ಜಾಗೃತ ಮತದಾರರೇ ನಿಮ್ಮನ್ನು ಮಲಗಿಸಿದ್ದಾರೆ, ನಾವು ಸದಾ ಎಚ್ಚರದಲ್ಲಿದ್ದೇವೆ; ಶಾಸಕ ಅಲ್ಲಂಪ್ರಭು ತಿರುಗೇಟು

  • ದತ್ತಾತ್ರೇಯ ಪಾಟೀಲ್‌ ರೇವೂರ್‌ ಹೇಳಿಕೆಗೆ ದಕ್ಷಿಣ ಮತಕ್ಷೇತ್ರ ಕಾಂಗ್ರೆಸ್‌ ಶಾಸಕ ಅಲ್ಲಂಪ್ರಭು ತಿರುಗೇಟು

ಕಲಬುರಗಿ: ದಕ್ಷಿಣ ಮತಕ್ಷೇತ್ರದ ಶಾಸಕರು ನಿದ್ರೆಯಿಂದ ಎದ್ದೇಳಲಿ ಎಂಬ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್‌ ಹೇಳಿಕೆಗೆ ತಿರುಗೇಟು ನೀಡಿರುವ ಹಾಲಿ ಕಾಂಗ್ರೆಸ್‌ ಶಾಸಕರಾದ ಅಲ್ಲಂಪ್ರಭು ಪಾಟೀಲರು ದಕ್ಷಿಣ ಮತಕ್ಷೇತ್ರ ಅಭಿವೃದ್ಧಿ ಕಾಣದೆ ಕಳೆದ 2 ದಶಕದಿಂದ ನಿದ್ರೆಗೆ ಜಾರಿತ್ತು, ಇಲ್ಲಿನ ಜಾಗೃತ ಮತದಾರರು ನಿಮ್ಮನ್ನು ಈ ಬಾರಿ ಮಲಗಿಸಿದ್ದಾರೆ, ನಮಗೆ ಅವಕಾಶ ನೀಡಿದ್ದಾರೆ, ಮತದಾರರ ಯೋಗಕ್ಷೇಮಕ್ಕಾಗಿ ಸದಾಕಾಲ ಎಚ್ಚರದಲ್ಲಿಯೇ ಇದ್ದೇವೆ ಎಂದು ಮಾತಿನಲ್ಲೇ ಕುಟುಕಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಶಾಸಕರು ಸುಲ್ತಾನಪುರ ಪಂಚಾಯ್ತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿನ ಕಾರ್ಮಿಕರು ಕೆಲಸಕ್ಕೆ ಹೋಗುವಾಗ ದಾರಿಯಲ್ಲಿ ಅವರು ಪಯಾಣಿಸುತ್ತಿದ್ದ ವಾಹನ ಅಪಘಾತಕ್ಕಿಡಾದ ಸುದ್ದಿ ಗೊತ್ತಾಗುತ್ತಿದ್ದಂತೆಯೇ ತಾವು ತಕ್ಷಣ ಅವರನ್ನೆಲ್ಲ ಆಸ್ಪತ್ರೆಗೆ ಸಾಗಿಸುವಂತೆ ಅಲ್ಲಿದ್ದ ಪಂಚಾಯ್ತಿ ಸಿಬ್ಬಂದಿ, ಪೊಲೀಸರಿಗೆ ಸೂಚನೆ ನೀಡದ್ದಲ್ಲದೆ ಮರುಕ್ಷಣದಲ್ಲೇ , ಗಾಯಾಳು ಕಾರ್ಮಿಕರು ದಾಖಲಾಗಿರುವ ಕಲಬುರಗಿ ಜಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿ, ಹಾಲು, ಹಣ್ಣು ಹಂಪಲು ಕೊಟ್ಟು ಬೇಗ ಗುಣಮುಖರಾಗಲು ಹಾರೈಸಿದ್ದಾಗಿ ಹೇಳಿದ್ದಾರೆ.

ಜಿಮ್ಸ್‌ ವೈದ್ಯರ ತಂಡವನ್ನೇ ಕರೆಯಿಸಿ ಕಾರ್ಮಿಕರ ಚಿಕಿತ್ಸೆಯಲ್ಲಿ ಯಾವುದೇ ತರಹದ ಲೋಪಗಳು ಆಗದಂತೆ ಎಚ್ಚರಿಕೆ ವಹಿಸುವಂತಯೂ ಖಡಕ್‌ ಸೂಚನೆ ನೀಡಿದ್ದಾಗಿ ಹೇಳಿರುವ ಶಾಸಕರು ಕಾರ್ಮಿಕರ ಅಪಘಾತ, ಅವರ ಬದುಕೇ ಸಂಕಷ್ಟದಲ್ಲಿರುವ ಇಂತಹ ಸಂದರ್ಭದಲ್ಲಿಯೂ ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ ನೀಡಿರುವ ರಾಜಕೀಯ ಪ್ರೇರಿತವಾಗಿ ಹೇಳಿಕೆಯನ್ನು ಬಲವಾಗಿ ಖಂಡಿಸಿದ್ದಾರೆ.

ಕಾರ್ಮಿಕರು ಸಂಕಷ್ಟದಲ್ಲಿದ್ದಾಗ ಮಾಜಿ ಶಾಸಕರು ಇಂತಹ ಹೇಳಿಕೆ ಯಾಕೆ ನೀಡಿದರೋ ಗೊತ್ತಿಲ್ಲ. ಮತದಾರರು ಇದನ್ನೆಲ್ಲ ಗಮನಿಸುತ್ತಾರೆ, ಯಾರಿಗೆ ಮಲಗಿಸಬೇಕು, ಯಾರಿಗೆ ಎಬ್ಬಿಸಬೇಕು ಎಲ್ಲವೂ ಮತದಾರರೇ ನಿರ್ಧಾರ ಮಾಡುತ್ತಾರೆಂದು ಅಲ್ಲಂಪ್ರಭು ಹೇಳಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಕಳೆದ 6 ತಿಂಗಳಲ್ಲಿ ನುಡಿದಂತೆ ನಡೆದಿದೆ. ಬಡವರ ಬದುಕಿಗೆ ನಮ್ಮ ಪಕ್ಷದ ಪಂಚ ಗ್ಯಾರಂಟಿಗಳು ವರವಾಗಿವೆ. ಬರಗಾಲದಲ್ಲಿಯೂ ಜನರಿಗೆ ಕೈತುಂಬ ಉದ್ಯೋಗ ನೀಡುತ್ತಿರುವ ಖಾತ್ರಿ ಯೋಜನೆ ಕಾಂಗ್ರೆಸ್‌ ನೇತೃತ್ವದ ಯೂಪಿಎ ಸರಕಾರದ ಕೊಡುಗೆ. ಹೀಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸದಾಕಾಲ ಸಾಮಾನ್ಯ ಜನರ, ಕಾರ್ಮಿಕರ ಕಲ್ಯಾಣದ್ದೇ ಚಿಂತೆ. ಜನರ ಹಿತಾಸಕ್ತಿ ಕಾಪಾಡುವಲ್ಲಿ ಕಾಂಗ್ರೆಸ್‌ ಪಕ್ಷ ಹಾಗೂ ತಾವು ಸದಾ ಮುಂದಿರೋದಾಗಿ ಶಾಸಕರಾದ ಅಲ್ಲಂಪ್ರಭು ಪಾಟೀಲರು ಸ್ಪಷ್ಟಪಡಿಸಿದ್ದಾರೆ.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

4 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

7 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

11 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

12 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

14 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420