ಸ್ವಾವಲಂಬನೆ ಬುನಾದಿ ಹಾಕಿದ ಧೀಮಂತ ನಾಯಕ

ಯಾದಗಿರಿ: ದೇಶದ ಅಭಿವೃದ್ಧಿಗೆ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಕೊಟ್ಟ ಕೊಡುಗೆಯನ್ನು ಮರೆಯುವಂತಿಲ್ಲ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಹೇಳಿದರು.

ಡಾ. ಬಾಬು ಜಗಜೀವನ ರಾಮ ತರುಣ ಸಂಘ ವತಿಯಿಂದ ಭಾನುವಾರ ನಗರದ ಹಿರೇ ಅಗಸಿಯಲ್ಲಿ ಡಾ. ಬಾಬು ಜಗಜೀವನ ರಾಮ ಅವರ ಜಯಂತ್ಸೋತ್ಸವ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾರ್ಲಾಪಣೆ ಮಾಡಿ ಮಾತನಾಡಿದ ಅವರು ಬಾಬು ಜಗಜೀವನ್ ರಾಂ ಹಸಿರುಕ್ರಾಂತಿಯ ಮೂಲಕ ದೇಶ ಆಹಾರ ಸ್ವಾವಲಂಬನೆಯ ಹಾದಿಯಲ್ಲಿ ಸಾಗಲು ಅವಕಾಶ ಮಾಡಿಕೊಟ್ಟ ಧೀಮಂತ ಮತ್ತು ದೂರದೃಷ್ಠಿಯ ನಾಯಕ ಎಂದು ಗುಣಗಾನ ಮಾಡಿದರು. ಇಂದಿನ ಯುವ ಜನತೆ ಡಾ. ಬಾಬು ಜಗಜೀವನರಾಮ್ ಅವರ ಜೀವನಾದರ್ಶ, ಚಿಂತನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವ ಪೀಳಿಗೆಗೆ ಅವರ ವ್ಯಕ್ತಿತ್ವ ಜೀವನ ಚರಿತ್ರೆ ಪರಿಚಯಿಸುವ ಕಾರ್ಯ ನಡೆಯಬೇಕು. ಅವರ ಹಸಿರು ಕ್ರಾಂತಿಇ ಯೋಜನೆ ಸಾರ್ವಕಾಲಿಕವಾದುದು. ಅವರ ಈ ದೇಶದ ಬಡ ವರ್ಗದ ಜನರ ಹಸೀವನ್ನು ನೀಗಿಸುವ ಮೂಲಕ ಈ ದೇಶದಲ್ಲಿ ನಿರಂತರ ಶಾಂತಿ ದೊರಕುವಂತೆ ಹೋರಾಟ ನಡೆಸಿದ ಕ್ರಾಂತಿಯ ಹರಿಕಾರ ಎಂದು ಬಣ್ಣಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ ಮಾತನಾಡಿ, ಡಾ.ಬಾಬು ಜಗಜೀವನ ರಾಮ್ ಅವರು ಹೋರಾಟದ ಹಾದಿ ಹಾಗೂ ಸಾಧನೆಯು ಗಣನೀಯವಾದದ್ದು, ಅವರು ೨೫ ವರ್ಷಗಳ ಕಾಲ ಅನೇಕ ವಿವಿಧ ಖಾತೆಗಳ ಸಚಿವರಾಗಿ ಪರಿಣಾಮಕಾರಿಯಾಗಿ ಆಡಳಿತ ನೀಡಿದರು. ಸಮಾಜದ ಆರೋಗ್ಯವನ್ನು ಕಾಪಾಡುವ ಕಳಾಕಳಿ ಅವರಲ್ಲಿ ಹೆಚ್ಚಾಗಿತ್ತು. ಅವರು ತಮ್ಮ ಹೋರಾಟದ ಮೂಲಕ ಕೃಷಿ, ರೈತಾಪಿ ವರ್ಗದವರಿಗೆ ಅರ್ಪಿಸಿದ ಅವರು ದುರ್ಬಲರ ಸಂರಕ್ಷಕರಾಗಿ ಹಾಗೂ ಜನ ಸಾಮಾನ್ಯರಲ್ಲೂ ಆದರ್ಶ ಗಾಂಧಿವಾದಿ ಯಾಗಿದವರು ಅವರು ಎಂದು ಅವರು ತಿಳಿಸಿದರು. ನ್ಯೂ ಕನ್ನಡ ಕಾಲೇಜು ಪ್ರಾಂಶುಪಾಲರಾದ ರಘುನಾಥರೆಡ್ಡಿ ಅವರು ಡಾ. ಬಾಬು ಜಗಜೀವನ ರಾಮ ಅವರ ಕುರಿತು ಉಪನ್ಯಾಸ ನೀಡಿದರು.

ಬಿಜೆಪಿ ಮುಖಂಡರಾದ ಶರಣಗೌಡ ಬಾಡಿಯಾಳ, ಖಂಡಪ್ಪ ದಾಸನ, ಡಾ. ಬಾಬು ಜಗಜೀವನ ರಾಮ ತರುಣ ಸಂಘ ಅಧ್ಯಕ್ಷ ಶಂಕರ ಸಿದ್ದಿ, ಹೈದ್ರಬಾದ ಕರ್ನಾಟಕ ಅಭಿವೃದ್ದಿ ಸಮಿತಿ ಅಧ್ಯಕ್ಷ ಆನಂದ ಕುಮಾರ ಎಲ್‌ಗೋಡ್, ಸಮಾಜದ ಮುಖಂಡರಾದ ಬಸವರಾಜ ನಿಡಗಿ, ಕರೆಪ್ಪ ಮುದ್ನಾಳ, ರಾಜಶೇಖರ ಕೋನಿಮನಿ, ವಕೀಲರಾದ ಸಿದ್ದರಾಮಪ್ಪ ನೀಡಗಿ, ಯುವ ಘಟಕದ ಅಧ್ಯಕ್ಷ ವಿಜಯಕುಮಾರ ಕೋನಿಮನಿ, ಪ್ರಭು ಮುದ್ನಾಳ, ಶಿವಕುಮಾರ ಭದ್ರಕ್ಕಿ, ದೇವಿಂದ್ರ ಕೋನಿಮನಿ, ಮಲ್ಲಿಕಾರ್ಜುನ ಅರಿಕೇರಿ, ನಾಗರಾಜ ಕೋನಿಮನಿ, ಸಾಬಣ್ಣ ಹಲಗಿ, ವಿಶ್ವರಾಧ್ಯ ಸಂತಿ, ಸಿದಾಶೀವಪ್ಪ ದನಕಾಯಿ, ರಾಜು ಕೋನಿಮನಿ ಸೇರಿದಂತೆ ಮತ್ತಿತರರು ಇದ್ದರು.

ನಂತರ ಕಾರ್ಯಕ್ರಮದಲ್ಲಿ ನೆರೆ ಸಂತ್ರಸ್ತ ನೆರವಿಗೆ ಹೈದ್ರಬಾದ ಕರ್ನಾಟಕ ನೆರೆ ಸಂತ್ರಸ್ಥರ ಪರಿಹಾರ ನಿಧಿಯನ್ನು ಸಂಗ್ರಹಿಸಲಾಯಿತು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

11 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

14 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

18 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

19 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

21 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420