ಕಲಬುರಗಿ: ದೀಪಾವಳಿ ಹಬ್ಬದ ಪ್ರಯುಕ್ತ ಜಿಲ್ಲಾ ಹಟಗಾರ ಸಮಾಜದಿಂದ ಭಾನುವಾರ ವಿಶೇಷ ಸಭೆ ಜರುಗಿತು.
ಕರ್ನಾಟಕ ರಾಜ್ಯ ಹಟಗಾರ ಸಮಾಜ ಸಂಘಟನೆ ದೃಷ್ಟಿಯಿಂದ, ಸಮಾಜದ ಏಳಿಗೆಗೆ ಮತ್ತು ಅಭಿವೃದ್ಧಿ ಗಾಗಿ, ವರ್ಷವಿಡಿ ಹತ್ತಾರು ಕಾರ್ಯಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಪ್ರತಿಯೊಂದು ಹಟಗಾರ ಮನೆ ಸದಸ್ಯರಿಗೆ ಅನುಕೂಲವಾಗುವಂತೆ ಹೊಸ ಬೆಳಕಿನಡೆ, ನಮ್ಮ ಸಮಾಜದ ನಡೆ, ಎನ್ನುವ ಘೋಷ ವಾಕ್ಯದೊಂದಿಗೆ ಸಭೆ ಪ್ರಾರಂಭಿಸಲಾಯಿತು.
ಮೊದಲಿಗೆ, ಕರ್ನಾಟಕ ರಾಜ್ಯ ಹಟಗಾರ ಸಮಾಜದ ಸದಸ್ಯ ಶಿವಲಿಂಗಪ್ಪಾ ಅಷ್ಟಗಿ, ಸದಸ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಪಾಲ್ಗೊಂಡ ಗುಲ್ಬರ್ಗಾ ಹಟಗಾರ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಚನ್ನಮಲ್ಲಪ್ಪ ನಿಂಬೆಣ್ಣಿ ಯವರು, ನಮ್ಮ ಸ್ಥಾನಿಕ ಸಂಘ 2004 ರಲ್ಲಿ ನೊಂದಣಿ ಗೊಂಡು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದೆ, ಆದರೂ ಸಂಘಟನೆ ದೃಷ್ಟಿಯಿಂದ ರಾಜ್ಯ ಸಂಘದಲ್ಲಿ ಸೇರ್ಪಡೆ ಗೊಳ್ಳಲ್ಲೂ ಇಚ್ಚೆ ಇದೆ. ಇದನ್ನು ನಮ್ಮ ಸಂಘದಲ್ಲಿ ಸೂಕ್ತವಾಗಿ ಚರ್ಚಿಸಿ, ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಶಕ್ತಿಯುತಗೊಳ್ಳಲ್ಲೂ ರಾಜ್ಯಾಧ್ಯಕ್ಷ ಅಶೋಕ್ ಅಂಕದ ರವರಿಗೆ ಪತ್ರ ಬರೆದು ತಿಳಿಸಿ, ಒಗ್ಗಟ್ಟು ಪ್ರದರ್ಶಿಸಿಲು ಸಹಕಾರ ಬಯಸುತೇನೆ ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ತಾಲೂಕಿನ ಸಂಘಗಳನ್ನು ರಾಜ್ಯ ಸಂಘದ ಸಂಘಟನೆಯಲ್ಲಿ ಜೋಡಿಸಿದರೆ ಮಾತ್ರ ಸಮಾಜ ಇನ್ನೂ ಬೆಳಕಿಗೆ ಬರಲು ಸಾಧ್ಯವಾಗುತದೆ ಎಂದು ಹಿರಿಯ ಸದಸ್ಯ ಚೌಡೇಶ್ವರಿ ಸಹಕಾರ ಸಂಘದ ಶಿವ ಶರಣಪ್ಪ ಮುಂಡರ್ಕಿ ತಿಳಿಸಿದರು. ರಾಜ್ಯ ಸದಸ್ಯರಾದ ಶಾಂತಕುಮಾರ ಗೌರ, ಹಿರಿಯರು ಹೇಳಿದ ಮಾತುಗಳು ನಮಗೆ ಮಾರ್ಗವಿದಂತೆ ಅವುಗಳನ್ನು ಅನುಮೋದಿಸುತೇನೆ ಎಂದರು.
ಸಮಾಜದ ಹಿರಿಯ ಲೇಖಕರಾದ ಸೂರ್ಯಕಾಂತ ಸೊನ್ನದ ಸಭೆಯನ್ನು ಉದ್ದೇಶಿಸಿ ಮಾತನಾಡಿ ಸಂಸ್ಥಾಪಕ ಅಧ್ಯಕ್ಷ ಆರ್. ಸಿ.ಘಾಳೆ ಯವರ ಜೊತೆ ಗೂಡಿ ದಶಕದ ಹಿಂದೆ ಸಮಾಜ ಸಂಘಟನೆ, ವಿದ್ಯಾ ಸಂಸ್ಥೆ, ಗುರು ಪೀಠ ಸ್ಥಾಪನೆ ಕಾರ್ಯಕ್ಕೆ ತನು, ಮನ, ಧನದಿಂದ ಅವರ ಜೊತೆ ಸೇವೆ ಗೈದಿದ್ದೇನೆ ಎಂದು ತಿಳಿಸಿದರು. ಪ್ರಜ್ಞಾವಂತ ಸಮಾಜ, ಸದಾ ಹಿರಿಯರನ್ನು ಗೌರವಿಸಬೇಕು ಮತ್ತು ಯಾರನ್ನು ಕಡೆಗಣಿಸಬಾರದು ಎಂದು ಕಿವಿಮಾತು ಹೇಳಿದರು.
ರಾಜ್ಯದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಜೇನವೆರಿ ವಿನೋದ ಕುಮಾರ ಮಾತನಾಡಿ ಎರಡು ದಶಕಗಳಿಂದ ಸಮಾಜ ಸಂಘಟನೆ ಸಮಾಜದ ಹೆಮ್ಮೆ ಪಡುವ ವಚನ ಸಾಹಿತ್ಯ ಪಿತಾಮಹ ಫ.ಗು. ಹಳಕಟ್ಟಿ ಯವರಿಗೆ ಸರ್ಕಾರ ಸೂಕ್ತವಾಗಿ ಪರಿಗಣಿಸಿ ಗೌರವ ನೀಡುತ್ತಿದೆ. ಮುಂದೆ ಕೂಡಾ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಮ್ಮ ಸಮಾಜ ಸಂಘಟನೆ ಮಾಡಿದರೆ ಮಾತ್ರ ನಮ್ಮ ಹಕ್ಕು, ಪ್ರಾತಿನಿಧ್ಯ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಡಾ. ಬಸವರಾಜ ಚನ್ನಾ ವಂದಿಸಿದರು, ವಿಶೇಷ ಸಭೆಯಲ್ಲಿ ರಾಜ್ಯ ಸಂಘದ ಸದಸ್ಯರಾದ ಕ್ಷೀರಾಲಿಂಗ ರೂಗಿ, ಶ್ರವಣ ಕುಮಾರ ಮುನ್ನೋಳ್ಳಿ, ಮ್ಯಾಳಗಿ ಚಂದ್ರಶೇಖರ್ ಅಲ್ಲದೆ ಸಮಾಜದ ಇತರರು ಪಾಲ್ಗೊಂಡಿದ್ದರು.
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…
ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…