ಶಿವನ ಸ್ವರೂಪಿ ಶರಣಬಸವೇಶ್ವರರು

ಕಲಬುರಗಿಯ ಶರಣಬಸವೇಶ್ವರರು ಅನೇಕ ಲೀಲೆಗಳನ್ನು ಮಾಡಿ ಜನಸಾಮಾನ್ಯರಿಗೆ ಕಾಮಧೇನು ಕಲ್ಪವೃಕ್ಷವಾಗಿ ಶಿವನ ಸ್ವರೂಪಿಗಳಾಗಿದ್ದಾರೆ ಎಂದು ಶರಣಬಸವೇಶ್ವರ ವಾಣಿಜ್ಯ ಪದವಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಪ್ರೊ. ವಿಠೋಬಾ ದೊಣ್ಣೆಗೌಡರ ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಸೋಮವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು. ಕುಡುಕ ಗಂಡನೊಬ್ಬ ದಿನಾಲು ಕುಡಿದು ಮಡದಿಗೆ ಹೊಡೆಯುತ್ತಿದ್ದ. ಹೆಂಡತಿ ಬಹಳ ನೊಂದು ಶರಣರಿಗೆ ಬೇಡಿಕೊಂಡಳು. ಇದು ಶರಣರಿಗೆ ತಿಳಿಯಿತು. ಅವನು ಕುಡಿಯಲು ಹೊರಟಾಗ ಹಾವೊಂದು ಬೆನ್ನೆಟ್ಟಿಸಿಕೊಂಡು ಹೊರಟಿತು. ಆತ ಓಡುತ್ತಾ ಶರಣರ ಮಹಾಮನೆಗೆ ಬಂದ. ಶರಣರ ಎದುರಿಗೆ ಅವನನ್ನು ನಿಲ್ಲಿಸಿ ಆ ಸರ್ಪ ಹೊರಟು ಹೋಯಿತು. ಆಗ ಶರಣರು ಆತನ ಹಣೆಗೆ ಭಸ್ಮವನ್ನು ಹಚ್ಚಿದಾಗ ನಿಶೆ ಒಮ್ಮೇಲೆ ಇಳಿದು ಹೋಗುತ್ತದೆ. ತಪ್ಪಾಯಿತು ಎಂದು ಶರಣರ ಪಾದಕ್ಕೆ ಬಿಳುವನು ಮುಂದೆ ಕುಡಿಯುವದನ್ನು ಬಿಟ್ಟು ಶರಣರ ಭಕ್ತನಾಗುತ್ತಾನೆ.

ಒಂದು ಸಲ ಕಳ್ಳರು ಮಹಾಮನೆಗೆ ನುಗ್ಗಿದ್ದರು. ಕೊಟ್ಟಿಗೆಯಲ್ಲಿರುವ ಆಕಳು ಕರುಗಳನ್ನು ಕರೆದೊಯ್ಯಲು ಪ್ರಾರಂಭಿಸಿದರು. ಮಲಗಿದ ಶರಣರಿಗೆ ಗೊತ್ತಾಯಿತು. ಮಹಾಮನೆಯ ಮೇಲೆ ವಿಶ್ವಾಸವಿದ್ದರೆ ತಾವೇ ವಾಪಸ್ಸು ಬರುತ್ತವೆಂದು ಸುಮ್ಮನಾದರು. ಸ್ವಲ್ಪ ಮುಂದಕ್ಕೆ ಹೋಗಿದ್ದ ಆಕಳುಗಳು ತಾವೇ ತಿರುಗಿ ನಿಂತವಲ್ಲದೆ ಕಳ್ಳರನ್ನೇ ಅಟ್ಟಿಸಿಕೊಂಡು ಕೊಟ್ಟಿಗೆಗೆ ತರುತ್ತವೆ. ಅವರೆಲ್ಲರನ್ನು ನಡುವೆ ಹಾಕಿ ಸುತ್ತೆಲ್ಲ ನಿಂತುಬಿಡುತ್ತವೆ. ಶರಣರು ಬಂದ ಮೇಲೆ ಅವರ ಪಾದದ ಮೇಲೆ ಬಿದ್ದು ತಪ್ಪನ್ನು ಒಪ್ಪಿಕೊಳ್ಳುತ್ತಾರೆ. ’ಕದ್ದು ತಿನ್ನೋ ಬುದ್ಧಿ ನಿಮಗೆ ಸರಿಯಾದುದಲ್ಲ ನೀವು ಮಾನವರು ಸರಿಯಾದ ಮಾರ್ಗದಲ್ಲಿ ನಡೆಯಿರಿ’ ಎಂದು ಶರಣರು ಬುದ್ಧಿ ಹೇಳಿ ಕಳುಹಿಸುತ್ತಾರೆ.

