ಮತ್ತೊಂದು ನೇಮಕಾತಿ ಹುದ್ದೆಗಳಲ್ಲಿ ಅಕ್ರಮದ ಆರೋಪ: ತನಿಖೆಗೆ ಮಾನಪಡೆ ಆಗ್ರಹ

ಕಲಬುರಗಿ: ತಾಂತ್ರಿಕೇತರ ವೃಂದದ ಸಮಾಜ ಕಲ್ಯಾಣ ಇಲಾಖೆಯಲ್ಲಿನ ವಿದ್ಯಾಥಿ ನಿಲಯದ ವಾರ್ಡ್‍ನಗಳ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಈ ಕುರಿತು ಸರಕಾರ ಕೂಡಲೇ ತನಿಖೆ ಕೈಗೊಂಡು ನೇಮಕಾತಿ ಪಟ್ಟಿಯನ್ನು ತಡೆಹಿಡಿಯಬೇಕೆಂದು ಕಾ. ಮಾರುತಿ ಮಾನಪಡೆಯವರ ಅಬಿಮಾನಿಗಳ ಸೇವಾ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ-ಕಾರ್ಮಿಕ ಯುವಜನ ಸೇವಾ ಸಂಘದ ಸುನೀಲ ಮಾನಪಡೆಯವರು ಆಗ್ರಹಿಸಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕರ್ನಾಟಕ ಲೋಕಸೇವಾ ಆಯೋಗ ಬೆಂಗಳೂರು ಅದಿಸೂಚನೆ ಪಿಎಸ್‍ಸಿ 14 ಆರ್.ಟಿ.(4)ಬಿ-1-2020ಯಂತೆ 140 ವಾರ್ಡನ್‍ಗಳ ನೇಮಕಾತಿಗೆ ಉಳಿಕೆ ಮೂಲವೃಂದದ 80 ಮತ್ತು ಹೈದ್ರಾಬಾದ ಕರ್ನಾಟಕ ವೃಂದದ 60 ಒಟ್ಟು 140 ಹುದ್ದಗಳಿಗೆ ಅದಿಸೂಚನೆ ಹೊರಡಿಸಿತು. ಅಂತೆಯೇ 2020ರಲ್ಲಿ ಪರೀಕ್ಷೆ ನಡೆದು 2023ರ ಆ. 11ರಂದು ಅಂತಿಮಪಟ್ಟಿ ಬಿಡುಗಡೆ ಮಾಡಿದೆ, ಆದರೆ ಈ ನೇಮಕಾತಿ ಪಟ್ಟಿಯಲ್ಲಿ ಪಿಎಸ್‍ಐ ನೇಮಕಾತಿಯಂತೆ ಅಭ್ಯರ್ಥಿಗಳ ನೊಂದಣಿ ಸಂಖ್ಯೆ ಗಮನಿಸಿದಾಗ ಒಂದೇ ತಾಲೂಕಿನ 17ಕ್ಕೂ ಹೆಚ್ಚು ಅಭ್ಯರ್ಥಿಗಳು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ನೋಡಿದರೆ ಜೊತೆಗೆ ಇವರೆಲ್ಲರ ನೊಂದಣಿ ಸಂಖ್ಯೆಯಲ್ಲೂ ಸಹ ಅಕ್ಕಪಕ್ಕದಲ್ಲಿಯೇ ಇರುವುದು ಗಮನಿಸಿದರೆ ಇದರಲ್ಲಿ ಅಕ್ರಮದ ವಾಸನೇ ನೇರವಾಗಿ ಕಂಡು ಬರುತ್ತಿದೆ ಎಂದು ಆರೋಪಿಸಿದ್ದಾರೆ.

ಉಳಿಕೆ ಮೂಲ ವೃಂದದ ಹುದ್ದೆಗಳಿಗೆ ಸಾಮಾನ್ಯವಾಗಿ ಅದೇ ಭಾಗದ ಅಭ್ಯರ್ಥಿಗಳು ಆಯ್ಕೆಯಾಗುವುದು ಸಹಜ. ಆದರೆ ಪ್ರಸ್ತುತ ವಾರ್ಡ್‍ನ್ ಆಯ್ಕೆಪಟ್ಟಿ ಅವಲೋಕಿಸಿದಾಗ ಉಳಿಕೆ ಮೂಲ ವೃಂದ್ರ 80 ಹುದ್ದೆಗಳ ಪಟ್ಟಿಯಲ್ಲಿ ಶೇ. 50ರಷ್ಟು ಹೈದ್ರಾಬಾದ ಕರ್ನಾಟಕದ್ದು ಅದರಲ್ಲೂ ಹೆಚ್ಚಿನವರು ಅ¥sುಜಲಪೂರ ತಾಲೂಕಿನವರಾಗಿದ್ದು, ಈ ಅಭ್ಯರ್ಥಿಗಳ ನೊಂದಣಿ ಸಂಖ್ಯೆ ಗಮನಿಸಿದರೆ ಇವರೆಲ್ಲರೂ ಒಂದೇ ಪರೀಕ್ಷಾ ಕೆಂದ್ರದಲ್ಲಿ ಪರೀಕ್ಷೆ ಬರೆದಿರುವುದು ಗೊತ್ತಾಗುತ್ತದೆ ಎಂದು ದೂರಿದ್ದಾರೆ.

ಕೂಡಲೇ ಈ ಕುರಿತು ಸಮಗ್ರ ತನಿಖೆಯಾಗಬೇಕು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಂತಪ್ಪ ಸಣ್ಣೂರ, ಸೋಮಶೇಖರ ಸಿಂಗೆ, ಸಿದ್ದಲಿಂಗ ಪಾಳಾ, ಅಶೋಕ ಪಾಟೀಲ ಇದ್ದರು.

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

3 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

3 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

3 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

3 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

3 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

3 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420