ಬಿಸಿ ಬಿಸಿ ಸುದ್ದಿ

ಬರಗಾಲ ಘೋಷಿಸಿ, ವಿಪತ್ತು ನಿರ್ವಹಣಾ ಕಾಯ್ದೆಯಡಿ ಸೌಲಭ್ಯ ನೀಡಲು ಸಿಪಿಐಎಂ ಆಗ್ರಹ

ಕಲಬುರಗಿ; ಜಿಲ್ಲೆಯನ್ನು ಬರಗಾಲ ಘೋಷಣೆ, ಮನರೇಗಾ ಹೆಚ್ಚುವರಿ 100 ದಿನಗಳಿಗೆ ಆಗ್ರಹಿಸಿ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ ಅನುಸಾರ ಸೌಲಭ್ಯಗಳಿಗಾಗಿ ಮತ್ತಿತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಸಿಪಿಐಎಂ ಪಕ್ಷದಿಂದ ಜಗತ್ ವೃತ್ತದಿಂದ ಜಿಲ್ಲಾ ಪಂಚಾಯತ ಕಚೇರಿಗೆ ಮೆರವಣಿಗೆ ನಡೆಸುವ ಮೂಲಕ ಆಗ್ರಹಿಸಿದರು.

ಈ ಬಾರಿ ಮಳೆಯ ತೀವ್ರ ಕೊರತೆ ಎದುರಾಗಿದೆ. ಬಿಸಿಲು ಕೇಕೆ ಹಾಕುತ್ತಿದೆ. ‌ನೀರು ಬತ್ತಿ ಹೋಗಿದೆ. ಹೊಲಗಳಲ್ಲಿ ಬೀಜ ಬಿತ್ತಲಾಗದೆ ಬಿಕೊ ಎನ್ನುತ್ತಿವೆ. ರೈತರು, ಕೂಲಿಕಾರ್ಮಿಕರು ಕಂಗಾಲಾಗಿದ್ದಾರೆ. ಗ್ರಾಮೀಣ ಪ್ರದೇಶವಂತೂ ಇನ್ನಿಲ್ಲದಂತೆ ತಲ್ಲಣ, ಸಂಕಟ ಎದುರಿಸುತ್ತಿದೆ. ಜನ ಜಾನುವಾರು ಬರದ ಛಾಯೆಗೆ ನಲುಗಿ ಹೋಗುತ್ತಿದ್ದಾರೆ. ಬಾಳುವೆಯ ದಿನದ ಖರ್ಚಿಗೂ ಹಣವಿಲ್ಲದಾಗಿದೆ. ಗುಳೆ ಹೋಗುವ ಪ್ರಕ್ರಿಯೆ ಹೆಚ್ಚುತ್ತಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದರು.

ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಆರಂಭಿಸಬೇಕು, ಎರಡುನೂರು (200) ದಿನಗಳಿಗೆ ಮನರೇಗಾ ಕೆಲಸದ ದಿನಗಳನ್ನು ವಿಸ್ತರಿಸಿ,  ಕೂಲಿಯನ್ನು ಏಳು ನೂರು ರೂಪಾಯಿಗೆ ಹೆಚ್ಚಿಸಬೇಕು. ನಗರದಲ್ಲಿಯೂ ಉದ್ಯೋಗ ಖಾತ್ರಿ ಕಾಯ್ದೆ ರೂಪಿಸಿ ಜಾರಿಗೊಳಿಸಬೇಕು, ತಕ್ಷಣಕ್ಕೆ ಕೂಲಿಗಾಗಿ ಕಾಳುವಿನಂತಹ ಯೋಜನೆ ರೂಪಿಸಿ ಉದ್ಯೋಗ ಸೃಷ್ಟಿಸಬೇಕು. ಜಾನುವಾರುಗಳಿಗೆ ಹುಲ್ಲು ನೀರಿನ ವ್ಯವಸ್ಥೆ ಮಾಡಬೇಕು.  ಕಾಯಕ ಬಂಧುಗಳ ಕೆಲಸದ ಹೆಚ್ಚುವರಿ ಕೂಲಿ ರೂ.4-ರೂ.5 ಅನ್ನು ಪಾವತಿ, ಮನರೇಗಾ ಕೆಲಸದ ಬಾಕಿಯನ್ನು ಕೂಡಲೆ ವಿತರಿಸಬೇಕು. ಮನರೇಗಾ ಕೆಲಸ ಕೊಡುವಲ್ಲಿ ವಿಳಂಬ ಮಾಡುತ್ತಿರುವ ಮತ್ತು ನಿರಾಕರಿಸುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಈ ಸಂದರ್ಭದಲ್ಲಿ ಪಕ್ಷದ ತಾಲ್ಲೂಕು ಕಾರ್ಯದರ್ಶಿ ಪಾಂಡುರಂಗ ಮಾವಿನಕರ್ ಒತ್ತಾಯಿಸಿದರು.

