ಕಲಬುರಗಿ: ಜೀವಿಯೊಂದನ್ನು ಅಭಿವೃದ್ಧಿಪಡಿಸಲು, ಬದುಕಲು ಮತ್ತು ಸಂತಾನೋತ್ಪತ್ತಿ ಮಾಡಲು ಅಗತ್ಯವಿರುವ ಸೂಚನೆಗಳನ್ನು ಡಿಎನ್ಎ ಒಳಗೊಂಡಿದೆ ಎಂದು ಕೆಬಿಎನ್ ವಿವಿ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಂ.ಎ ಮುಜೀಬ ಅಭಿಪ್ರಾಯಪಟ್ಟರು.
ಖಾಜಾ ಬಂದನವಾಜ ವಿಶ್ವವಿದ್ಯಾನಿಲಯ ಮನೋವಿಜ್ಞಾನ ವಿಭಾಗವು ಗುರುವಾರ ಏರ್ಪಡಿಸಿದ್ದ ಡಿಎನ್ ಎ: ಒಂದು ವಿಸ್ಮಯ ಅಣು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಡಿಎನ್ಎ ಅನುಕ್ರಮಗಳನ್ನು ಪ್ರೋಟೀನ್ಗಳನ್ನು ಉತ್ಪಾದಿಸಲು ಬಳಸಬಹುದಾದ ಸಂದೇಶಗಳಾಗಿ ಪರಿವರ್ತಿಸಬೇಕು. ನಮ್ಮ ದೇಹದಲ್ಲಿನ ಹೆಚ್ಚಿನ ಕೆಲಸವನ್ನು ಮಾಡುವ ಸಂಕೀರ್ಣ ಅಣುಗಳಾಗಿವೆ. ನ್ಯೂಕ್ಲಿಯೊಟೈಡ್ ಮತ್ತು ಪ್ರೊಟೀನ್ಗಳು ಏಕೆ ಮುಖ್ಯ ಎಂಬುವುದನ್ನು ಮತ್ತು ಡಿಎನ್ಎ ಕಾರ್ಯನಿರ್ವಹಣೆಯ ಬಗ್ಗೆ ಅವರು ವಿವರಿಸಿದರು. ಕಲೆ, ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದ ಡೀನ್ ಪ್ರೊ. ನಿಶಾತ್ ಆರೀಫ್ ಹುಸೇನ ಮಾರ್ಗದರ್ಶನ ಮಾಡಿದರು.
ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಹಾಗೂ ಸಂಯೋಜಕಿ ಶ್ರೀಮತಿ ಮನಿಷಾ ಪಾಟೀಲ್ˌ ಡಾ. ಹಮೀದ್ ಅಕ್ಬರ್, ಡಾ. ಮೈಮೂನ್, ಡಾ. ಅಥರ್, ಡಾ. ಅಬ್ರಾರ್, ಡಾ. ಜಾವೆದ್ ಡಾ. ನಗ್ಮ್, ಡಾ. ಸುನಿಲ್, ಡಾ. ಮುಜೀಬ್, ಡಾ. ಅಬ್ರಾರ್, ಡಾ. ಅತಿಯಾ, ಡಾ. ಜನಾಬ್, ಡಾ. ಸವಿತಾ, ಡಾ. ತಬಸ್ಸುಮ್, ಡಾ. ಫೆಮಿದ, ಡಾ. ನಮ್ರತಾ, ಡಾ. ಮನಿಷಾ , ಡಾ. ಮಿಲನ್, ರಮೇಶ್ ಇದ್ಡರು. ಬತೂಲ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಮಿಸಬಾ ಸ್ವಾಗತಿಸಿದರು. ಫಿರ್ದೌಸ್ ನಿರೂಪಿಸಿದರು. ಸಮಿಹಾ ವಂದಿಸಿದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…