ಬಿಸಿ ಬಿಸಿ ಸುದ್ದಿ

ಪ್ಯಾಲೆಸ್ಟೈನ್ ನಲ್ಲಿ ‘ನರಮೇಧ ನಿಲ್ಲಿಸಿ ಶಾಂತಿ ಸ್ಥಾಪಿಸಿ’ ಸಿಪಿಐಎಂ ವತಿಯಿಂದ ಸಮಾವೇಶ

ಕಲಬುರಗಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತವು ಪ್ಯಾಲೆಸ್ಟೈನ್ ಪರ ಬೆಂಬಲಿಸಲಿಲ್ಲ ಅಂದರೆ ಇಸ್ರೇಲ್ ನ ನರಮೇಧ ಬೆಂಬಲಿಸಿದಂತೆ ಭಾರತವು ಪ್ಯಾಲೆಸ್ಟೈನ್ ರ ತಾಯ್ನೆಲದ ಹೋರಾಟಕ್ಕೆ ಬೆಂಬಲಿಸಿದೆ. ಆದರೆ ಪ್ರಧಾನಿಯವರು ಇಂದು ನರಮೇಧಕ್ಕೆ ಬೆಂಬಲ ಕೊಡುವ ಮೂಲಕ ಭಾರತದ ಅಲಿಪ್ತ ನೀತಿಯ ವಿರುದ್ಧ ನಡೆದುಕೊಂಡಿದೆ ಎಂದು ಸಿಪಿಐಎಂ ಪಕ್ಷದ ಪಾಲಿಟ್ ಬ್ಯರೊ ಸದಸ್ಯರಾದ ಮತ್ತು ಮಾಜಿ ಉನ್ನತ ಶಿಕ್ಷಣ ಸಚಿವರಾದ ಕಾ.ಎಂ ಎ ಬೇಬಿ ಹೇಳಿದರು.

ಸಿಪಿಐಎಂ ಆಯೋಜಿಸಿದ ‘ನರಮೇಧ ನಿಲ್ಲಿಸಿ ಶಾಂತಿ ಸ್ಥಾಪಿಸಿ’ ಸಮಾವೇಶದಲ್ಲಿ ಮಾತನಾಡಿದ ಅವರು ಇಸ್ತೇಲಿ ನರಮೇಧ ಸಿದ್ಧಾಂತವೇ ಭಾರತದಲ್ಲಿ ಮಹಾತ್ಮಾ ಗಾಂಧಿಯವರನ್ನು ಕೊಂದಿದ್ದು ಇತಿಹಾಸದಲ್ಲಿ ನೋಡಿದ್ದೇವೆ. ಭಾರತದ ಪರಂಪರೆಯು ಶಾಂತಿಗಾಗಿ ಶ್ರಮಿಸಿದ ಪರಂಪರೆಯಾಗಿದೆ. ಇಸ್ರೇಲ್ ದೇಶವು ಆಸ್ಪತ್ರೆಯ ಮೇಲೆ, ನಿರಾಶ್ರಿತರ ಶಿಬಿರದ ಮೇಲೂ ಜನವಸತಿಯ ಮೇಲೂ ಧಾಳಿ ಮಾಡುತ್ತಿದೆ. ಇದು ಏಕಪಕ್ಷೀಯ ನರಮೇಧವಾಗಿದೆ. ಇಂತಹ ನರಮೇಧಕ್ಕೆ ಅಮೇರಿಕವು ಶಸ್ತ್ರಾಸ್ತ ಮತ್ತು ಹಣಕಾಸು ನೆರವು ನೀಡುತ್ತಿದೆ. ಇದು ಅತ್ಯಂತ ಅಪಾಯಕಾರಿಯಾದದ್ದು. ಇದು ನಿಲ್ಲಬೇಕು. ಶಾಂತಿ ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿದರು.

ಪ್ಯಾಲೆಸ್ಟೈನ್ ರಿಗೆ ತಾಯ್ನಾಡು ದೊರೆಯಬೇಕು. ಪ್ಯಾಲೆಸ್ಟೈನ್ ನ ಗಾಜಾ ಪ್ರದೇಶದಲ್ಲಿ ಜನರು ವಾಸ ಮಾಡುತ್ತಾರೆ. ಇಸ್ರೇಲಿ ಸೈನಿಕರು ಇಡೀ ಗಾಜಾ ಪ್ರದೇಶದ ಜನರಿಗೆ ಹೊರಹೋಗದಂತೆ ಮಾಡಲಾಗಿದೆ. ದಿಗ್ಭಂಧನ ಹಾಕಲಾಗಿದೆ. ನೀರು ಮೆಡಿಕಲ್ ವಿದ್ಯುಚ್ಚಕ್ತಿ ದೊರೆಯದಂತೆ ಮಾಡಲಾಗಿದೆ. ಇದು ಅತ್ಯಂತ ಅಮಾನವೀಯವಾದದ್ದು. ಇದನ್ನು ಶಾಂತಿ ಬಯಸುವ ಎಲ್ಲರೂ ತೀವ್ರವಾಗಿ ಖಂಡಿಸಬೇಕಿದೆ ಎಂದು ಕರೆ ನೀಡಿದರು.

ಅಮೇರಿಕಾ ಇಸ್ರೇಲ್ ಬೆಂಬಲಿಸುವ ತನ್ನ ಕ್ರೂರ ನಿಲುವು ನಿಲ್ಲಿಸಬೇಕು. ಪ್ಯಾಲೆಸ್ಟೈನ್ ಜನತೆಗೆ ಬದುಕುವ ಎಲ್ಲ ಹಕ್ಕುಗಳು ದೊರೆಯಬೇಕು ಎಂದು ಸಿಪಿಐಎಂ ಪಕ್ಷದ ಪಾಲಿಟ್ ಬ್ಯೂರೊ ಸದಸ್ಯರಾದ ಕಾ.ಬಿ ವಿ ರಾಘವಲು ಹೇಳಿದರು.

ಈ ಸಮಾವೇಶದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಕಾ.ಯು ಬಸವರಾಜ ಹಾಗೂ ಜಿಲ್ಲಾ ಕಾರ್ಯದರ್ಶು ಕಾ.ಕೆ ನೀಲಾ ಭಾಗವಹಿಸಿರುವರು. ಮತ್ತು ಕಾ.ಶರಣಬಸಪ್ಪ ಮಮಶೆಟ್ಟಿ, ಕಾ.ಶ್ರೀಮಂತ ಬಿರಾದಾರ, ಕಾ.ಗೌರಮ್ಮ, ಕಾ.ಶಾಂತಾ ಘಂಟೆ, ಕಾ.ಎಂ ಬಿ ಸಜ್ಜನ್, ಕಾ.ಭೀಮಶೆಟ್ಟಿ ಯಂಪಳ್ಳಿ ಅವರು ವೇದಿಕೆಯ ಮೇಲಿದ್ದರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

32 mins ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

1 hour ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

1 hour ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

1 hour ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

2 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

3 hours ago