ಚಿತ್ತಾಪುರ; ತಾಲ್ಲೂಕಿನ ಲಾಡ್ಲಾಪುರ ಗ್ರಾಮದ ಸುಮಾರು ೨೫ಕ್ಕೂ ಅಧಿಕ ರೈತರಿಗೆ ಹಿಂಗಾರು ಹಂಗಾಮಿಗಾಗಿ ಉತ್ತಮ ತಳಿಯ ಶೇಂಗಾ ಬೀಜ ನೀಡುತ್ತೇವೆಂದು ನಂಬಿಸಿ ಮಿಲ್ ಮಾಲೀಕರು ಮೋಸ ಮಾಡಿದ್ದು ಮಿಲ್ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಹಾಗೂ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಎಐಕೆಕೆಎಂಎಸ್ ರೈತ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ನಕಲಿ ಶೇಂಗಾ ಬೀಜ ನೀಡಿ ಮೋಸ ಮಾಡಿದ ಮಿಲ್ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಘೋಷಣೆ ಕೂಗಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬಿ ಭಗವಾನರೆಡ್ಡಿ, ಮಳೆಯ ತೀವ್ರ ಕೊರತೆಯಿಂದ ಬರಗಾಲದ ಬೇಗೆಗೆ ನರಳಿ ಹೋಗುತ್ತಿರುವ ರೈತ ಸಮುದಾಯಕ್ಕೆ ಕಳಪೆ ಬೀಜ, ಕಳಪೆ ರಾಸಾಯನಿಕ ಗೊಬ್ಬರ ಗಾಯದ ಮೇಲೆ ಬರೆ ಎಳೆಯುತ್ತಿದೆ. ರೈತರ ಅಜ್ಞಾನವನ್ನೇ ಬಂಡವಾಳ ಮಾಡಿಕೊಂಡು ಮೋಸ ಮಾಡಲಾಗುತ್ತಿದೆ. ಲಾಡ್ಲಾಪುರ ಗ್ರಾಮದ ಸುಮಾರು 50 ರೈತರಿಗೆ 13200 ಪ್ರತಿ ಕ್ವಿಂ ಗೆ ಹಣ ಪಡೆದು ಕಳಪೆ ಬೀಜ ನೀಡಿದ್ದು ಅತ್ಯಂತ ಗಂಭೀರ ಪ್ರಕರಣ ಎಂದು ಪರಿಗಣಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಜೈಲಿಗೆ ಅಟ್ಟಬೇಕು. ನಕಲಿ ಬೀಜ ಪೂರೈಕೆ ಮಾಡುವುದು ಎಂದರೆ ಅವರ ಒಂದು ವರ್ಷದ ಇಡೀ ಆದಾಯ ಕಸಿದು ಕೊಂಡಂತಾಗಿದ್ದು ಸಾಲ ಮಾಡಿ ಬೀಜ ಖರೀದಿಸಿ ಬೀದಿಗೆ ಬಿದ್ದಿದ್ದಾರೆ. ನಕಲಿ ಬಿಲ್ ಜೊತೆಗೆ ನಕಲಿ ಶೇಂಗಾಬೀಜ ನೀಡಿ ಅನ್ಯಾಯ ಮಾಡಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ರಾಯಚೂರು ಪಟ್ಟಣದ ಮನ್ಸಲಾಪುರ ರಸ್ತೆ ಮಾರ್ಗದ ‘ಫತಾಹ ಇಂಡಸ್ಟ್ರೀ’ ಎಂಬ ಹೆಸರಿನ ಶೇಂಗಾ ಮಿಲ್ ನವರ ಮೇಲೆ ಕ್ರಿಮಿನಲ್ ಮೂಕದ್ದಮೆ ಹಾಕಿ ಜೈಲಿಗೆ ಅಟ್ಟಬೇಕು ಎಂದು ಅಗ್ರಹಿಸಿದರು.
ಜಿಲ್ಲಾ ಕಾರ್ಯದರ್ಶಿ ಮಹೇಶ್ ಎಸ್ ಬಿ ಮಾತನಾಡಿ – ಒಳ್ಳೆ ಇಳುವರಿ ಬೀಜ ಎಂದು ನಂಬಿಸಿ ನಕಲಿ ಕಳಪೆ ಮಟ್ಟದ ಬೀಜಗಳನ್ನು ನೀಡಿರುವ ಪೂರೈಕೆದಾರರ ಮಾತು ನಂಬಿ ಅವರು ಕೇಳಿದಷ್ಟು ಹಣ ನೀಡಿ ಬೀಜ ಖರೀದಿಸಿರುವ ರೈತರು ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತಿದ ನಂತರ ಅರಳದೇ ಮಣ್ಣಿನಲ್ಲಿ ಕೊಳೆತು ಹೋಗಿದ್ದು ರೈತರು ಕಣ್ಣೀರು ಹಾಕುತ್ತಿದ್ದಾರೆ. ಕಳಪೆ ಶೇಂಗಾಬೀಜ ಪೂರೈಸಿದ ಮಿಲ್ ಮಾಲೀಕರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ರೈತರಿಗೆ ಸೂಕ್ತ ಪರಿಹಾರ ನೀಡಿ ಅವರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕು. ರಾಜ್ಯ ಹಾಗೂ ಜಿಲ್ಲೆಯಲ್ಲಿ ಇಂತಹ ನಕಲಿ ಬೀಜ ಮತ್ತು ರಸಗೊಬ್ಬರ, ಕೀಟನಾಶಕ ನೀಡುತ್ತಿದ್ದು ಇಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಅಂತವರನ್ನು ಜೈಲಿಗೆ ಅಟ್ಟಬೇಕು ಎಂದು ಅಗ್ರಹಿಸಿದರು.
ಪ್ರತಿಭಟನೆಯಲ್ಲಿ ಚಿತ್ತಾಪುರ ತಾಲ್ಲೂಕು ಉಪಾಧ್ಯಕ್ಷ ಗುಂಡಣ್ಣ ಎಂ ಕೆ, ರೈತ ಮುಖಂಡರಾದ ವಿಶ್ವನಾಥ, ಶ್ರೀದೇವಿ ಮಲ್ಕಂಡಿ, ರೈತರಾದ ಗೌಡಪ್ಪ ಕಚಾಪುರ, ಮರೆಪ್ಪ ಗಂಜಿ, ಶರಣಪ್ಪ ಗಂಜಿ, ನಾಗಪ್ಪ ನಾಯ್ಕೋಡಿ, ಅನಿಲಗೌಡ, ಕಚಾಪುರ, ಶಿವಕುಮಾರ ಊಟಿ ಸಹಿತ ಹಲವರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…