ಕಲಬುರಗಿ; ತನಗಾದ ಅನ್ಯಾಯವನ್ನು ಸಹಿಸುವನು ಹೃದಯವಂತ, ಬೇರೆಯವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವವನು ಸಂಸ್ಕಾರವಂತ, ಮಾನವೀಯ ಮೌಲ್ಯಗಳು ಹೊಂದಿರುವ ಜೀವನ ಮನುಷ್ಯನ ಸಂತೃಪ್ತಿಗೆ ಕಾರಣವಾಗುತ್ತದೆ ಎಂದು ಚಿಣಮಗೇರಿಯ ಪೂಜ್ಯರಾದ ಶ್ರೀ ವೀರ ಮಹಾಂತ ಶಿವಾಚಾರ್ಯರು ಹೇಳಿದರು.
ಶುಕ್ರವಾರ ತಾಲೂಕಿನ ಹತಗುಂದಿ ಗ್ರಾಮದ ಭಾಗ್ಯವಂತಿ ದೇವಸ್ಥಾನದಲ್ಲಿ “ಭಾಗ್ಯವಂತಿ ಪುರಾಣ” ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡುತ್ತಾ ಹತಗುಂದಿಯ ಶಿವಲೀಲಾ ತಾಯಿಯವರು ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತಾ ಭಕ್ತರ ಹೃದಯ ಮಂದಿರದಲ್ಲಿ ನೆಲೆಸಿದ್ದಾರೆಂದು ಆಶೀರ್ವಚನ ನೀಡಿದರು.
ಸತತವಾಗಿ ಐದು ದಿನಗಳಿಂದ ಸುಸ್ಕಲಿತವಾಗಿ ಪುರಾಣವನ್ನು ಹೇಳುತ್ತಿರುವ ಪುರಾಣಪಟುಗಳಾದ ಶ್ರೀ ಸಂಗಮೇಶ ಶಾಸ್ತ್ರಿ ಮಾಶಾಳ ಅವರು ಮಾತನಾಡುತ್ತಾ ಮನುಷ್ಯನ ಕೆಟ್ಟ ಕರ್ಮಗಳನ್ನು ಮಾಡಿ ಒಳಿತಾಗಲಿ ಎಂದು ಬಯಸಿದರೆ ಒಳ್ಳೆಯದಾಗುವುದಿಲ್ಲ. ಅವನು ಮಾಡಿದ ಕರ್ಮ ಆತನು ಅನುಭವಿಸಲೆಬೇಕು. ಅದಕ್ಕಾಗಿ ನಾವೆಲ್ಲರೂ ಪುಣ್ಯದ ಕಾರ್ಯ ಮಾಡಿ ಶರಣರು ಸಂತರು, ಮಹಾಂತರಂತೆ ಒಳ್ಳೆಯ ಕಾರ್ಯ ಮಾಡಿ ಅಮರವಾಗಬೇಕು. ಸಾಮಾನ್ಯ ಮನುಷ್ಯರು ನಿಸ್ವಾರ್ಥ ಸೇವೆ ಮಾಡಿ, ಮತ್ತೊಬ್ಬರಿಗೆ ಕೇಡನ್ನು ಬಯಸದವರು ಪವಾಡ ಮಾಡಬಹುದು ಎನ್ನುವುದಕ್ಕೆ ಘತ್ತರಗಿ ಭಾಗ್ಯವಂತಿಯೇ ಸಾಕ್ಷಿ ಎಂದು ಮಾರ್ಮಿಕವಾಗಿ ನುಡಿದರು.
ಕಡಕೋಳದ ಪೂಜ್ಯರದ ರುದ್ರಮನಿ ಶಿವಾಚಾರ್ಯರು, ನಿಂಬರ್ಗಾದ ಪೂಜ್ಯರಾದ ಶಿವಲಿಂಗ ದೇವರು, ಯಳವಂತಗಿ ಗ್ರಾಮದ ಸಿದ್ದಾರೂಡ ಮಠದ ಪೂಜ್ಯರಾದ ಪೂರ್ಣಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಗೊಬ್ಬುರದ ಶಿವಪುತ್ರಪ್ಪ ಸಾಧು ಮಹಾರಾಜ, ನಾಗೇಂದ್ರಪ್ಪ ಪಾಟೀಲ ಕುಮಸಿ, ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ವೇದಿಕೆ ಮೇಲಿದ್ದರು. ಇದೇ ಸಂದರ್ಭದಲ್ಲಿ ಹತಗುಂದಿ ಭಾಗ್ಯವಂತಿ ದೇವಸ್ಥಾನದ ಆರಾಧಕರಾದ ಮಾತೆ ಶಿವಲೀಲಾ ತಾಯಿಯವರಿಗೆ ವಿಶೇಷವಾಗಿ ಗೌರವಿಸಲಾಯಿತು.
