ಶಹಾಪುರ; ಸಾಹಿತ್ಯ ಪರಿಷತ್ ಮುಡಬುಳ ವತಿಯಿಂದ ಪ್ರಥಮ ವರ್ಷದ ಕನ್ನಡ ರಾಜ್ಯೋತ್ಸವದ ನುಡಿ ಸಂಭ್ರಮ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮುಡಬುಳ ಗ್ರಾಮದಲ್ಲಿ ಜರುಗಿತು.
ಈ ಸಂಧರ್ಭದಲ್ಲಿ ನಾಡ ದೇವತೆ ಭುವನೇಶ್ವರಿ ಭಾವ ಚಿತ್ರಕ್ಕೆ ಪೂಜೆ ನೆರವೇರಿಸಿ ಧ್ವಜಾರೋಹಣವನ್ನು ವಲಯ ಅಧ್ಯಕ್ಷರಾದ ಡಾ. ನಾಗರಾಜ ದೊರೆಯವರು ನೆರವೇರಿಸಿದರು.
ಧ್ವಜಾರೋಹಣದ ನಂತರ ಖ್ಯಾತ ಸಂಗೀತ ಕಲಾವಿದರಿಂದ ಕನ್ನಡದ ಕಂಪನ್ನು ಒಳಗೊಂಡ ಕನ್ನಡ ಗೀತೆಗಳನ್ನು ಗಾಯಕರಾದ ಚಂದ್ರಕಾಂತ ಮತ್ತು ಕುಮಾರಿ ಲತಾ ಲಿಂಗಸೂಗೂರರವರು ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ. ಈರಣ್ಣ ಹವಾಲ್ದಾರರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಲ್ಲಣಗೌಡ ಪಾಟೀಲ್, ಈರಣ್ಣ ದೇಸಾಯಿ,ಬಸವರಾಜ ಹವಾಲ್ದಾರ್, ಶಾಂತಗೌಡ ಮಾಲಿಪಾಟೀಲ್,ಶಾಂತಲಿಂಗಪ್ಪ ಬಬಲಾದಿ,ಶೈಲ್ ಬುಕಿಷ್ಟಗಾರ್, ನಾಗಣ್ಣ ಸಾಹು, ಭೀಮಶ್ಯ ಹವಾಲ್ದಾರ,ಭೀಮಣ್ಣ ಜೇಟ್ಟೂರ್, ರಾಚೋಟಿ ಸಾಹು, ನಿಂಗಣ್ಣ ಸಜ್ಜನ,ನನ್ನಯ್ಯ ಸ್ವಾಮಿ ಗಣಚಾರಿ ಕೃಷ್ಣಪ್ಪ ನಾಯ್ಕೊಂಡಿ, ಸಂಗನಬಸಪ್ಪ ದೊರಿ,ನಿಂಗಣ್ಣ ಹವಾಲ್ದಾರ, ವಿಶ್ವರಾಧ್ಯ ದೇಸಾಯಿ, ಅನಿಲ್ಗೌಡ ಮದ್ರಿಕಿ,ರವಿ ಮದ್ರಿಕಿ,ಸಿದ್ದು ಕರೀಭಾವಿ, ನಿವಾಸ್ ಅಂಗಡಿ, ಸೇರಿದಂತೆ ಶಾಲಾ ಮಕ್ಕಳು ಶಿಕ್ಷಕರು ಹಾಗೂ ವಲಯ ಸಾಹಿತ್ಯ ಪರಿಷತ್ನ ಸರ್ವ ಸದಸ್ಯರು ಹಾಜರಿದ್ದರು.
ಈ ಕಾರ್ಯಕ್ರಮವನ್ನು ಹಣಮಂತ್ರಾಯ ಗುರಿಕಾರ ನಿರೂಪಿಸಿದರು, ಶೈಲ್ ಅಗಸರ ಸ್ವಾಗತಿಸಿದರು, ದೇವುನಾಯಕ ವಂದಿಸಿದರು.
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…