ಕಲಬುರಗಿ: ನಗರ ಹೊರವಲಯದ ಸೇಡಂ ರಸ್ತೆಯ ಸಣ್ಣೂರ-ಬೆಣ್ಣೂರ್ ಗ್ರಾಮಗಳ ಸೀಮಾಂತರದಲ್ಲಿರುವ ಸದ್ಗುರು ರೂಪರಹಿತ ಮಾತಾ ಮಾಣಿಕೇಶ್ವರಿ ಅಮ್ಮನವರ ಆಶ್ರಮದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಮತ್ತು ಧಾರ್ಮಿಕ ಸಭೆ ಬಹುವಿಜೃಂಭಣೆಯಿಂದ ಜರುಗಿತು.
ಆಶ್ರಮದ ಪೂಜ್ಯರಾದ ಭಾರದ್ವಾಜ ಸ್ವಾಮೀಜಿ ನೇತೃತ್ವದಲ್ಲಿ ತೋನಸನಹಳ್ಳಿ(ಎಸ್) ಶಿವಸಾಯಿ ಸಂಸ್ಥಾನ ಮಠದ ಪೂಜ್ಯ ಶರಣ ಕೊತ್ತಲ್ಲಪ್ಪ ಮುತ್ತ್ಯಾ, ಪೇಠ ಶಿರೂರಿನ ಶ್ರೀಮಠದ ಪೂಜ್ಯ ಸಿದ್ಧಲಿಂಗ ಸ್ವಾಮೀಜಿ, ಕಲ್ಲಬೆನ್ನೂರಿನ ಬಸವರಾಜಪ್ಪ ಸ್ವಾಮಿ, ಯಾನಾಗುಂದಿ ಮಾತಾ ಮಾಣಿಕೇಶ್ವರಿ ಆಶ್ರಮದ ಅಮರಾವತಿ, ತುಳಜಮ್ಮ ಮಾತಾ, ದಂಡೋತಿಯ ಜಯಶ್ರೀ ಮಾತಾ ಸೇರಿ ಅನೇಕ ಹರ ಗುರು ಚರಮೂರ್ತಿಗಳು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಜಿಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್, ನಿವೃತ್ತ ಡಿವೈಎಸ್ಪಿ ಸಿದ್ರಾಮಪ್ಪ ಸಣ್ಣೂರಕರ್, ಹೈದರಾಬಾದ್ನ ಪಟ್ಟಾಭಿ, ತಾಪಂ ಮಾಜಿ ಸದಸ್ಯ ನಾಮದೇವ ರಾಠೋಡ, ಸಣ್ಣೂರ ಗ್ರಾಪಂ ಮಾಜಿ ಅಧ್ಯಕ್ಷ ಪರಮೇಶ್ವರ ದಂಡಿನಕರ್, ಗ್ರಾಪಂ ಉಪಾಧ್ಯಕ್ಷ ರಾಜು ಕಲ್ಲಬೆನ್ನೂರ್, ಸಂಘಟಕ ಮಹೇಶ ನಾಟೀಕಾರ, ಕುಸನೂರ ಜಿಪಂ ಕಾಂಗ್ರೆಸ್ ಮುಖಂಡ ರಾಜು ಚವ್ಹಾಣ, ಕಾಳನೂರ ತಾಪಂ ಕ್ಷೇತ್ರದ ಮುಖಂಡ ಜೀತೇಂದ್ರ ಚವ್ಹಾಣ, ನಾಗಣ್ಣ ನಾಯಿಕೋಡಿ, ಮಾಳಪ್ಪ ಪೂಜಾರಿ, ಚಂದ್ರು ಪೂಜಾರಿ, ಬಂಡಪ್ಪ ಪೂಜಾರಿ, ಭೀಮರಾಯ ವೆಂಕಟಬೆನ್ನೂರ್, ಸಂಗಮ್ಮ ತಾಯಿ, ಜಗದೇವಿ ಬೀದರ, ಪಾರ್ವತಿಬಾಯಿ, ಗ್ರಾಪಂ ಮಾಜಿ ಅಧ್ಯಕ್ಷ ತೇಜಪ್ಪ ಹರಸೂರ, ರಘುವಿರಸಿಂಗ್, ಸಂತೋಷಮ್ಮ ಮಾತಾ, ಸೇರಿದಂತೆ ಹರಸೂರ, ಪೇಠಶಿರೂರ, ಬೆಣ್ಣೂರ, ಸಣ್ಣೂರ, ಮಾಲಗತ್ತಿ ಗ್ರಾಮದ ಸದ್ಭಕ್ತರು ಪಾಲ್ಗೊಂಡಿದರು. ಪ್ರೊ. ಶಿವರಾಜ ಪಾಟೀಲ್ ನಿರೂಪಿಸಿದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…