ಬಿಸಿ ಬಿಸಿ ಸುದ್ದಿ

“ಜೇವರ್ಗಿ ವಿಧಾನಸಭೆ ಕ್ಷೇತ್ರ” ಪ್ರತಿಷ್ಠೆಗೆ ಬಿತ್ತು ಶಾಸಕ ಡಾ.ಅಜಯಸಿಂಗ್ ಅವರ ಜೇವರ್ಗಿ ಕ್ಷೇತ್ರ

ಜೇವರ್ಗಿ: ಡಾ.ಉಮೇಶ್ ಜಾಧವ್ ಅವರಿಗೆ ರಾಜಕೀಯಕ್ಕೆ ಕರೆತಂದ ದಿ.ಧರ್ಮಸಿಂಗ್ ಅವರ ಮಗನ ಕ್ಷೇತ್ರದತ್ತ ಎಲ್ಲರ ಚಿತ್ತ ನೆಟ್ಟಿದೆ. ಕಾರಣ ಧರ್ಮಸಿಂಗ್ ನನ್ನ ಗುರುಗಳು ಅಂತಿದ್ದ ಡಾ. ಉಮೇಶ್ ಜಾಧವ್ ದಿಢೀರ್ ಬಿಜೆಪಿ ಸೇರಿದ್ದಾರೆ.

ಜಾಧವ್ ಅವರು ಬಿಜೆಪಿಗೆ ಸೇರಲು ಡಾ.ಅಜಯಸಿಂಗ್ ಸಹಾಯ ಮಾಡಿದ್ದಾರೆ ಅನ್ನುವ ಅನುಮಾನ ಕ್ಷೇತ್ರದ ಮತದಾರರಲ್ಲಿದೆ. ಇದಕ್ಕೆ ಪೂರಕ ಎನ್ನುವಂತೆ ಡಾ.ಉಮೇಶ್ ಜಾಧವ್ ಪದೇ ಪದೇ ಜೇವರ್ಗಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲದೆ ಜೇವರ್ಗಿ ಕ್ಷೇತ್ರ ಒಂದರಿಂದಲೇ 25 ಸಾವಿರ ಬಿಜೆಪಿ ಲೀಡ್ ಮಾಡಿಕೊಳ್ಳುತ್ತೇವೆಂದು ಬಿಜೆಪಿ ನಾಯಕರು ಬಹಿರಂಗವಾಗಿ ಹೇಳಿಕೆ ಕೊಡ್ತಿದ್ದಾರೆ.

ಲೋಕಸಭೆ ಚುನಾವಣೆ ಮುಗಿದ ಮೇಲೆ ಮಂತ್ರಿಯಾಗುವ ಕನಸು ಕಾಣುತ್ತಿರುವ ಡಾ.ಅಜಯಸಿಂಗ್ ಅವರಿಗೆ ಇದು ತೀರಾ ‘ಇಜ್ಜತ್ ಕಾ ಸವಾಲ್’ ಎಂಬಂತಾಗಿದೆ. ಡಾ.ಅಜಯಸಿಂಗ್ ಅವರು 16 ಸಾವಿರ ಅಂತರದಿಂದ ಗೆದ್ದು ಶಾಸಕರಾಗಿದ್ದಾರೆ. ಲೋಕಸಭೆಯಲ್ಲಿ ಕನಿಷ್ಟ 10 ಸಾವಿರ ಕಾಂಗ್ರೆಸ್ ಲೀಡ್ ಮಾಡಲೇಬೇಕು ಅಂತ ಮುಖಂಡರು ಬಹಿರಂಗ ವೇದಿಕೆಯಲ್ಲಿಯೇ ಅಜಯಸಿಂಗ್ ಅವರಿಗೆ ಟಾರ್ಗೆಟ್ ನೀಡಿದ್ದಾರೆ.

