ಕಲಬುರಗಿ: ಕರ್ನಾಟಕ ಸಮತಾ ಸೈನಿಕದಳ ಕೆಎಸ್ಎಸ್ಡಿ ಕಲಬುರಗಿ ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ಮಹಿಳಾ ಘಟಕ ಸಂಯುಕ್ತಾಶ್ರಯದಲ್ಲಿ ವಿಶ್ವರತ್ನ, ಮಹಾಮಾನವತಾವಾದಿ, ಡಾ” ಬಾಬಾ ಸಾಹೇಬ ಅಂಬೇಡ್ಕರ್ ಅವರ 67 ನೇ ಮಹಾ ಪರಿನಿರ್ವಾಣ ದಿನಾಚರಣೆಯನ್ನು ನಗರದ ಅಕ್ಕಮಹಾದೇವಿ ಹೌಸಿಂಗಬೋರ್ಡ ಕಾಲೋನಿ ಹೈ ಕೋರ್ಟ ಎದುರುಗಡೆ ಇವರುವ (ಬುದ್ಧಿಮಾಂದ್ಯ) ಮಕ್ಕಳ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.
ಮಹಾನಗರ ಪಾಲಿಕೆ ಸದಸ್ಯೆ ಪಾರ್ವತಿ ರಾಜು ಧರಗಿ ಇವರು ಡಾ” ಬಾಬಾ ಸಾಹೇಬ ಅಂಬೇಡ್ಕರ್ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಲ್ಲಾ ಕಾರ್ಯದರ್ಶಿ ಅಪ್ಪಾರಾವ ಎಸ್ ಭಾವಿಮನಿ ವಕೀಲರು ಕಾರ್ಯಕ್ರಮ ನಿರೂಪಣೆ ಮಾಡಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಉದಯಕರ ಬುದ್ಧ ವಂದನೆ ಪ್ರಾಥ9ನಾಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆಯನ್ನು ಶಾಲಾ ಮುಖ್ಯಸ್ಥರಾದ ಮಹೇಶ್ವರಿ ಬಾಳಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ” ದೇವಿಂದ್ರಪ್ಪ ಕಮಲಾಪೂರ, ಎಂ ಎನ್ ಸುಗಂಧಿ ರಾಜಾಪುರ, ಶಿಕ್ಷಕಿಯರಾದ ಗೀತಾ ಭರಣಿ ಮತ್ತು ಇನ್ನೊಬ್ಬ ಶಿಕ್ಷಕಿಯಾದ ಡಾ”ಕಾವೇರಿ ಮೇಡಂ ಹಾಗೂ ಮಲ್ಲಿಕಾರ್ಜುನ ಸಿಂಗೆ ಡಾ”ಅಂಬೇಡ್ಕರವರ ಕುರಿತು ಕೂಲಂಕುಶವಾಗಿ ಮಾತನಾಡಿದರು.
ಕೆಎಸ್ಎಸ್ಡಿ ವಿಭಾಗೀಯ ಉಪಾಧ್ಯಕ್ಷರಾದ ಮಲ್ಲಣ್ಣ ಪೂಜಾರಿ ಹಾಗೂ ಹಣಮಂತರಾಯ ದೊರೆ ಅತಿಥಿಗಳಾಗಿ ಆಗಮಿಸಿದರು. ವಿಭಾಗೀಯ ಅದ್ಯಕ್ಷರಾದ ಸಂಜೀವ ಟಿ ಮಾಲೆರವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳಿಗೆ ಸ್ವಾಗತಿಸಿದರು.ಮಹಾದೇವ ನಾಟಿಕರ ವಕೀಲರು ವಂದನಾರ್ಪಣೆ ಮಾಡಿದರು.
ಸಭೆಯಲ್ಲಿ ಹಿರಿಯರಾದ ಅಮೃತರಾವ ನಾಯಕೊಡಿ, ಜಿಲ್ಲಾಧ್ಯಕ್ಷರಾದ ಈರಣ್ಣ ಜಾನೆ, ರೇವಣಸಿದ್ದಪ್ಪ ಅಲಂಕಾರ, ಶರಣಪ್ಪ ಬಾಪುನಗರ, ಜಿಲ್ಲಾ ಕಾರ್ಮಿಕ ಘಟಕದ ಅದ್ಯಕ್ಷರಾದ ವಿಜಯಕುಮಾರ ಉದಯಕರ, ಜಿಲ್ಲಾ ಮಹಿಳಾ ಪದಾಧಿಕಾರಿಗಳಾದ ಶಿವಲಿಂಗಮ್ಮ ಸಾವಳಗಿ, ಯಶೋದಾ ಕುಸನೂರ, ಇಂದುಬಾಯಿ ಭರತನೂರ, ಶಿಲ್ಪಾ ಕಾಂಬಳೆ, ಸೇಡಂ ತಾಲೂಕ ಅದ್ಯಕ್ಷ ಖತಲಪ್ಪ ಕಟ್ಟಿಮನಿ, ಕಾವೇರಿ ಗೋರಂಪಳ್ಳಿ, ರೇಣುಕಾ ಗೋರಂಪಳ್ಳಿ ,ಲಲಿತಾ ಬಿಲಕರ ಹಾಗೂ ಸಂಸ್ಥೆಯ ಸಿಬ್ಬಂದಿಗಳಾದ ಮಹೇಶ ಮಾಸ್ಟರ್, ಸೋಮಯ್ಯ, ಬಸಮ್ಮ, ಶೋಭಾ, ಮಲ್ಲಿಕಾ ಮಠಪತಿ ಮತ್ತು ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು. ನಂತರ ಮಕ್ಕಳಿಗೆ ಕ್ರಮವಾಗಿ ಗಣ್ಯರಿಂದ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…