ಬಿಸಿ ಬಿಸಿ ಸುದ್ದಿ

ಬಸವ ಎಂಬ ಮೂರಕ್ಷರ ಎದೆಯೊಳಗೆ ತುಂಬಿದ್ದರೇ ಅಸಾಧ್ಯವಾದುದು ಸಾಧ್ಯ

ಶಹಾಬಾದ: ಬಸವ ಎಂದರೆ ಕಲ್ಪವೃಕ್ಷ, ಬಸವ ಎಂದರೆ ಕಾಮದೇನು.ಬಸವ ಎಂಬ ಮೂರಕ್ಷರವನ್ನು ಎದೆಯೊಳಗೆ ತುಂಬಿದ್ದರೇ ಅಸಾಧ್ಯವಾದುದು ಸಾಧ್ಯವಾಗುತ್ತದೆ ಎಂಬುದು ಸುಳ್ಳಲ್ಲ ಎಂದು ಶರಣ ಸಾಹಿತಿ ಮತ್ತು ಶರಣ ಮಾರ್ಗ ಪತ್ರಿಕೆಯ ಸಂಪಾದಕರಾದ ಡಾ.ಶಿವರಂಜನ್ ಸತ್ಯಂಪೇಟೆ ಹೇಳಿದರು.

ಅವರು ಭಂಕೂರ ಗ್ರಾಮದ ಶಾಂತನಗರದ ಬಸವ ಸಮಿತಿಯಲ್ಲಿ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳ ಪರ್ಯಂತ ಆಯೋಜಿಸಲಾದ ಬಸವ ತತ್ವದರ್ಶನ ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.

ಇಂದಿಗೂ ನಮ್ಮ ಗ್ರಾಮೀಣ ಭಾಗದಲ್ಲಿ ಕುಂತರೂ, ನಿಂತರೂ, ಎದ್ದರೂ,ಬದ್ದರೂ ಬಸವ ಎನ್ನುವ ರೂಢಿ. ಬಸವ ಎನ್ನುವುದು ಒಂದುವ್ಯಕ್ತಿಯ ಹೆಸರಲ್ಲ ಬಸವ ಎನ್ನುವುದು ಒಂದು ಸಿದ್ಧಾಂತ.ಅದೊಂದು ಪ್ರಜ್ಞೆ ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದರು.

ಇಂದು ನಾವು ಮನಸ್ಸು ಮಾಡಿದರೆ ಕಾವಿ, ಬಿಳಿ ಬಟ್ಟೆ ತೊಟ್ಟು ಹಣೆಗೆ ವಿಭೂತಿ, ರುದ್ರಾಕ್ಷಿ ಹಾಕಿ,ನಾಮಗಳನ್ನು ಬಡಿದುಕೊಂಡು ಗುಡ್ಡದಲ್ಲಿ ಜಪ-ತಪ ಮಾಡಿದರೇ ಸ್ವಾಮಿಗಳಾಗಬಹುದು ಅಥವಾ ದೇವ ಮಾನವರಾಗಬಹುದು. ಆದರೆ 12ನೇ ಶತಮಾನದಿಂದ ಇಂದಿನವರೆಗೂ ಯಾರಿಗೂ ಬಸವಣ್ಣನವರಂತೆ ಆಗುವುದಕ್ಕೆ ಸಾಧ್ಯವಾಗಲಿಲ್ಲ. ಕಾರಣ ಬಸವಣ್ಣ ಯಾರಿಗೂ ನಿಲುಕಲಾರದಂತ ವ್ಯಕ್ತಿತ್ವ.ಆತ ಎಲ್ಲಾ ಸಮಾಜದ ಜನರನ್ನು ಒಂದುಗೂಡಿಸಿದ ಮಹಾನ್ ಜ್ಯಾತ್ಯಾತೀತ ಪುರುಷ ಎಂದು ಹೇಳಿದರು.

ಬಸವಣ್ಣನವರು ವರ್ಗಬೇಧ, ವರ್ಣಬೇಧ, ಲಿಂಗಬೇಧ ಮತ್ತು ಅಸ್ಪ್ರಶ್ಯತೆ ಇಲ್ಲದ ಜಾತ್ಯತೀತ ಸಮಾಜವನ್ನು ಕಟ್ಟ ಬಯಸಿದ್ದರು. ಆದರೆ ಪ್ರಸ್ತುತ ಸಮಾಜ ಆಧುನಿಕ ಅಬ್ಬರದಲ್ಲಿ ಬಸವಪ್ರಜ್ಞೆಯನ್ನು ಮರೆತಿದ್ದಾರೆ. ಬಸವ ಪ್ರಜ್ಞೆಯಲ್ಲಿ ಧಾರ್ಮಿಕ, ಸಾಮಾಜಿಕ, ವೈಜ್ಞಾನಿಕ ಆಯಾಮ, ಹೊಸ ಜಗತ್ತಿನ ಉದಯವಿದೆ. ವಚನಕಾರರಿಗೆ ಯಾವ ಜಾತಿಯೂ ಇಲ್ಲ. ಅವರೆಲ್ಲ ಮನುಷ್ಯತ್ವನ್ನು ಆವಿರ್ಭವಗೊಳಿಸಿ ಜಗತ್ತಿಗೆ ಮಾದರಿಯಾಗಿ ಬದುಕಿದ ಶರಣರು. ಅವರನ್ನು ಆಯಾ ಜಾತಿಗೆ ಅಂಟಿಸಿನೋಡುವ ಪ್ರವೃತ್ತಿ ಸಲ್ಲ ಎಂದರು.

ಗದುಗಿನ ಪ್ರವಚನಕಾರರಾದ ಗಿರಿಜಕ್ಕ ಧರ್ಮರೆಡ್ಡಿ ಮಾತನಾಡಿದರು. ಅತಿಥಿಗಳಾಗಿ ಮಾಲಗತ್ತಿ ಗ್ರಾಪಂ ಅಧ್ಯಕ್ಷ ಸದಾಶಿವ ನಡುವಿನಕೇರೆ, ಬಸವ ಸಮಿತಿ ಅಧ್ಯಕ್ಷ ನೀಲಕಂಠ ಮುದೋಳಕರ್, ಮಾಜಿ ಅಧ್ಯಕ್ಷ ಅಮೃತ ಮಾನಕರ್,ಶಿವಪುತ್ರ ಕುಂಬಾರ,ಚಂದ್ರಕಾಂತ ಅಲಮಾ,ಗುರಲಿಂಗಪ್ಪ ಪಾಟೀಲ, ರೇವಣಸಿದ್ದಪ್ಪ ಮುಸ್ತಾರಿ ಸೇರಿದಂತೆ ಅನೇಕರು ಇದ್ದರು.

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

6 mins ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

9 mins ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

11 mins ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

1 hour ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

2 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

5 hours ago