ಜಿಪಂˌ ತಾಪಂˌ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಯ ಸೀಟ್ ಗಳೇ ಹೆಚ್ಚಿಗೆ ಬಂದಾಗಲೇ ಶಾಸಕರ ಮೇಲೆ ಹಲವರು ಮುನಿಸಿಕೊಂಡಿದ್ದರು.  ಇದರ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿಯೂ ಚರ್ಚೆ ಮಾಡಲಾಗಿತ್ತು. ಈ ಕಾರಣಕ್ಕಾಗಿ ಅಜಯಸಿಂಗ್ ಅವರು ಬಡ್ಡಿ ಸಮೇತ ಲೋಕಸಭೆ ಚುನಾವಣೆಯಲ್ಲಿ ವಸೂಲು ಮಾಡಬೇಕಾಗಿದೆ. ಹಾಗೆ ನೋಡಿದ್ರೆ ಡಾ.ಅಜಯಸಿಂಗ್ ಅವರ ವರ್ಚಸ್ಸು ಕಡಿಮೆಯೇನಿಲ್ಲ. ಆದ್ರೆ ವಿಧಾನಸಭೆ ಚುನಾವಣೆಯಂತೆ ಕೆಲಸ ಮಾಡಿದ್ರೆ ಲೀಡ್ ಕೊಡೋದು ಅವರಿಗೆ ದೊಡ್ಡ ವಿಷಯವೇನಲ್ಲ ಅಂತಾರೆ ಯಡ್ರಾಮಿಯ ಹಿರಿಯ ಕಾಂಗ್ರೆಸ್ ಮುಖಂಡರು.

ಡಾ.ಅಜಯಸಿಂಗ್ ಅವರು ಭಾಷಣ ಮಾಡ್ತಾರಲ್ಲ ಅದರಿಂದನೇ ಅಷ್ಟೂ ಓಟು ಕವರ್ ಆಗಲ್ಲ. ಒಳಗೆ ಏನ್ ಕೆಲ್ಸಾ ಮಾಡ್ತಾರೋ ಅದುವೆ ನಿಜವಾದ ಹಾರ್ಡ್ ವರ್ಕ್ ಅಂತಾರೆ ಜೇವರ್ಗಿ ಪಟ್ಟಣದ ಮುಖಂಡರು. ಈ ಲೋಕಸಭೆ ಚುನಾವಣೆ ಡಾ.ಅಜಯಸಿಂಗ್ ಅವರಿಗೂ ಪ್ರಮುಖ ಚುನಾವಣೆಯಾಗಿದೆ. ಅವರ ಪಕ್ಷದ ಮೇಲಿನ ಹಿಡಿತˌ ಸಾಮಾರ್ಥ್ಶˌ ಪಕ್ಷನಿಷ್ಠೆಯನ್ನು ಒರೆಗೆ ಹಚ್ಚಲು ಇದು ಸೂಕ್ತ ಸಮಯವಾಗಿದೆ. ಈ ಲೋಕಸಭೆ ಚುನಾವಣೆಯಲ್ಲಿ ಜೇವರ್ಗಿಯಲ್ಲಿ ಬಿಜೆಪಿ ಲೀಡ್ ಆದ್ರೆˌ ಮುಂದಿನ ಶಾಸಕ ಸ್ಥಾನ ಮಾಜಿ ಶಾಸಕ ದೊಡ್ಡಪ್ಪಗೌಡರ ಕೈಯಲ್ಲಿದ್ದಂಗೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಶದಲ್ಲಿ ಹೆಚ್ಚು ಸೀಟು ಗೆದ್ರೆ ವಿಧಾನಸಭೆಗೆ ಯಾವಾಗ ಬೇಕಾದ್ರು ಚುನಾವಣೆ ನಡೆಯಬಹುದು. ಇಂತಹ ಯೋಚನೆ ಇಟ್ಟುಕೊಂಡೇ ಮಾಜಿ ಶಾಸಕ ದೊಡ್ಡಪ್ಪಗೌಡ್ರು ಕೆಲಸ ಶುರು ಮಾಡಿದ್ದಾರೆ. ಇದು ಬಹುತೇಕರಿಗೆ ಅರ್ಥವಾಗಿಲ್ಲ. ದೊಡ್ಡಗ್ಶಾಪ್ ಸ್ರಷ್ಠಿಯಾಗಲಿದೆ.  ದಿ.ಧರ್ಮಸಿಂಗ್ ಖರ್ಗೆಯವರು ಬಹುಕಾಲದ ಸ್ನೇಹಿತರು. ಕಷ್ಟ ಸುಖ ಬಂದ್ರೂ ಹಂಚಿಕೊಂಡವರು. ಆದ್ರೆ ಈ ಸಲದ ಲೋಕಸಭೆ ಚುನಾವಣೆಯಲ್ಲಿ ಜೇವರ್ಗಿ ಕ್ಷೇತ್ರ ಲೀಡ್ ಕೊಡದೆ ಇದ್ದರೆ ಡಾ. ಮಲ್ಲಿಕಾರ್ಜುನ ಖರ್ಗೆಯವರು ಮುನಿಸಿಕೊಳ್ಳಬಹುದು.

