ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಜಮಾತೆ-ಇ-ಉಲಮಾ ಹಿಂದ್ ಶಾಖೆಯ ಪದಾಧಿಕಾರಿಗಳು ಹಾಗೂ ಚಿಂಚೋಳಿಯ ಮುಸ್ಲಿಮರು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸ್ವಾಮಿ ನರಸಿಂಹಾನಂದ ಸರಸ್ವತಿ ಅವರು ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರನ್ನು ಅವಮಾನಿಸಿದ್ದಾರೆ, ಮುಸ್ಲಿಮರು ಮತ್ತು ಭಾರತದ ಶಾಂತಿಪ್ರಿಯ ಜನರ ಭಾವನೆಗಳಿಗೆ ಜಾತಿ ಮತ್ತು ಸಮುದಾಯವನ್ನು ಲೆಕ್ಕಿಸದೆ ನೋವುಂಟು ಮಾಡಿದ್ದಾರೆ.
ನಮ್ಮ ದೇಶದ ಕೋಮು ಸೌಹಾರ್ದತೆಯನ್ನು ಕದಡಲು ಮತ್ತು ರಾಷ್ಟ್ರೀಯ ಸಮಗ್ರತೆಗೆ ಹಾನಿ ಉಂಟುಮಾಡಲು ಯತ್ನಿಸಿರುವ ಸ್ವಾಮಿ ನರಸಿಂಹಾನಂದ ಸರಸ್ವತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಪ್ರಮುಖರು ಒತ್ತಾಯಿಸದರು.
ಸೈಯದ್ ಅಕ್ಟರ್ ಹುಸೇನಿ ಬಡಿ ದರ್ಗಾ, ಮುಫ್ತಿ ಅಬ್ದುಲ್ ಆಹಾದ ಖಾಸಮಿ, ಕೆ ಎಂ ಬಾರಿ, ಅಬ್ದುಲ್ ಬಾಸಿದ,ಅನ್ವರ್ ಖತಿಬ್, ಪುರಸಭೆ ಅಧ್ಯಕ್ಷ ಆನಂದ ಟೈಗರ್,ಶಬೀರ್ ಆಹೆಮದ,ಅಬ್ದುಲ್ ಹಮಿದ ಹಾಫೀಜ್, ಮತೀನ್ ಸೌದಾಗರ್, ಹಸನೇನ ಹಾಶಮಿ,ಲಕ್ಷಮಣ ಅವುಂಟಿ, ಹಣಮಂತ್ ಪೂಜಾರಿ, ಜಗನಾಥ್ ಗುತೆದಾರ, ಅಬ್ದುಲ್ ಹಾದಿ, ಶೈಖ್ ಫರಿದ, ನುಮಾನ್ ಪಟೇಲ್, ಎಸ್ಕೆ ಮುಕ್ತಾರ್, ಖಾಲಿಲ್ ಪಟೇಲ್,ಝಿಯಾ ಉರ್ ರೆಹೇಮನ್, ಅಸ್ಲಾಂ ಬಾಗವನ, ರೆಹಮನ್ ಪಟೇಲ್,ಜಾಕಿರ್ ಪೂಲ್ಕ್ ಪಳಿ,ತೊಫೀಕ್ ಖುರೇಶಿ,ಮೊಖದುಮ್ ಜಬಾರ,ಇಸ್ಮಾಯಿಲ್ ಹಫೀಜ್ ಪೂಲ್ಕ್ ಪಳಿ, ಹಫೀಜ್ ಪಟೇಲ್, ಮೊಯಿಜ ಪಟೇಲ್, ಆಹೆಮದ್ ಬಾಗವಾನ್, ಸಮದ್ ಖಾನ್,ಮತ್ತಿತರರು ಇದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…