ಸಾಹಿತ್ಯ ಪರಿಷತ್ ಮುಡಬುಳ ವತಿಯಿಂದ ಕನ್ನಡ ರಾಜ್ಯೋತ್ಸವದ ನುಡಿ ಸಂಭ್ರಮ

0
44

ಶಹಾಪುರ; ಸಾಹಿತ್ಯ ಪರಿಷತ್ ಮುಡಬುಳ ವತಿಯಿಂದ ಪ್ರಥಮ ವರ್ಷದ ಕನ್ನಡ ರಾಜ್ಯೋತ್ಸವದ ನುಡಿ ಸಂಭ್ರಮ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮುಡಬುಳ ಗ್ರಾಮದಲ್ಲಿ ಜರುಗಿತು.

ಈ ಸಂಧರ್ಭದಲ್ಲಿ ನಾಡ ದೇವತೆ ಭುವನೇಶ್ವರಿ ಭಾವ ಚಿತ್ರಕ್ಕೆ ಪೂಜೆ ನೆರವೇರಿಸಿ ಧ್ವಜಾರೋಹಣವನ್ನು ವಲಯ ಅಧ್ಯಕ್ಷರಾದ ಡಾ. ನಾಗರಾಜ ದೊರೆಯವರು ನೆರವೇರಿಸಿದರು.

Contact Your\'s Advertisement; 9902492681

ಧ್ವಜಾರೋಹಣದ ನಂತರ ಖ್ಯಾತ ಸಂಗೀತ ಕಲಾವಿದರಿಂದ ಕನ್ನಡದ ಕಂಪನ್ನು ಒಳಗೊಂಡ ಕನ್ನಡ ಗೀತೆಗಳನ್ನು ಗಾಯಕರಾದ ಚಂದ್ರಕಾಂತ ಮತ್ತು ಕುಮಾರಿ ಲತಾ ಲಿಂಗಸೂಗೂರರವರು ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ. ಈರಣ್ಣ ಹವಾಲ್ದಾರರವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಲ್ಲಣಗೌಡ ಪಾಟೀಲ್, ಈರಣ್ಣ ದೇಸಾಯಿ,ಬಸವರಾಜ ಹವಾಲ್ದಾರ್, ಶಾಂತಗೌಡ ಮಾಲಿಪಾಟೀಲ್,ಶಾಂತಲಿಂಗಪ್ಪ ಬಬಲಾದಿ,ಶೈಲ್ ಬುಕಿಷ್ಟಗಾರ್, ನಾಗಣ್ಣ ಸಾಹು, ಭೀಮಶ್ಯ ಹವಾಲ್ದಾರ,ಭೀಮಣ್ಣ ಜೇಟ್ಟೂರ್, ರಾಚೋಟಿ ಸಾಹು, ನಿಂಗಣ್ಣ ಸಜ್ಜನ,ನನ್ನಯ್ಯ ಸ್ವಾಮಿ ಗಣಚಾರಿ ಕೃಷ್ಣಪ್ಪ ನಾಯ್ಕೊಂಡಿ, ಸಂಗನಬಸಪ್ಪ ದೊರಿ,ನಿಂಗಣ್ಣ ಹವಾಲ್ದಾರ, ವಿಶ್ವರಾಧ್ಯ ದೇಸಾಯಿ, ಅನಿಲ್ಗೌಡ ಮದ್ರಿಕಿ,ರವಿ ಮದ್ರಿಕಿ,ಸಿದ್ದು ಕರೀಭಾವಿ, ನಿವಾಸ್ ಅಂಗಡಿ, ಸೇರಿದಂತೆ ಶಾಲಾ ಮಕ್ಕಳು ಶಿಕ್ಷಕರು ಹಾಗೂ ವಲಯ ಸಾಹಿತ್ಯ ಪರಿಷತ್ನ ಸರ್ವ ಸದಸ್ಯರು ಹಾಜರಿದ್ದರು.

ಈ ಕಾರ್ಯಕ್ರಮವನ್ನು ಹಣಮಂತ್ರಾಯ ಗುರಿಕಾರ ನಿರೂಪಿಸಿದರು, ಶೈಲ್ ಅಗಸರ ಸ್ವಾಗತಿಸಿದರು, ದೇವುನಾಯಕ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here