ಸಂಗೀತ ಕಲಾವಿದರಾದ ಸಂಗಮೇಶ ನೀಲಾ, ಲಕ್ಷ್ಮಣ ಹೇರೂರ, ಆಂಜನೇಯ ಗುತ್ತೇದಾರ, ಮಲ್ಲಿನಾಥ ಭೂಪಾಲ ತೆಗನೂರ, ಮಡಿವಾಳ ನಂದೂರ, ಮಹಾಂತಯ್ಯ ಗೊಬ್ಬುರ ಸೇರಿದಂತೆ ಅನೇಕ ಕಲಾವಿದರು ಸಂಗೀತ ಸೇವೆ ಸಲ್ಲಿಸಿದರು. ಕಲ್ಯಾಣ ಕರ್ನಾಟಕ ಭಾಗದ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಯವರು ಆಧ್ಯಾತ್ಮಿಕದ ಹಾಸ್ಯ ಚಟಾಕಿಗಳೊಂದಿಗೆ ಗ್ರಾಮೀಣ ಭಾಗದ ಹಲವಾರು ಉದಾಹರಣೆಗಳನ್ನು ತೆಗೆದುಕೊಂಡು ನೆರೆದವರನ್ನು ಬಿದ್ದು ಬಿದ್ದು ನಗಿಸುವುದರೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಹತಗುಂದಿ, ಯೆಳವಂತಿಗೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಹಲವಾರು ಜನ ಭಾಗವಹಿಸಿದ್ದರು.
ಬಸವಕಲ್ಯಾಣ: ವಿಕಲಚೇತನರು ತಮ್ಮ ಅಂಗವಿಕಲತೆ ಬಗ್ಗೆ ಅಗೌರವ ತಾಳಲಾರದೇ,ಅನುಕಂಪ ತೋರಿಸದೇ ಸ್ವ ಪ್ರತಿಭೆ ಹೊಂದಿದ ಅವರಿಗೆ ಮೂಲಭೂತ ಸೌಲಭ್ಯ ಗಳನ್ನು…
ಕಲಬುರಗಿ: ಸ್ಥಾಪಿತ ಸಿದ್ಧಾಂತ ಹೊಡೆದು ಹಾಕಿ ಅವೈದಿಕ ವಚನ ಸಾಹಿತ್ಯವನ್ನು ಜನಮಾನಸಕ್ಕೆ ಮುಟ್ಟಿಸಿದ ಡಾ.ಎಂ.ಎಂ.ಕಲಬುರ್ಗಿ ಯವರು ಸತ್ಯದ ಸಂಶೋಧಕರಾಗಿದ್ದರು ಎಂದು…
ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಗುರುವಾರ ಸಂಜೆ ತಮ್ಮ ಹುಟ್ಟು ಹಬ್ಬವನ್ನು ಕಲಬುರಗಿ ನಗರದ ಆಳಂದ ನಾಕಾ ರಸ್ತೆಯಲ್ಲಿರುವ…
ಕಲಬುರಗಿ; ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಪಹಣಿಗೆ ಆಧಾರ್ ಜೋಡಣೆ ಮತ್ತು ಸರ್ಕಾರಿ ಜಮೀನುಗಳ ಸಂರಕ್ಷಣೆಯ ಲ್ಯಾಂಡ್ ಬೀಟ್ ಅಪ್ಲಿಕೇಶನ್ ನಲ್ಲಿ…
ಸುರಪುರ: ಹಿಂದಿನ ಕಾಲದಲ್ಲಿ ಅನೇಕ ಜನ ರಾಜರು ಸ್ವತಃ ತಾವೇ ಪಾರಂಪರಿಕ ವೈದ್ಯರಾಗಿದ್ದು ಬೇಟೆಗೆ ಹೋದ ಸಂದರ್ಭದಲ್ಲಿ ತಾವೇ ಮದ್ದು…
ಸುರಪುರ: ಸಾರ್ವಜನಿಕರು ತಮ್ಮ ಕೆಸಲ ಕಾರ್ಯಗಳಿಗಾಗಿ ಕಚೇರಿಗೆ ಬಂದಾಗ ವಿಳಂಬ ಮಾಡದೆ ನ್ಯಾಯಯುತವಾದ ಅರ್ಜಿಗಳ ಕೆಲಸ ಮಾಡಿಕೊಡುವಂತೆ ಕರ್ನಾಟಕ ಲೋಕಾಯುಕ್ತ…