ವಾಡಿ: ಕೃಷ್ಣಾ ಪ್ರವಾಹದಿಂದ ಜವಾವೃತಕ್ಕೆ ತುತ್ತಾಗಿ ತೀವ್ರ ಸಂಕಷ್ಟಕ್ಕೀಡಾಗಿರುವ ಯಾದಗಿರಿ ಜಿಲ್ಲೆಯ ವಿವಿಧ ಗ್ರಾಮಗಳ ಪ್ರವಾಹ ಸಂಸ್ತ್ರಸ್ತರಿಗಾಗಿ ವಾಡಿ ಪಟ್ಟಣದ ಶ್ರೀ ಬಸವ ಗ್ರೂಪ್ನ ಯುವಕರು, ಬಟ್ಟೆ ಮತ್ತು ಹೊದಿಕೆಗಳನ್ನು ರವಾನಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಉಕ್ಕಿ ಬಂದ ಕೃಷ್ಣಾ ನದಿಯ ರುದ್ರಾವತಾರಕ್ಕೆ ಸಿಕ್ಕು ವಸತಿ ಹೀನವಾದ ಸಾವಿರಾರು ಕುಟುಂಬಗಳು ಸರಕಾರ ತೆರೆದ ಗಂಜಿ ಕೇಂದ್ರಗಳಲ್ಲಿ ದಿನಗಳೆಯುತ್ತಿದ್ದಾರೆ. ಮನೆಯೊಳಗಿನ ದವಸದಾನ್ಯಗಳೆಲ್ಲ ನೀರುಪಾಲಾಗಿ ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ನೀರು ಬಂದು ಊರು ಮುಳುಗಿಸಿ ಬದುಕು ಕಸಿದುಕೊಂಡಿದ್ದು, ವಿವಿಧ ಅಗತ್ಯತೆಗಳಿಂದ ಜನರು ವಂಚಿತರಾಗಿದ್ದಾರೆ ಎಂಬ ಮಾಹಿತಿ ಪಡೆದುಕೊಂಡ ಸ್ಥಳೀಯ ಶ್ರೀಬಸವ ಗ್ರೂಪಿನ ಸದಸ್ಯರು, ಪ್ರವಾಹ ಸಂತ್ರಸ್ತರಿಗಾಗಿ ಸಾರ್ವಜನಿಕರಿಂದ ಹಣ ಸಂಗ್ರಹಣೆಗೆ ಮುಂದಾಗುವ ಮೂಲಕ ಅನೇಕ ವಸ್ತುಗಳನ್ನು ಮತ್ತು ಸಾಮಾಗ್ರಿಗಳನ್ನು ಸಂಗ್ರಹಿಸಿದ್ದಾರೆ.
ಪ್ರವಾಹ ಪೀಡಿತರಿಗಾಗಿ ಮಿಡಿದ ಸ್ಥಳಿಯರು ಸಾವಿರಾರು ಜನರಿಗಾಗುವಷ್ಟು ಹಾಸಿಗೆ, ಹೊದಿಕೆ, ಮಕ್ಕಳಿಗಾಗಿ ಬಟ್ಟೆ, ರೊಟ್ಟಿ, ಗೋದಿ ಹಿಟ್ಟು, ಬಿಸ್ಕತ್, ಸಾಬೂನು, ಉಪ್ಪು, ಸ್ಯಾನಿಟರಿ ಪ್ಯಾಕ್ಗಳು ಸೇರಿದಂತೆ ಇನ್ನಿತರ ಪದಾರ್ಥಗಳನ್ನು ದಾನವಾಗಿ ನೀಡಿದ್ದಾರೆ. ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡಲು ಅನೇಕ ಜನರು ಮುಂದೆ ಬಂದಿರುವುದು ಸಂತಸ ತಂದಿದೆ. ಸಂಗ್ರಹಿಸಲಾದ ಎಲ್ಲಾ ವಸ್ತು-ಸಾಮಾಗ್ರಿ ಪದಾರ್ಥಗಳನ್ನು ವಾಹನದಲ್ಲಿ ಸಾಗಿಸುವ ಮೂಲಕ ನೇರವಾಗಿ ಪ್ರವಾಹ ಸಂತ್ರಸ್ತರಿಗೆ ತಲುಪಿಸಲು ತೆರಳುತ್ತಿದ್ದೇವೆ ಎಂದು ಶ್ರೀಬಸವ ಗ್ರೂಪ್ ಅಧ್ಯಕ್ಷ ಸತೀಶ ಸಾವಳಗಿ, ಅಂಬೇಡ್ಕರ್ ಯೂತ್ ಕ್ಲಬ್ ಅಧ್ಯಕ್ಷ ಸಂದೀಪ ಕಟ್ಟಿ ತಿಳಿಸಿದರು.
ದಿ ಕೇರ್ ಗ್ರೂಪ್ನ ಸಾಯಿನಾಥ ತೋಳೆ, ಡಿ.ವಿ.ಎನ್.ಹರೀಶ, ಗೌರವ ಖಂಡೇಲವಾಲಾ, ಜೈಗಂಗಾ ಡ್ರೆಸ್ಸೆಸ್ನ ನಾಗೇಂದ್ರ ಬೊಮ್ಮನಳ್ಳಿ, ಬಸವ ಬಳಗದ ಸಂಜಯ ರಾಠೋಡ, ಸಿದ್ದು ಕಲಶೆಟ್ಟಿ, ಬನಶಂಕರ ಮುಸ್ಟೂರ, ಸಂತೋಷ ಕಲಶೆಟ್ಟಿ, ಬಸವರಾಜ ಕಲಶೆಟ್ಟಿ, ಗುರು ನಾಗೂರ, ಜಗನ್ನಾಥ ಬಣಮಗಿ, ಮಹೇಶ ಬಡಿಗೇರ, ವಿಶ್ವನಾಥ ಮರತೂರ, ರುದ್ರು ದೇಸಾಯಿ, ಉಮೇಶ ಅವರಾದ, ವೀರೇಶ ದೇವಾಪುರ ಹಾಗೂ ಮತ್ತಿತರ ಯುವಕರು ಸಾಮಾಗ್ರಿಗಳನ್ನು ವಾಹನದಲ್ಲಿ ಹೊತ್ತು ಕೃಷ್ಣಾ ಪ್ರವಾಹ ಪೀಡಿತ ಯಾದಗಿರಿ ಜಿಲ್ಲೆಯ ಗ್ರಾಮಗಳತ್ತ ಪ್ರಯಾಣಿಸಿದರು. ಸಿದ್ದಯ್ಯಶಾಸ್ತ್ರೀ ನಂದೂರಮಠ ಇದ್ದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…