ಕಲ್ಯಾಣ ಕರ್ನಾಟಕ ಭಾಗಕ್ಕೆ ಐತಿಹಾಸಿಕ ದಿನ : ಡಾ. ಸುಧಾ ಆರ್ ಹಾಲಕಾಯಿ

ಕಲಬುರಗಿ: 1948ರ ಸೆಪ್ಟೆಂಬರ್ 17 ಕಲ್ಯಾಣ ಕರ್ನಾಟಕ ಭಾಗಕ್ಕೆ ಒಂದು ಐತಿಹಾಸಿಕ ದಿನ. ಕಲ್ಯಾಣ ಕರ್ನಾಟಕವು ದೌರ್ಜನ್ಯಕಾರ ರಜಾಕಾರರ ಕಪಿಮುಷ್ಟಿಯಿಂದ ಬಿಡುಗಡೆಯಾದ ಅಮೃತ ಸಮಯ. ಯಾವಾಗ ದೇಶಕ್ಕೆ, ಧರ್ಮಕ್ಕೆ ಗ್ಲಾನಿ ಬಂದ ಸಂದರ್ಭದಲ್ಲಿ ಅನೇಕ ವಿಭೂತಿಪುರುಷರು ಈ ನಾಡಿನಲ್ಲಿ ಜನ್ಮ ತಳೆದರು. ಹಾಗೆಯೇ ಸ್ವಾಮಿ ರಮಾನಂದ ತೀರ್ಥರು ಹಿಂದುಗಳ ಮೇಲೆ ಆಗುತ್ತಿದ್ದ ಘೋರ ದೌರ್ಜನ್ಯ, ಕೊಲೆ ಹಾಗೂ ಹೆಣ್ಣುಮಕ್ಕಳ ಮೇಲಿನ ವ್ಯಾಪಕ ಅತ್ಯಾಚಾರಗಳನ್ನು ಕೊನೆಗಾಣಿಸಬೇಕೆಂದು ತೀರ್ಮಾನ ಮಾಡಿ ಗೌಪ್ಯವಾಗಿ ಅಂದಿನ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರನ್ನು ಭೇಟಿ ಮಾಡಿದ್ದಾರೆ ಎಂದು ರಾಜ್ಯ ವೈದ್ಯಕೀಯ ಪ್ರಕೋಷ್ಠ ವಕ್ತಾರರು ಡಾ. ಸುಧಾ ಆರ್ ಹಾಲಕಾಯಿ ಹೇಳಿದರು.

ರಜಾಕರ ಹಾಗೂ ನಿಜಾಮರ ದುರಾಕ್ರಮಣದ ಪೂರ್ಣ ವಿವರವನ್ನು ಅಂದಿನ ಗೃಹ ಮಂತ್ರಿ, ಉಕ್ಕಿನ ಮನುಷ್ಯ ಎಂದು ಬಿರುದಾಂಕಿತ ಸರ್ದಾರ್ ಪಟೇಲರಿಗೆ ನೀಡಿದರು. ಇದರ ಬಳಿಕ ನಡೆದ ಗೌಪ್ಯ ಕಾರ್ಯಾಚರಣೆ ‘ಆಪರೇಷನ್ ಪೆÇೀಲೊ’ ನಡೆಯಿತು. ಅಲ್ಲದೆ, ಕಲ್ಯಾಣ ಕರ್ನಾಟಕದ ಸಂಪೂರ್ಣ ಬಿಡುಗಡೆಯ ಕಾರ್ಯವನ್ನು ಮಾಡಿದ್ದು ಒಂದು ಹೆಗ್ಗಳಿಕೆಯೇ ಸರಿ. ಒಬ್ಬ ದೂರದೃಷ್ಟಿಯ ವ್ಯಕ್ತಿ, ಮುತ್ಸದ್ಧಿಯ ಕೈಯಲ್ಲಿ ರಾಷ್ಟ್ರದ ಚುಕ್ಕಾಣಿ ಇದ್ದರೆ ಏನೆಲ್ಲ ಆಗಲು ಸಾಧ್ಯ; ಅಖಂಡವಾಗಿ ರಾಷ್ಟ್ರ ನಿರ್ಮಾಣ ಆಗಲು ಸಾಧ್ಯ ಎಂಬುದಕ್ಕೆ ನೈಜ ಉದಾಹರಣೆ ಸರ್ದಾರ್ ಪಟೇಲ್ ಅವರ ಮೂಲಕ ಹೈದರಾಬಾದ್ ಕರ್ನಾಟಕದ ವಿಮೋಚನೆ ಕಾರ್ಯ ನಮ್ಮ ಮುಂದಿದೆ.

