ಶಹಾಬಾದ : ಸತತ ಪ್ರಯತ್ನ, ನಿರಂತರ ಅಧ್ಯನದಿಂದ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಹೈದ್ರಬಾದ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ವಿನಯ್ ಪಾಟೀಲ ಹೇಳಿದರು.
ಅವರು ಸೋಮವಾರ ಎಸ್.ಎಸ್. ಮರಗೋಳ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಪುನಶ್ಚೇತನÀ ಹಾಗೂ ಬಿಎ, ಬಿಕಾಂ, ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕಾದರೆ ಕಠಿಣ ಪರಿಶ್ರಮ ಪಡಲೇಬೇಕು.ಕೈಕಟ್ಟಿ ಕುಳಿತರೇ ಗುರಿ ಮುಟ್ಟಲು ಸಾಧ್ಯವಿಲ್ಲ.ಆದ್ದರಿಂದ ವ್ಯಕ್ತಿ ಗುರಿ ಮುಟ್ಟಲು ನಿರಂತರ ಅಧ್ಯಯನ ಮಾಡಬೇಕು.ವಿದ್ಯೆ ಯಾವಾಗಲೂ ಸಾಧಕರ ಸ್ವತ್ತು.ಅದನ್ನು ಅರಿತು ಉತ್ತಮ ಅಧ್ಯಯನ ಮೂಲಕ ಸಾಧನೆ ತೋರಿದಾಗ ಮಾತ್ರ ಕಲಿತ ಕಾಲೇಜಿಗೆ, ಕಲಿಸಿದ ಉಪನ್ಯಾಸಕರಿಗೆ ಹಾಗೂ ಜನ್ಮ ನೀಡಿದ ತಂದೆ-ತಾಯಿಗಳಿಗೆ ಕೀರ್ತಿ ಬರುತ್ತದೆ ಎಂದು ಹೇಳಿದರಲ್ಲದೇ, ಮರಗೋಳ ಕಾಲೇಜು ತನ್ನ ಹಿಂದಿನ ಹಳೆ ವೈಭವವನ್ನು ಮರುಕಳಿಸುತ್ತಿದೆ. ಪ್ರಾಂಶುಪಾಲರಾದ ಪೆÇ್ರೀ. ಕೆ.ಬಿ.ಬಿಲ್ಲವ ಅವರ ಅವಿರತ ಶ್ರಮದಿಂದ ಕಾಲೇಜಿನಲ್ಲಿ ಹೆಚ್ಚಿನ ಪ್ರವೇಶಾತಿ ಪಡೆದಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಪ್ರಾಂಶುಪಾಲರಾದ ಪೆÇ್ರೀ. ಕೆ. ಬಿ. ಬಿಲ್ಲವ, ಈ ವರ್ಷ 462 ವಿದ್ಯಾರ್ಥಿಗಳು ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿದ್ದಾರೆ. ಇವರಿಗಾಗಿ ನಮ್ಮ ಸಂಸ್ಥೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಿದೆ. 33ಸಾವಿರ ಪುಸ್ತಕಗಳನ್ನು ಹೊಂದಿರುವ ದೊಡ್ಡ ಗ್ರಂಥಾಲಯ ನಮ್ಮ ಕಾಲೇಜಿನಲ್ಲಿದೆ.ಪ್ರಯೋಗಶಾಲೆ, ಆಟದ ಮೈದಾನ, ಸುಸಜ್ಜಿತ ಕಟ್ಟಡ ಸೇರಿದಂತೆ ಉತ್ತಮ ಉಪನ್ಯಾಸಕರ ವೃಂದ ಹೊಂದಿದೆ.ಅದರ ಸದುಪಯೋಗ ಪಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಉತ್ತಮ ಕಲಿಕೆಯಲ್ಲಿ ತೊಡಗಿ ಸಾಧನೆ ಮಾಡಬೇಕು ಎಂದು ಹೇಳಿದರು.
ಹೈ-ಕ ಸಂಸ್ಥೆಯ ಅಜೀವ ಸದಸ್ಯ ಸುಭಾಷ ಚಂದ್ರ ಇಂಗಿನಶೆಟ್ಟಿ ಮಾತನಾಡಿದರು. ಹೈ-ಕ ಸಂಸ್ಥೆಯ ಮಾಜಿ ಸದಸ್ಯ ಅನಿಲಕುಮಾರ ಮರಗೋಳ, ಮಲ್ಲಿಕಾರ್ಜುನ ಇಂಗಳೇಶ್ವರ, ಹರ್ಷದ ಮರ್ಚಂಟ್, ಡಾ. ಇನಾಮದಾರ, ಪೆÇ್ರೀ. ಚಂದ್ರಕಾಂತ.ಡಿ.ಎಸ್ ವೇದಿಕೆಯ ಮೇಲಿದ್ದರು.
