ಆಳಂದ: ಸಾಲೇಗಾಂವ ಚಿರತೆ ಹಾವಳಿ | ಸಾರ್ವಜನಿಕರು ಎಚ್ಚರಕ್ಕೆ ಅರಣ್ಯ ಅಧಿಕಾರಿ ಸೂಚನೆ

ಆಳಂದ: ತಾಲ್ಲೂನಿಕ ಸಾಲೇಗಾಂವ ಗ್ರಾಮದ ಹತ್ತಿರ ಚಿರತೆಯೊಂದು ನಾಯಿಯನ್ನು ತಿಂದು ಬಿಸಾಡಿದನ್ನು ಗ್ರಾಮಸ್ಥರ ದೂರಿನ ಮೇರೆಗೆ ಸಾಲೇಗಾಂವ ಗ್ರಾಮಕ್ಕೆ ಆರ್.ಎಫ್.ಓ ಜಗನ್ನಾಥ ಕೋರಳ್ಳಿ ಹಾಗೂ ಸಿಬ್ಬಂದಿಯವರು ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಸುತ್ತಮುತ್ತ ತೀರುಗಾಡಿ ಸುತ್ತಮುತ್ತಲಿನ ಗ್ರಾಮಸ್ಥರು, ಗ್ರಾಮದ ರೈತರು ಜಾಗೃತರಾಗಿರಬೇಕೆಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಗುರುವಾರ ಬೆಳಗಿನ ಜಾವ ಗ್ರಾಮಸ್ಥರು ಚಿರತೆ ಎಂದು ಖಚಿತ ಪಡಿಸಿ ದೂರವಾಣಿ ಮೂಲಕ ಮಾಹಿತಿ ನೀಡಿದಾಗ ಸ್ಥಳ ಬಂದು ಪರಿಶೀಲಿಸಿ ವೀಕ್ಷಿಸಿ ನಾಯಿಯ ದೇಹವನ್ನು ತಿಂದು ಕಾಲು ಮಾತ್ರ ಉಳಿದಿವೆ.

ಈ ಸ್ಥಳವನ್ನು ಸೂಕ್ಷತೆಯಿಂದ ಪರಿಶೀಲಿಸಿದಾಗ ಚಿರತೆ ಹೆಜ್ಜೆ ಗುರುತು ಕಂಡು ಬಂದಿರುವುದಿಲ್ಲ, ಈ ನಾಯಿಯ ದೇಹವನ್ನು ಚಿರತೆ ತಿಂದಿದ್ದೆ ಆದರೆ ಮತ್ತೆ ನಾಯಿ ಮತ್ತು ಆಕಳು ಕರುಗಳನ್ನು ತಿನ್ನುವ ಸಾಧ್ಯತೆ ಇದ್ದು, ರೈತರು ಹೋಲ ಗದ್ದೆಗಳಿಗೆ ಒಬ್ಬರು ಹೋಗದೇ ಗುಂಪು ಕಟ್ಟಿಕೊಂಡು ಕೈಯಲ್ಲಿ ಬಡಿಗೆ ಹಿಡಿದು ಜಾಗೃತಿ ಕತೆಯಿಂದ ಹೋಗಿ ಬರಬೇಕು. ತಮ್ಮ ಜಾನುವಾರುಗಳು ಕೂಡಾ ಕಾಪಾಡಿಕೊಳ್ಳಬೇಕು.

ಈ ವಿಷಯವನ್ನು ಜಿಲ್ಲೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಎರಡು ಮೂರು ದಿನಗಳಲ್ಲಿ ಚಿರತೆ ಇರುವುದು ಖಚಿತ ಪಟ್ಟರೆ, ಚಿರತೆ ಬಲೆ ತಂದು ಅದನ್ನು ಬಂಧಿಸಲಾಗುವುದು. ಸಾಲೇಗಾಂವ, ತೀರ್ಥ, ಚಿತಲಿ, ಖಜೂರಿ, ಖಂಡಾಳ, ನಿರಗುಡಿ, ಆಳಂಗಾ, ತಡೋಳಾ, ಬಂಗರಗಾ, ಗ್ರಾಮಸ್ಥರು ಜಾಗೃಕತೆಯಿಂದ ಇರಬೇಕೆಂದು ತಿಳಿಸಿ ಎಲ್ಲಾ ಗ್ರಾಮಗಳಲ್ಲಿ ಡಂಗೂರು ಸಾರಲು ಹೇಳಲಾಗಿದೆ ಎಂದು ತಿಳಿಸಿದ್ದಾರೆ. ಆಳಂದ ಉಪ ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ಗಾಯಕವಾಡ ಹಾಗೂ ಸಿಬ್ಬಂದಿಯವರು ಜತೆಯಲ್ಲಿ ಇದ್ದರು.

