ಸುರಪುರ: ನಗರದ ಶ್ರೀ ಜನನಿ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ವತಿಯಿಂದ ವಿದ್ಯಾರ್ಥಿನಿಯರಿಗೆ ವಾಗಣಗೇರಾ ಕೋಟೆಯಲ್ಲಿ ಕೋಟಿಗೆ ಕ್ಷೇತ್ರ ಪ್ರವಾಸ ಕೈಗೊಂಡು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಡಾ:ಆದಿಶೇಷ ನೀಲಗಾರ ಮಾತನಾಡಿ,ಸ್ಮಾರಕಗಳ ಪ್ರತ್ಯಕ್ಷವಾಗಿ ಕಂಡು ಇತಿಹಾಸವನ್ನು ತಿಳಿದಿಕೊಳ್ಳುವುದು ಹೆಚ್ಚು ಪರಿಣಾಮಕಾರಿ. ವಿಶ್ವದ ಇತಿಹಾಸವನ್ನು ಅಭ್ಯಸಿಸುವ ನಾವು ನಮ್ಮ ಸ್ಥಳೀಯ ಇತಿಹಾಸವನ್ನು ಕಡೆಗಣಿಸಿರುತ್ತೇವೆ. ಮೊದಲು ನಮ್ಮ ಇತಿಹಾಸವನ್ನು ತಿಳಿಯಬೇಕು.ವಾಗಣಗೇರಾ ಕೋಟೆ ಸುರಪುರದ ಗೋಸಲ ವಂಶಜರು ನಿರ್ಮಿಸಿದರು. ಸುರಪುರಕ್ಕೆ ಮೊದಲು ವಾಗಣಗೇರಿ ಅವರ ರಾಜ್ಯಧಾನಿಯಾಗಿತ್ತು. ಮೊಘಲ್ ಸಾಮ್ರಾಟ ಔರಂಗಜೇಬನನ್ನು ಇದೆ ಕೋಟೆಯಲ್ಲಿ ಸೋಲಿಸಿದರು. ಈ ಮೂಲಕ ದಕ್ಷಣ ಭಾರತದ ದೇಗುಲಗಳನ್ನು ರಕ್ಷಿಸಿದ ಕೀರ್ತಿ ಇಲ್ಲಿಯ ರಾಜ್ಯರದ್ದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜೇಶ್ವರಿ ಘಂಟಿ ಉಪನ್ಯಾಸಕರಾದ ವೆಂಕಟೇಶ ಜಾಲಗಾರ,. ತಿರುಪತಿ ಕೆಂಭಾವಿ, ಅಂಬ್ರೇಶ ಚಿಲ್ಲಾಳ, ಮಹೇಶಕುಮಾರ ಗಂಜಿ, ನಬಿಸಾಬ, ನಂದಿನಿ ಅಸಗಳ್ಳಿ, ಪ್ರಿಯಾ, ಹಣಮಂತ್ರಾಯಗೌಡ, ಶಿವು ಕ್ವಾಟಿ, ಶ್ರೀದೇವಿ ನಾಯಕ, ಸೀಮರಿನ್ ಹಾಗೂ ಪ್ರಥಮ ಧರ್ಜೆ ಸಹಾಕರಾದ ಶೃತಿಗೌಡ, ಹುಲಗಮ್ಮ, ಬಸವರಾಜ ಮತ್ತು ಯಲ್ಲಮ್ಮ ಉಪಸ್ಥಿತರಿದ್ದರು.
ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…
ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…
ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್ನ ದಾಸ್ನಾ…
ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…
ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…