ಶಿವರಾತ್ರಿ ದಿನ ಶರಣರ ದರ್ಶನಕ್ಕೆಂದು ಅಸಂಖ್ಯಾತ ಜನ ಬಂದು ಅವರ ಅನುಭವದೊಳಗೆ ಮಗ್ನರಾಗಿದ್ದರು. ಆಗ ಅಲ್ಲಿಯೇ ಹೊಂಚು ಹಾಕಿಕೊಂಡು ಕುಳಿತ ಹುಲಿಯೊಂದು ಒಬ್ಬ ಪುರುಷನನ್ನು ಬಾಯೊಳಗೆ ಹಿಡಿದುಕೊಂಡು ಹೊರಟಿತು. ಜನರೆಲ್ಲ ಚೀರಲು, ಓಡಲು ಪ್ರಾರಂಭಿಸಿದರು. ಶರಣರು ತಮ್ಮ ಅನುಭಾವವನ್ನು ನಿಲ್ಲಿಸಿ ಕುಳಿತಲ್ಲಿಂದಲೇ ಹುಲಿಯನ್ನು ಕರೆಯುತ್ತಾರೆ. ಬಾಲ ಅಲ್ಲಾಡಿಸುತ್ತಾ ಬಂದ ಆ ಹುಲಿ ಶರಣರ ಮುಂದೆ ಸಾಧು ಪ್ರಾಣಿಯಾಗಿ ನಿಂತುಬಿಡುತ್ತದೆ. ಹೀಗೇಕೆ ? ಎಂದಾಕ್ಷ ಬಾಯಿಯೊಳಗೆ ಹಿಡಿದ ಆ ಪುರುಷನನ್ನು ಉಗುಳಿ ಬಿಡುತ್ತದೆ. ಭಸ್ಮ ತರಿಸಿ ಆತನ ಮೈಗೆ ಹಚ್ಚಿದಾಗ ಆತ ಎದ್ದು ಕೂಡುತ್ತಾನೆ. ಹುಲಿ ಎಂಟು ದಿನ ಶರಣರ ಹತ್ತಿರ ಉಳಿದು ಕಾಡಿಗೆ ಹೋಗುತ್ತದೆ.

ಒಂದು ದಿನ ಜ್ಯೋತಿಷ್ಯರೊಬ್ಬರು ದಂಪತಿಗಳಿರ್ವರಿಗೆ ’ ನಿಮ್ಮ ಮನೆಯ ಬಾಗಿಲಿನಲ್ಲಿ ನಿಧಿ ಇದೆ. ಅದು ಹೊರಗೆ ತೆಗೆಯಬೇಕಾದರೆ ನಿಮ್ಮ ಮಗನಿಗೆ ಬಲಿಕೊಡಬೇಕೆಂದು’ ತಿಳಿಸುತ್ತಾರೆ. ನಿಧಿಗೆ ಆಸೆಪಟ್ಟ ಆ ದಂಪತಿಗಳು ತಮ್ಮ ೨೧ ವರ್ಷದ ಮಗನಿಗೆ ಬಲಿಕೊಡಲು ನಿರ್ಧರಿಸುತ್ತಾರೆ. ಅಮವಾಸ್ಯೆಯ ದಿನ ರಾತ್ರಿ ೧೨ ಗಂಟೆಗೆ ತಮ್ಮ ಮಗನಿಗೆ ಕಟ್ಟಿ ಹಾಕುತ್ತಾರೆ. ಆ ಹುಡುಗ ತನ್ನ ಮನಸ್ಸಿನಲ್ಲಿ ಏಕನಿಷ್ಠೆಯಿಂದ ಶರಣರನ್ನು ನೆನೆಯುತ್ತಾನೆ. ತಕ್ಷಣವೇ ಕಟ್ಟಿದ ಹಗ್ಗ ತಾನಾಗಿಯೆ ಬಿಚ್ಚಿಕೊಳ್ಳುತ್ತದೆ.

ಪಂಚಾಂಗದವನನ್ನೆ ಕಟ್ಟಿ ಅವನು ಶರಣರ ಹತ್ತಿರ ಹೋಗಿ ನಾನು ಮನೆಗೆ ಹೋಗುವುದಿಲ್ಲ ನಿಮ್ಮ ಹತ್ತಿರನೆ ಉಳಿಯುತ್ತೇನೆ ಎಂದು ಹಠ ಹಿಡಿಯುತ್ತಾನೆ. ಶರಣರು ಅವರ ತಂದೆ ತಾಯಿ ಬುದ್ಧಿವಾದ ಹೇಳಿ ಅವರೊಂದಿಗೆ ಮಗನನ್ನು ಕಳುಹಿಸಿಕೊಡುತ್ತಾರೆ. ಮನೆಗೆ ಹೋಗಿ ನೋಡಿದಾಗ ಪಂಚಾಂಗದವನು ಅಲ್ಲಿಯೇ ಇರುತ್ತಾನೆ. ಹಗ್ಗ ಬಿಚ್ಚಲು ಹೋದರೆ ಬಿಚ್ಚಲ್ಲ. ಎರಡು ಮೂರು ದಿನ ನೀರಿಲ್ಲದೆ ನಿಂತಿದ್ದಾನೆ. ಕೊನೆಗೆ ಶರಣರು ಕೈ ಎತ್ತಲು ಆ ಹಗ್ಗ ತಾನಾಗಿಯೇ ಬಿಚ್ಚಿಕೊಳ್ಳುತ್ತದೆ. ಶರಣರ ಪಾದಕ್ಕೆ ಬಿದ್ದು ತಪ್ಪನ್ನು ಒಪ್ಪಿಕೊಳ್ಳುತ್ತಾನೆ. ಹೀಗೆ ಶರಣರ ಅನೇಕ ಲೀಲೆಗಳು ನಡೆದು ಸಮಾಜ ಉದ್ಧಾರಗೊಂಡಿದೆ ಎಂದು ಹೇಳಿದರು.

ಪ್ರೊ. ವಿಠೋಬಾ ದೊಣ್ಣೆಗೌಡ, ಸಹ ಪ್ರಾಧ್ಯಾಪಕ

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

3 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

6 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

10 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

11 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

13 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420