ಸುರಪುರ :ನಗರದ ರಂಗಂಪೇಟೆಯಲ್ಲಿರುವ ಗುಲಬರ್ಗಾ ವಿದ್ಯುಚಕ್ತಿ ಸರಬರಾಜು ಕಂಪನಿಯ ಸುರಪುರ ಜೆಸ್ಕಾಂ ಕಾರ್ಯ ಮತ್ತು ಪಾಲಕ ವಿಭಾಗೀಯ ನೂತನ ಕಚೇರಿಯ ಪೂಜೆ ಹಾಗೂ ಕಾರ್ಯಾರಂಭಕ್ಕೆ ಚಾಲನೆ ನೀಡಲಾಯಿತು.
ಕರ್ನಾಟಕ ಸರಕಾರದ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮ ಸಚಿವರು ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮತ್ತು ಶಾಸಕ ರಾಜಾ ವೆಂಕಟಪ್ಪ ನಾಯಕ ಅವರುಗಳು ರಿಬ್ಬನ್ ಕತ್ತರಿಸುವ ಮೂಲಕ ಕಚೇರಿ ಕಾರ್ಯಾರಂಭಕ್ಕೆ ಚಾಲನೆ ನೀಡಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಜೆಸ್ಕಾಂ ಇಲಾಖೆಯ ಅಧೀಕ್ಷಕ ಅಭಿಯಂತರ ಎಂ.ಎಂ.ಕಿತ್ತೂರು, ಹೆಚ್ಚುವರಿ ಕಾರ್ಯನಿರ್ವಾಹಕ ಅಭಿಯಂತರ ರಾಘವೇಂದ್ರ, ಎಇಇ ಅಶೋಕ ಚವ್ಹಾಣ, ಎಇಇ ಸುಜೀತ್ ಕುಮಾರ, ಎಇಟಿ ಶ್ರೀನಿವಾಸ ಪ್ರಸಾದ, ಹುಣಸಗಿ ಎಇಇ ಕಲಕಪ್ಪ, ಶಹಾಪುರ ಕೆಪಿಟಿಸಿಎಲ್ ಎಇಇ ಭೀಮಾಶಂಕರ, ಜೆಸ್ಕಾಂ ಎಇಇ ಮರೆಪ್ಪ ಕಡೇಕಲ್, ಕೆಂಭಾವಿ ಶಾಖಾಧಿಕಾರಿ ಶ್ರೀಶೈಲ್ ತಮದಡ್ಡಿ, ಆರ್ಎಪಿಡಿಆರ್ಪಿ ರಾಜಶೇಖರ ನಾಯಕ, ಮಹಿಬೂಬ್ಸಾಬ್ ಸುರಪುರ, ಶಾಂತಪ್ಪ ಕುರಿ ಅಮ್ಮಾಪುರ, ಪ್ರಮೋದ ದೇವಪುರ. ಪ್ರಮುಖರಾದ ವೆಂಕೋಬ ಸಾಹು ಮಂಗಳೂರು, ಮಲ್ಲಣ್ಣ ಸಾಹು ಮುಧೋಳ, ರಾಜಾ ವೇಣುಗೋಪಾಲ ನಾಯಕ, ರಾಜಾ ಕುಮಾರ ನಾಯಕ, ನಿಂಗರಾಜ್ ಬಾಚಿಮಟ್ಟಿ, ಸುಗೂರೇಶ ವಾರದ, ಖಾಲೀದ್ ಅಹ್ಮದ್ ತಾಳಿಕೋಟಿ, ಕಮರುದ್ಧೀನ್ ನಾರಾಯಣಪೇಟೆ, ಭಂಡಾರೆಪ್ಪ ನಾಟೇಕg, ಗುತ್ತಿಗೆದಾರರಾz ಗೌಡಪ್ಪಗೌಡ ಚನ್ನೂರ, ಬಾಬುಮಿಯಾ, ನವಾಬ್, ಗುರುರಾಜ್ ಚಾಮನಾಳ, ಅಯ್ಯಪ್ಪ ಅಕ್ಕಿ, ವಿನೋದರೆಡ್ಡಿ ಶಾರದಹಳ್ಳಿ, ಮೌನೇಶ ಸೇರಿದಂತೆ ಅನೇಕ ಮುಖಂಡರು, ಸಾರ್ವಜನಿಕರು, ಜೆಸ್ಕಾಂ ಅಧಿಕಾರಿ, ಸಿಬ್ಬಂದಿ ವರ್ಗದವರು ಇದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…