ಅನೇಕ ಗ್ಯಾರಂಟಿಗಳ ಕಾರಣದಿಂದ ಜನತೆಗೆ ತುಸು ನೆಮ್ಮದಿ ದೊರೆಯಲು ಸಾಧ್ಯವಿದ್ದು, ಆದಾಗ್ಯೂ ಜನರು ಬಡತನದಿಂದ ನರಳುತ್ತಿದ್ದಾರೆ.  ಮಕ್ಕಳ ಶಾಲಾ ಕಾಲೇಜು ಬದಲಿಗೆ ದುಡಿಮೆಗೆ ಹೋಗುವುದು ಅನಿವಾರ್ಯವಾಗುತ್ತಿದೆ. ಇದು ಹೆಚ್ಚು ನೋವು ತರುವ ಸಂಗತಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತ್ರಿಯು ಆಸರೆಯಾಗಿದೆ. ಆದರೆ ಅನೇಕ ಗ್ರಾಮಗಳಲ್ಲಿ ಮನರೇಗಾದಡಿ ಕೆಲಸ ಕೊಡುತ್ತಿಲ್ಲ. ಕೂಡಲೇ ಜಿಲ್ಲೆಯಾದ್ಯಂತ ಮನರೇಗಾ ಕಾಮಗಾರಿ ಆರಂಭಿಸಬೇಕಿದೆ ಎಂದು ಜಿಲ್ಲಾ ಪಂಚಾಯಿತ್ ಸಿಇಓ ಮೂಲಕ ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಸುಧಾಮ ಧನ್ನಿ, ಡಾ. ಪ್ರಭು ಖಾನಾಪುರೆ, ಪದ್ಮಿನಿ ಕಿರಣಗಿ, ಇಂದುಮತಿ ದೇಗಾಂವ, ಚಂದಮ್ಮ ಗೋಳಾ ಸೇರಿದಂತೆ ಹೋರಾಟ ನಿರತ ಸಂಘಟಕರು ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದರು.

emedialine

Recent Posts

ಮುಸ್ಲಿಮರಿಗೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸ್ಥಾನ ನೀಡಿ: ಅಬ್ದುಲ್ ರಹೀಮಾನ್ ಪಟೇಲ್

ಕಲಬುರಗಿ: ‘ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಸಮುದಾಯಕ್ಕೆ ನೀಡಬೇಕು. ಮುಂಬರುವ ದಿನಗಳಲ್ಲಿ ಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ…

12 seconds ago

ಡಾ. ಫ.ಗು. ಹಳಕಟ್ಟಿ ಯವರ ಜಯಂತಿ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ

ಕಲಬುರಗಿ: ವಚನ ಪಿತಾಮಹ ಎಂದು ಕರೆಸಿಕೊಳ್ಳುವ ಡಾ. ಫ.ಗು. ಹಳಕಟ್ಟಿ ಯವರು ಬಸವಾದಿ ಶರಣರ ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡುವ…

1 hour ago

ಮೊಬೈಲ್ ರೀಚಾರ್ಜ್‍ಗಳ ಬೆಲೆ ಹೆಚ್ಚಳ ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಪ್ರತಿಭಟನೆ

ಶಹಾಬಾದ: ಖಾಸಗಿ ಟೆಲಿಕಾಂ ಕಂಪನಿಗಳು ಮೊಬೈಲ್ ರೀಚಾರ್ಜ್‍ಗಳ ಬೆಲೆಗಳನ್ನು ಅನಿಯಂತ್ರಿತವಾಗಿ ಹೆಚ್ಚಳ ಮಾಡಿರುವುದನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಎಐಡಿವಾಯ್‍ಓ ವತಿಯಿಂದ…

2 hours ago

ಸಾರ್ವಜನಿಕರು ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಿ

ಶಹಾಬಾದ :ಎಲ್ಲರಿಗೂ ಸರಕಾರಿ ನೌಕರಿ ಬೇಕು.ಆದರೆ ಸರಕಾರಿ ಶಾಲೆಯಲ್ಲಿ ನಿಮ್ಮ ಮಕ್ಕಳು ಓದುವುದು ಬೇಡ ಎಂದರೆ ಹೇಗೆ ? ಮೊದಲು…

2 hours ago

ಪಠ್ಯಕ್ರಮ ರಚನೆ ಗುಣಾತ್ಮಕ ಅಂಶಗಳಿಂದ ಕೂಡಿರಲಿ

ವಿಜಯಪುರ: ಇಂದಿನ ಪ್ರಸ್ತುತ ಶಿಕ್ಷಣ ಪದ್ದತಿ ಕೌಶಲ್ಯಾಧಾರಿತ ಹಾಗೂ ಔದ್ಯೋಗಿಕ ಮತ್ತು ಉದ್ಯೋಗ ಪೂರಕನಂತೆ ಇರಬೇಕು ಎಂದು ಕರ್ನಾಟಕ ರಾಜ್ಯ…

3 hours ago

ಪತ್ರಕರ್ತ ಸಿದ್ರಾಮ್ ನಾಡಗೇರಿ ಪುತ್ರಿ ಸ್ಪಂದನಾ ಎಸ್. ನಡಗೇರಿಗೆ ಪತ್ರಕರ್ತರ ಸಂಘದಿಂದ ಸನ್ಮಾನ

ಹಾವೇರಿ: SSLC,PUC ಯಲ್ಲಿ 90% ಕಿಂತ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು,…

3 hours ago