ಸಾಲೇಗಾಂವ ಗ್ರಾಮದ ಹತ್ತಿರ ಚಿರತೆ ಬಂದಿದ್ದು, ಸಾರ್ವಜನಿಕರು ಠಾಣೆಗೆ ಮಾಹಿತಿ ನೀಡಿದ್ದಾರೆ. ಸಾಲೇಗಾಂವ ಸುತ್ತಮುತ್ತಲಿನ ಗ್ರಾಮಗಳ ಬೀಟ ರೂಟ್ ಪೊಲೀಸರು ಸಾರ್ವಜನಿಕರಿಗೆ ಚಿರತೆ ವಿಷಯ ಕುರಿತು ಎಚ್ಚರವಾಗಿರಲು ಮೋಬೈಲಗಳಿಗೆ ಸಂದೇಶ ಕಳುಹಿಸಿ ಮತ್ತು ರೈತರು ಹಗಲು ಮತ್ತು ರಾತ್ರಿ ಹೋಲ ಗದ್ದೆಗಳಿಗೆ ಹೋಗದಂತೆ ಅವರಿಗೆ ಮಾಹಿತಿ ನೀಡಿ ಹೋಗದಂತೆ ತಿಳಿಸಿ.- ಮಾಹದೇವ ಪಂಚಮುಖಿ, ಪಿಐ, ಪೊಲೀಸ ಠಾಣೆ, ಆಳಂದ
emedialine

Recent Posts

ಲಿಂಗಾಯತ ದೀಕ್ಷ ಪಂಚಮಸಾಲಿ ವಕೀಲರ ಪರಿಷತ್ತ ನೂತನ ಸಮಿತಿ ರಚನೆ

ಕಲಬುರಗಿ: ಲಿಂಗಾಯತ ದೀಕ್ಷ ಪಂಚಮಸಾಲಿ ವಕೀಲರ ಪರಿಷತ್ತಿನ ಸಭೆಯಲ್ಲಿ ಜಿಲ್ಲಾ ಸಮಿತಿ ರಚಿಸಲಾಯಿತು. ಈ ವೇಳೆಯಲ್ಲಿ ಜಿಲ್ಲಾ ಅಧ್ಯಕ್ಷರಾಗಿ ರವೀಂದ್ರ…

59 seconds ago

ಕಲಬುರಗಿ: ಸೆ. 13 ರಿಂದ “ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ್ಯವಂತ”ರು ಅಭಿಯಾನ

ಕಲಬುರಗಿ: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಘಟಕದ ವತಿಯಿಂದ "ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ್ಯವಂತ" ಎಂಬ ಧ್ಯೇಯವಾಕ್ಯದಡಿ ರಾಜ್ಯವ್ಯಾಪಿ…

1 hour ago

ಅಜ್ಞಾನವೆಂಬ ಕತ್ತಲಿನಿಂದ ಜ್ಞಾನದ ಬೆಳಿಕಿನಡೆಗೆ ಕರೆದೊಯ್ಯುವ ಜ್ಯೋತಿಯೇ ಶಿಕ್ಷಕ

ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕೆ.ಹೆಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಶಿಕ್ಷಕರ ದಿನಾಚರಣೆಯ ನಿಮಿತ್ತವಾಗಿ ಬುಧವಾರ ಗೆಳೆಯರ ಬಳಗದ ವತಿಯಿಂದ…

11 hours ago

ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಗಮನ ಸೆಳೆದ ಚೇತನ ಬಿ.ಕೋಬಾಳ್ ಸಂಗೀತ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ( ಸಮಾಜ ಕಲ್ಯಾಣ ಇಲಾಖೆ…

20 hours ago

15ರಂದು ಮಾನವ ಸರಪಳಿ: ನಾಳೆ ಪೂರ್ವ ಭಾವಿ ಸಭೆ

ಶಹಾಬಾದ :ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 15ರಂದು ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ತಾಲೂಕಿನ ಪ್ರೌಢಶಾಲಾ ಮುಖ್ಯ…

21 hours ago

ಸೆಪ್ಟೆಂಬರ್ 17ರಂದು ವಿಮೋಚನಾ ದಿನ ರದ್ದುಪಡಿಸಿ, ಪ್ರಜಾಸತ್ತಾತ್ಮಕ ದಿನ ಆಚರಿಸಿ: ಕೆ ನೀಲಾ

ಕಲಬುರಗಿ: ಹೈದ್ರಾಬಾದ್ ಕರ್ನಾಟಕದಲ್ಲಿ ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತಿರುವ ವಿಮೋಚನಾ ದಿನವಲ್ಲ, ಅದು ವಿಲೀನಿಕರಣದ ಅಥವಾ ಪ್ರಜಾಸತ್ತಾತ್ಮಕ ದಿನವಾಗಿದ್ದು, ವಿಮೋಚನಾ…

21 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420