ಶಹಾಪುರ: ವಿದ್ಯುತ್ ಸರಬರಾಜು ಮಾಡಲೆಂದು ಹೊಲಹೊಂದರಲ್ಲಿ ವಿದ್ಯುತ್ ಕಂಬವನ್ನು ಹತ್ತಿದ್ದ ಲೈನಮ್ಯಾನೊರ್ವನಿಗೆ ವಿದ್ಯುತ್ ತಂತಿ ಸ್ಪರ್ಶಗೊಂಡು ಸಾವನ್ನಪ್ಪಿದ ಘಟನೆ ಶಹಾಪುರ ತಾಲುಕಿನ ಹಯ್ಯಾಳ ಬಿ ಗ್ರಾಮದಲ್ಲಿ ನೆಡದಿದೆ.
ಚಂದ್ರಶೇಖರ ತಂದೆ ಸಂಗನಗೌಡ ಪಾಟೀಲ್(24), ಉಕ್ಕಿನಾಳ ನಿವಾಸಿಯಾದ ಇತನೆ ಮೃತಪಟ್ಟ ದುರ್ದೈವಿ. ಕಳೆದ ಎರೆಡು ಮೂರು ವರ್ಷಗಳಿಂದ ಜೆಸ್ಕಾಮ ಇಲಾಖೆಯಲ್ಲಿ ಲೈನಮ್ಯಾನ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದ್ದು ಎಂದಿನಂತೆ ಚಂದ್ರಶೇಖರ ತನ್ನ ಕರ್ತವ್ಯಕ್ಕೆ ಹಾಜರಿಯಾಗಿದ್ದಾನೆ.
ನೆರೆಯ ಹಾವಳಿಯಿಂದ ತತ್ತರಿಸಿದ್ದ ನದಿ ತಟದ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಜನರು ಪರದಾಡುವಂತಾಗಿದ್ದಾಗ ಅನೇಕ ಕಡೆಗಳಲ್ಲಿ ಹೊಲಗಳಲ್ಲಿ ನಿಲುಗಡೆ ಮಾಡಲಾಗಿದ್ದ ಕಂಬಗಳ ತಂತಿ ಮುಗಚಿಕೊಂಡು ಬಿದ್ದಿದ್ದರಿಂದ, ಶಹಾಪುರ ಜೆಸ್ಕಾಮ ಇಲಾಖೆಯವರು ಇಲ್ಲಿನ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ನಿಡುವ ಸದುದ್ದೇಶದಿಂದ ಹಲವಾರು ಜೆಸ್ಕಾಮ ಇಲಾಖೆ ಅಧಿಕಾರಿಗಳನ್ನು ಇಲ್ಲಿನ ಕರ್ತವ್ಯಕ್ಕೆ ವಹಿಸಲಾಗಿತ್ತು, ಚಂದ್ರಶೇಖರ ಲೈನಮ್ಯಾನರವರು ಹೈಯಾಳ ಬಿ ಗ್ರಾಮದ ಹೊರಹೊಲಯದ ಹೊಲಯೊಂದರಲ್ಲಿ ವಿದ್ಯುತ್ ಕಂಬವನ್ನು ಹತ್ತಿಕೊಂಡು ವಿದ್ಯುತ್ ತಂತಿ ಸಂಪರ್ಕ ಜೊಡಣೆ ಮಾಡುತ್ತಿದ್ದಾಗ ಅಕಸ್ಮೀಕ ವಿಧ್ಯುತ್ ಸಂಪರ್ಕದ ತಂತಿ ಸ್ಪರ್ಶದಿಂದ ಚಂದ್ರಶೇಖರ ತೀವ್ರ ಗಾಯಗೊಂಡು ಚಂದ್ರಶೇಕರ ಲೈನಮ್ಯಾನನನ್ನು ಶಹಾಪುರ ಆಸ್ಪತ್ರೆಗೆ ಕರೆ ತರಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಚಂದ್ರಶೇಖರ ಸಾವನ್ನಪಿದ್ದಾನೆ.
ಶಹಾಪುರ ಜೆಸ್ಕಾಮ ಅಧಕಾರಿಗಳು ಭೇಟಿ ನೀಡಿ ಘಟನೆ ಮಾಹಿತಿ ಪಡೆದುಕೊಂಡು ಸಂಭಂಧಪಟ್ಟ ಮೇಲಾಧಿಕಾರಿಗಳಿಗೆ ಪ್ರಸ್ತಾಪನೆ ಸಲ್ಲಿಸುವದಾಗಿ ತಿಳಿಸದರು. ಈ ಕುರಿತು ಶಹಾಪುರ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…