ಬಿಸಿ ಬಿಸಿ ಸುದ್ದಿ

ಅತಿಸಾರ ನಿಯಂತ್ರಣಕ್ಕೆ ಡಾ. ಅಪರ್ಣಾ ಭದ್ರ ಶೆಟ್ಟಿ ಕರೆ

ಅಫಜಲಪುರ; ಅಫಜಲಪುರ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬುರ್ ಬಿ ದಲ್ಲಿ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಪೋಸ್ಟರ್ ಮತ್ತು ಬ್ಯಾನರ್. ಬಿತ್ತಿ ಪತ್ರಗಳನ್ನು ಪ್ರದರ್ಶಿಸುವ ಮುಖಾಂತರ ಸಾಂಕೇತಿಕ ಚಾಲನೆಯನ್ನು ನೂತನ ಆಡಳಿತ ವೈದ್ಯಾಧಿಕಾರಿ ಡಾ. ಅಪರ್ಣಾ ಭ್ರದಶೆಟ್ಡಿ ನೀಡಿದರು.

ತರುವಾಯ ಅತಿಸಾರ ಬೇದಿಯಿಂದ ಮಕ್ಕಳ ಮರಣವನ್ನು ನಿಯಂತ್ರಿಸಲು ಓ ಅರ್ ಎಸ್. ಮತ್ತು ಜಿಂಕ್ ಮಹತ್ವದ್ದಾಗಿದೆ. ಜಿಂಕ್ ಮಾತ್ರೆಯನ್ನು 14 ದಿನಗಳವರೆಗೆ ನೀಡಲಾಗುವುದು. ಆಶಾ ಕಾರ್ಯಕರ್ತರು ಇದರ ಬಗ್ಗೆ ಮನೆ ಮನೆ ಭೇಟಿ ನೀಡಿದಾಗ ತಾಯಂದಿರಲ್ಲಿ ಶಾಲಾ, ಅಂಗನವಾಡಿಗಳಲ್ಲಿ , ಜಾಗೃತಿ ಮೂಡಿಸಲು ಕರೆ ನೀಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯಶಿಕ್ಷಣಾಧಿಕಾರಿ ಶಶಿಧರ್ ಬಳೆ ಕಾರ್ಯಕ್ರಮದ ಉದ್ದೇಶ ಕುರಿತು ಮಾತನಾಡಿ ಈ ವರ್ಷದ ಮುಖ್ಯ ಧ್ಯೇಯ ವಾಕ್ಯ ತೀವ್ರತರ ಅತಿಸಾರ ಭೇದಿಯಿಂದ ಮಕ್ಕಳ ಮರಣವನ್ನು ಶೂನ್ಯಕ್ಕೆ ತರುವುದಾಗಿದೆ. ಅದಕ್ಕಾಗಿ ಓ ಆರ್ ಎಸ್ ಮತ್ತು ಜಿಂಕ್ ಮಾತ್ರೆಯ ಮಹತ್ವವನ್ನು ಸಾರ್ವಜನಿಕರಲ್ಲಿ ಮಾಹಿತಿ ನೀಡುವುದು ಇದರ ಉದ್ದೇಶ ಅದಕ್ಕಾಗಿ ಓ ಆರ್ ಎಸ್ ದ್ರಾವಣವನ್ನು ಮನೆಯಲ್ಲಿಯೇ ತಯಾರಿಸುವುದನ್ನು ಪ್ರತ್ಯೇಕ್ಷಿಕತೆ ಮೂಲಕ ತೋರಿಸಿಕೊಟ್ಟರು. ಹಾಗೆಯೇ ಸ್ವಚ್ಛವಾದ ಕೈಗಳನ್ನು ಆರು ವಿಧಾನಗಳ ಮೂಲಕ ತೊಳೆಯುವುದರಿಂದ ಅನೇಕ ರೋಗಗಳನ್ನು ಹಾಗೂ ನಿರ್ಜಲೀಕರಣವನ್ನು ತಡೆಗಟ್ಟಬಹುದು. ಅದನ್ನು ದೊಡ್ಡವರು ಮಕ್ಕಳು ಅಳವಡಿಸಿಕೊಳ್ಳಬೇಕಾಗಿದೆ. ಅಲ್ಲದೆ ನವಜಾತ ಶಿಶುಗಳ ಆರೈಕೆ ಮಾಡುವುದು ಹಾಗೂ ಕ್ಷಯ ಮುಕ್ತ ಮಾಡಲು ದಿನಾಂಕ 18ರಿಂದ ಡಿಸೆಂಬರ್ 2ರವರೆಗೆ ತೀವ್ರ ಕ್ಷಯರೋಗ ಪತ್ತೆ ಅಂದೋಲನ ನಡೆಯಲಿದೆ.ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಆಯುಷ್ಯ ವೈದ್ಯಧಿಕಾರಿ ಡಾ. ದೇವರಾಜ್ ಎಸ್ ಪ್ರಸಾದ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸೈಯದ್ ಅಸರ ಆಸ್ಮಿ, ರೋಜ್ಲಿನ್, ಉಷಾ, ಅಂಜುಮ್, ಸುಧಾಕರ್, ಶಹಬಾಜ, ರಾಜು , ಮಲ್ಲಮ್ಮ, ಜೈ ಭೀಮ್, ಆಶಾ ಕಾರ್ಯಕರ್ತರಾದ ಮರಿಯಮ್ಮ , ಭಾಗ್ಯಶ್ರೀ, ಪಾರ್ವತಿ, ಮಹಾಲಕ್ಷ್ಮಿ, ಅಂಬುಬಾಯಿ, ಚಾಂದಿಬಾಯಿ, ಜಿಲೇ ಕಾ ಬೇಗಂ, ಸಾರ್ವಜನಿಕರು, ತಾಯಂದಿರು, ಗರ್ಭಿಣಿಯರು, ಮಕ್ಕಳು, ಹದಿಹರಿಯದವರು ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

emedialine

Recent Posts

ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ದೊಡ್ಡಮನಿ (56) ನಿಧನ

ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ಇಂದು ಬೆಳಗ್ಗೆ ವಾಕಿಂಗ್ ಹೋದಾಗ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಲಬುರಗಿ ನಗರದ ಜೇವರ್ಗಿ…

2 mins ago

ಜೇವರ್ಗಿ: ಲಂಚಾಪಡೆಯುತ್ತಿದ್ದಾಗ ಮಹಿಳಾ ಸಿಬ್ಬಂದಿ ಲೋಕಾಯುಕ್ತರ ಬಲೆಗೆ

ಕಲಬುರಗಿ: ನೀರಿನ ಕನೆಕ್ಷನಗಾಗಿ ಹತ್ತು ಸಾವಿರ ಲಂಚಾಪಡೆಯುತ್ತಿದ್ದಾಗ ಜೇವರ್ಗಿ ಪುರಸಭೆಯ ಮಹಿಳಾ ಸಿಬ್ಬಂದಿ ಲಣೊಕಾಯುಕ್ತರ ಬಲೆಗೆ ಬಿದ್ದ ಘಟನೆ ಬುಧವಾರ…

12 hours ago

371 ಜೆ ಅಡಿ ಉದ್ಯೋಗ ನೇಮಕಾತಿ ಸಂಬಂಧದ ಗೊಂದಲ ನಿವಾರಿಸಿ ಮಾರ್ಗಸೂಚಿ ಸಿದ್ಧಪಡಿಸಲು ಸಚಿವರ ಸೂಚನೆ

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 ಜೆ ಅಡಿ ಉದ್ಯೋಗ ನೇಮಕಾತಿ ಹಾಗೂ ಬಡ್ತಿ ಸಂಬಂಧದಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಿ…

14 hours ago

ಶ್ಯಾಮರಾವ ನಾಟಿಕಾರಗೆ ಅಧ್ಯಕ್ಷರನ್ನಾಗಿ ನೇಮಕಕ್ಕೆ ಡಾ. ಮಲ್ಲಿಕಾರ್ಜುನ ಖರ್ಗೆಗೆ ಮನವಿ

ಕಲಬುರಗಿ: ಆದಿಜಾಂಬವ ಸರ್ಕಾರಿ ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ನಿಯೋಗ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ…

14 hours ago

ಚಿರಂಜೀವಿ ವೆಂಕಯ್ಯ ಕುಶಾಲ್ ಗುತ್ತೇದಾರ್ ಗೆ ಸನ್ಮಾನ

ಕಲಬುರಗಿ: ಮಾಜಿ ಸಚಿವರಾದ ಮಾಲಿಕೆಯ್ಯಾ ಗುತ್ತೇದಾರ್ ಅವರ ಅಪ್ಪಟ ಅಭಿಮಾನಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ…

14 hours ago

ಮಹಿಳಾ ಘಟಕದ ನೂತನ ಪದಾಧಿಕಾರಿಗಳ ನೇಮಕ

ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಗೌಡ ಮಾಲಿಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾ…

15 hours ago