ಡಾ.ಅಜಯಸಿಂಗ್ ಪ್ರಿಯಾಂಕ್ ಖರ್ಗೆ ಅವ್ರು ಸರಿ ಇಲ್ಲ ಎನ್ನುವ ನೆಪ ಹೇಳಬಹುದು. ಸ್ವಪಕ್ಷಿಯರೇ ಅಸಮಾಧಾನ ವ್ಶಕ್ತಪಡಿಸಬಹುದು. ಒಟ್ಟಿನಲ್ಲಿ ಎರಡು ಕುಟುಂಬಗಳ ನಡುವೆ ಕಂದಕ ಸ್ರಷ್ಟಿಯಾಗಲಿದೆ. ವಿಧಾನಸಭೆ ಚುನಾವಣೆಯಲ್ಲಿ ಹಗಲು ರಾತ್ರಿ ನಿದ್ದೆ ಮಾಡದೆ ಖರ್ಗೆಯವರ ಗೆಲುವಿಗೆ ತನು-ಮನ-ಧನದಿಂದ ಶ್ರಮಿಸಿದರೆ ಡಾ.ಅಜಯಸಿಂಗ್ ಅವರ ವರ್ಚಸ್ಸು ಹೆಚ್ಚಾಗುತ್ತದೆ. ಡಾ.ಅಜಯಸಿಂಗ್ ಅವರಿಗೆ ಇಡೀ ಬಂಜಾರ ಸಮುದಾಯ ಬೆಂಬಲಿಸುತ್ತೆ. ಕಾಂಗ್ರೆಸ್ ದಲ್ಲಿರುವ ಬಂಜಾರ ಸಮುದಾಯಕ್ಕೆ ಶಾಸಕರು ಯಾವ ಸಂದೇಶ ಕೊಡ್ತಾರೋ ಕಾದು ನೋಡಬೇಕು.

ಕೆಲವು ತಾಂಡಾಗಳಲ್ಲಿಯೇ ಬೂತ್ ಗಳಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಮತಗಳು ಬಂದವು ಅನ್ನುವುದು ಗೊತ್ತಾಗಲಿದೆ. ತಾಪಂ ಕಾಂಗ್ರೆಸ್  ಸದಸ್ಶ ಪ್ರಶಾಂತ ರಾಠೋಡ ಅವರ ಯಡ್ರಾಮಿ ತಾಂಡಾದಲ್ಲಿ ಮತಗಳು ಪಕ್ಷಕ್ಕೆ ಬರಲು ಡಾ.ಅಜಯಸಿಂಗ್ ಪ್ಲ್ಶಾನ್ ಮಾಡಬೇಕಾದ ಅವಶ್ಶಕತೆ ಇದೆ. ತನ್ನ ಚುನಾವಣೆಗೆ ಮಾತ್ರ ತಾಂಡಾಗಳು ಸಹಕರಿಸಿದರೆ ಸಾಕು ಎನ್ನುವ ಮನೋಭಾವದಿಂದ ಕೆಲಸ ಮಾಡಿದ್ರೆˌ ಮುಂದಿನ ವಿಧಾನಸಭೆಯಲ್ಲಿ ಎಡ-ಬಲ ಸಮುದಾಯಗಳು ಸೇರಿದಂತೆ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದಲ್ಲಿ ಯಾಕಿರಬೇಕು ಅನ್ನುವ ನಿರ್ಧಾರಕ್ಕೆ ಬರಬಹುದು.

ಒಟ್ಟಿನಲ್ಲಿ ಡಾ.ಅಜಯಸಿಂಗ್ ಅವರಿಗೆ ಈ ಚುನಾವಣೆ ಒಳ್ಳೆಯ ಇಲ್ಲವೆ ಕೆಟ್ಟ ಹೆಸರು ಕೊಡಲು ತಯಾರಾಗಿದೆ.

ಡಾ.ಅಶೋಕ ದೊಡ್ಮನಿˌ ಜೇವರ್ಗಿ

ಮೊ: 9740202363

 

emedialine

View Comments

  • ಈ ಸಲ ಒಂದು ವೇಳೆ ಬಿಜೆಪಿ ಮತಗಳು ಜೇವರ್ಗಿ ಯಲ್ಲಿ ಹೆಚ್ಚು ಬಂದರೆ ಮುಂಬರುವ ವರ್ಷಗಳಲ್ಲಿ ಜೇವರ್ಗಿ ಯಲ್ಲಿ ದಲಿತ ರು, ಡಾ,,ಅಜಯಸಿಂಗ್ ರನ್ನು ಬದಲಾವಣೆ ಮಾಡುವ ಅವಕಾಶವನ್ನು ಮಾಡಲು ಸಂಶಯವಿಲ್ಲ,

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

3 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

3 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

3 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

3 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

4 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420