ಒಮ್ಮೊಮ್ಮೆ ಕಾಲದ, ಇತಿಹಾಸದ ಅಧ್ಯಯನ ಮಾಡಿದ ಸಂದರ್ಭದಲ್ಲಿ ಪುನಃ ಪುನಃ ನಮ್ಮ ಸಮಾಜದ ಮೇಲೆ, ಈ ದೇಶದ ಮೇಲೆ ತಥಾಕಥಿತ ವ್ಯಕ್ತಿಗಳು ಆಕ್ರಮಿಸಿ ಈ ಸಮಾಜವನ್ನು ಗ್ಲಾನಿ ಮಾಡುವ ಕೆಲಸ ಮಾಡಿದ್ದು ಸ್ಪಷ್ಟವಾಗುತ್ತದೆ. ತುಷ್ಟೀಕರಣ ದೃಷ್ಟಿಯಿಂದ ನೋಡದೆ, ಮತಬ್ಯಾಂಕ್ ರಾಜಕೀಯಕ್ಕೆ ಅಂಟಿಕೊಳ್ಳದೆ ನೈಜ ಭಾರತದ ಅಖಂಡತೆಗಾಗಿ ದುಡಿದ ಸರ್ದಾರ್ ಪಟೇಲರ ಮುಖಾಂತರ ಇವತ್ತು ಕಲ್ಯಾಣ ಕರ್ನಾಟಕದ ರೂಪಾಂತರವಾಗಿ ನಿಂತಿರುವುದು ಕಾಣುತ್ತದೆ.

ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡ ಈ ಭಾಗದ ಜಿಲ್ಲೆಗಳನ್ನು ಪ್ರಗತಿದಾಯಕವಾಗಿ ಒಯ್ಯಬೇಕೆಂದು ಅನೇಕ ಕಾರ್ಯಕ್ರಮಗಳನ್ನು ಕೂಡ ಸರಕಾರಗಳು ತೆಗೆದುಕೊಂಡಿವೆ. ಮತ್ತಷ್ಟು ತೀವ್ರತೆಯಿಂದ ಆ ಕಾರ್ಯ ಮುಂದುವರೆಯಬೇಕಾಗಿದೆ. ದೇಶದ ಚುಕ್ಕಾಣಿ ಹಿಡಿದ ಒಬ್ಬ ಅದ್ವಿತೀಯ ಪ್ರಧಾನಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಭಾರತ ಹೇಗೆ ವಿಕಾಸ ಆಗುತ್ತಿದೆಯೋ ಆ ವಿಕಾಸದ ಹಾದಿಯಲ್ಲಿ ಕಲ್ಯಾಣ ಕರ್ನಾಟಕವೂ ನಡೆಯಬೇಕಾಗಿದೆ.

ಎಲ್ಲ ರಂಗಗಳಲ್ಲಿ ಬೆಳವಣಿಗೆ ಆಗಬೇಕಾಗಿದೆ. ಬಹು ಬೇಡಿಕೆಯ ರೈಲ್ವೆ ಸಂಪರ್ಕ, ಶಿಕ್ಷಣದ ಕ್ರಾಂತಿ ಆಗಬೇಕಿದೆ. ಅಕ್ಷರ- ಅನ್ನ ದಾಸೋಹದ ಮೂಲಕ ಇಲ್ಲಿನ ಗುರು ಪರಂಪರೆಯ ಮಠಗಳು ಅದನ್ನು ಪೆÇೀಷಿಸಿಕೊಂಡು ಬಂದಿವೆ. ಆ ನಿಟ್ಟಿನಲ್ಲಿ ಮತ್ತಷ್ಟು ತೀವ್ರ ಕಾರ್ಯ ಆಗಬೇಕಿದೆ. ಆ ನಿಟ್ಟಿನಲ್ಲಿ ಹೈದರಾಬಾದ್ ಕರ್ನಾಟಕದ ವಿಮೋಚನಾ ದಿನದ ಹೊಸ್ತಿಲಲ್ಲಿ ಕಲ್ಯಾಣ ಕರ್ನಾಟಕದ ಭಾಗ್ಯ ವಿಧಾತ ಬೆಳಕು ಆಗಲೇಬೇಕಿದೆ. ತನ್ಮೂಲಕ ಭಾರತದ ಜೊತೆಗೆ ಕಲ್ಯಾಣ ಕರ್ನಾಟಕದ ಸಂಪೂರ್ಣ ವಿಕಾಸ ಆಗುವುದು ಅವಶ್ಯ. ಆ ದಿಸೆಯಲ್ಲಿ ನಾವೆಲ್ಲರೂ ಒಟ್ಟಿಗೆ ಸೇರಿ ಸಾಮೂಹಿಕ ಪ್ರಯತ್ನ ಮಾಡೋಣ.

emedialine

Recent Posts

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

2 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

8 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

19 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

20 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

20 hours ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

20 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420