ಈ ಸಂಧರ್ಭದಲ್ಲಿ ಡಾ. ಬಸವರಾಜ ಹಿರೇಮಠ, ಪೆÇ್ರೀ. ಎಮ್.ಕೆ. ಬೋತಗಿ, ಶ್ರೀಮಂತ ದೊಡ್ಡಮನಿ, ಶಿವಕುಮಾರ ಕುಸಾಳೆ, ಮಹ್ಮದ ಇರ್ಫಾನ್ ಹಾಗೂ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಲಕ್ಷ್ಮಣ ಟಿ. ಸ್ವಾಗತಿಸಿದರು, ಗುರುಲಿಂಗಪ್ಪ ತುಂಗಳ ನಿರೂಪಿಸಿದರು, ಶಿವಶಂಕರ ಹಿರೇಮಠ ವಂದಿಸಿದರು.
ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಮಟ್ಟದ ಕ್ರಿಕೆಟ್ನಲ್ಲಿ ಸಾಧನಗೈದ ಚೈತನ್ಯ ಮತ್ತು ಅಂಬಾದಾಸ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಮರಗೋಳ ಕಾಲೇಜು ತನ್ನ ಹಿಂದಿನ ಹಳೆ ವೈಭವವನ್ನು ಮರುಕಳಿಸುತ್ತಿದೆ.ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆಗೈಯುತ್ತಿದ್ದಾರೆ. ಪ್ರಾಂಶುಪಾಲ ಪೆÇ್ರೀ. ಕೆ.ಬಿ.ಬಿಲ್ಲವ ಅವರ ಅವಿರತ ಶ್ರಮದಿಂದ ಕಾಲೇಜಿನಲ್ಲಿ ಹೆಚ್ಚಿನ ಪ್ರವೇಶಾತಿ ಪಡೆದಿರುವುದಕ್ಕೆ ಸಂತೋಷವಾಗಿದೆ. ಸಂಸ್ಥೆ ಎಲ್ಲಾ ರೀತಿಯ ನೆರವು ನೀಡಲು ಮುಂದೆ ಬರುತ್ತದೆ. ಆದರೆ ಉತ್ತಮ ಫಲಿತಾಂಶ ತರುವುದು ಉಪನ್ಯಾಸಕರ ಹಾಗೂ ವಿದ್ಯಾರ್ಥಿಗಳ ಮೇಲಿದೆ. -ವಿನಯ ಪಾಟೀಲ
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ. ಯಾದಗಿರಿ. ಬೀದರ್. ಕೊಪ್ಪಳ. ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸ್ಲಂ ನಿವಾಸಿಗಳ ಕುಟುಂಬ 1ಲಕ್ಷ…
ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದಲ್ಲಿ ಮಂಗಳವಾರದಂದು, ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ವಿವಿಯ ಧ್ವಜಸ್ಥಂಭದಲ್ಲಿ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಧ್ವಜಾರೋಹಣ…
ಕಲಬುರಗಿ : ಐತಿಹಾಸಿಕ ವಿಶೇಷ ಸಂಪುಟ ಸಭೆ ಯಲ್ಲಿ ಕರ್ನಾಟಕ ವಖ್ಫ್ ಬೋರ್ಡ್ ವತಿಯಿಂದ ರಾಜ್ಯದ ಹದಿನೈದು ಜಿಲ್ಲೆಗಳಲ್ಲಿ ಮಹಿಳಾ…
ಕಲಬುರಗಿ: ಬರುವ ಸೆಪ್ಟೆಂಬರ್ 22 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳೊಂದಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು…
ಕಲಬುರಗಿ: ಅಮೇರಿಕಾದ ಪ್ರವಾಸದಲ್ಲಿ ತಾವು ಯಾರನ್ನೂ ಭೇಟಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು. ಸಚಿವ ಸಂಪುಟದ ಸಭೆಯಲ್ಲಿ ಪಾಲ್ಗೊಳ್ಳಲು…
ಕಲಬುರಗಿ: ನಾಗಮಂಗಲದ ಅಹಿತರ ಘಟನೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು, ತನಿಖಾ ವರದಿ ನಂತರ ಮುಂದಿನ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು…