ಕಲಬುರಗಿ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನರಾಮ್ ವಸತಿ ನಿಲಯ, ರಾಜಾಪುರದಲ್ಲಿ ಪ್ರಬುದ್ಧ ಸಾಂಸ್ಕøತಿಕ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಡಾ.ಕರಿಘೋಳೇಶ್ವರ ಜೇವರ್ಗಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಮಾತನಾಡಿದರು.
ಅಂಬೇಡ್ಕರ್ ಅವರು ಬರೆದ ಸಂವಿಧಾನದ ಪ್ರತಿಫಲದಿಂದ ಅಲ್ಲಲ್ಲಿ ಇಂದು ನಾವು ನೌಕರರಾಗಿದ್ದೇವೆ. ಆದರೆ ಮುಂದೆ ನೌಕರರ ಮಕ್ಕಳು ಕೂಲಿ ಕಾರ್ಮಿಕರಾಗಬಾರದು ಎಂದರೆ ಬಾಬಾಸಾಹೇಬರ ನೈಜ ದಾರಿಯಲ್ಲಿ ಬದುಕುವುದು ಅಗತ್ಯ. ಭಾರತೀಯರಾದ ನಾವೆಲ್ಲರೂ ಬಾಬಾಸಾಹೇಬರ ಋಣದ ಮಕ್ಕಳಾಗಿದ್ದೇವೆ.
ಡಾ. ಬಾಬಾಸಾಹೇಬ ಅಂಬೇಡ್ಕ ಅವರು 1956 ಜುಲೈ 31ರಂದು ಸಂಜೆ, ತಮ್ಮ ಅಪ್ತ ಕಾರ್ಯದರ್ಶಿಯಾದ, ನಾನಕ ಚಂದ್ ರತ್ತು ಅವರೊಂದಿಗೆ ಹಂಚಿಕೊಂಡ ಅಂತರಂಗದ ನೋವಿನ ಮಾತುಗಳನ್ನು ದಮನಿತ ಇಂದು ಶೋಷಿತ, ಸಮುದಾಯಗಳು ಮರೆತಿವೆ. ಬಾಬಾಸಾಹೇಬರು ತಮ್ಮ ಜೀವನದುದ್ದಕ್ಕೂ ವಿರೋಧಿಗಳೊಂದಿಗೆ ಹೋರಾಡಿ ಯಾವ ಕತ್ತಲೆಯಿಂದ ಬೆಳಕಿನೆಡೆಗೆ ಕರೆತಂದರೆ, ಅದೇ ಕತ್ತಲೆ ಕಡೆಗೆ ಮುಖಮಾಡಿ ನಿಂತಿದ್ದೇವೆ. ಇದು ಬಹುದೊಡ್ಡ ದುರಂತ. ನಮ್ಮ ಸಂಘಟನಾತ್ಮಕ ಸಡಿಲವಾಗುತ್ತಿದೆ ಎಂದರು.
ಅನಂದ ಅಂಕಲಗಿಕರ, ವಿವಿಧ ವಸತಿ ನಿಲಯದ ವಿದ್ಯಾರ್ಥಿಗಳು ಇದ್ದರು. ಸಂದೀಪ ಸ್ವಾಗತಿಸಿದರು. ಸತೀಶ ಹೊನ್ನಾನಗ ಕುಮಾರ, ಮಲ್ಲಪ್ಪ, ಸಂತೋಷ ನಿರೂಪಿಸಿದರು. ನಿಲಯಗಳ ವಾರ್ಡನ್ಗಳಾದ ಸಂಜು ಸರಡಗಿ, ರಾಜಕುಮಾರ ಹುಲಿಕರ ವಂದಿಸಿದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…