್ಮಾ 5 ಗ್ರಾ ಅಥವಾ ಕಾರ್ಬನ್ ಡೈಜಿಂ 2 ಗ್ರಾ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಕಾಂಡ ಮತ್ತು ಬೇರು ಭಾಗ ನೆನೆಯುವಂತೆ ಸಿಂಪಡಿಸಬೇಕು. ಗ್ರಾಮದಿಂದ ಗ್ರಾಮಕ್ಕೆ, ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹಾಗೂ ಒಚಿದೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ದಟ್ಟ ಮೂಡ ವಿದ್ದರೂ ಮಳೆಯ, ಹವಾಮಾನ ಬದಲಾವಣೆ ವೈಪ್ಯರಿತ್ಯ ಹೆಚ್ಚಾಗಿ ಕಂಡು ಬಂದಿದೆ. ಬಂಜರು ಭೂಮಿ ಪ್ರದೇಶದಲ್ಲಿ ಅಲ್ಪಸ್ವಲ್ಪ ಮಳೆ ಬಿದ್ದಲ್ಲಿ ಅರಣ್ಯ ಕೃಷಿ, ಹಣ್ಣಿನ ಗಿಡಗಳನ್ನು, ವನಮಹೋತ್ಸವ ಜಾಗೃತಿ ಜನತೆಯಲ್ಲಿ ಮೂಡಬೇಕಾಗಿದೆ.

ಟಮ್ಯಾಟೋ, ಬದನಿ, ಬೆಂಡೆಕಾಯಿ, ಮೇಣಸಿನಕಾಯಿ, ಚವಳಿಕಾಯಿ, ಸವತೆಕಾಯಿ, ಹೀರೆಕಾಯಿ ಬೆಳೆದ ನೀರಾವರಿ ರೈತರು ರಸ ಹೀರುವ ಕೀಟ ನಿಯಂತ್ರಣಕ್ಕೆ ಹಳದಿ ಮೋಹಕ ಅಂಟು ಬಲೆ ಎಕರೆಗೆ 10 ಅಳವಡಿಸಬೇಕು. ಬೇವಿನ ಎಣ್ಣೆ 2 ಮಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸದಲ್ಲಿ ಕೀಟಗಳಿಂದ ಪ್ರಸಾರವಾಗುವ ವೈರಸ್ಸ ರೋಗವನ್ನು ಕಡಿಮೆ ಮಾಡಬಹ್ಮದೆಂದು ಕೆವಿಕೆ ಮುಖ್ಯಸ್ಥರಾದ ಡಾ. ರಾಜು ಜಿ. ತೆಗ್ಗಳ್ಳಿ ಹಾಗೂ ಸಸ್ಯರೋಗ ತಜ್ಞರಾದ ಡಾ. ಜಹೀರ್ ಅಹೆಮದ್ ರವರು ತಿಳಿಸಿದರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

2 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

3 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

3 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

3 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

4 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

4 hours ago